ಎಲ್ಲಾ ಮೊಬೈಲ್ ನಂಬರ್ 6,7,8,9 ರಿಂದ ಆರಂಭವಾಗೋದು ಯಾಕೆ? – ಇದರ ಹಿಂದಿರುವ ಗುಟ್ಟೇನು ಗೊತ್ತಾ?

ಎಲ್ಲಾ ಮೊಬೈಲ್ ನಂಬರ್ 6,7,8,9 ರಿಂದ ಆರಂಭವಾಗೋದು ಯಾಕೆ? – ಇದರ ಹಿಂದಿರುವ ಗುಟ್ಟೇನು ಗೊತ್ತಾ?

ನ್ಯೂಸ್‌ ಆ್ಯರೋ : ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದಂತೆ ಮೊಬೈಲ್ ಬಳಸುವವರ ಸಂಖ್ಯೆಯೂ ಹೆಚ್ಚುತ್ತಾ ಹೋಗಿದೆ. ಇನ್ನೂ ಮೊಬೈಲ್ ಖರೀದಿ ಮಾಡಿದರೆ ಪ್ರಮುಖವಾಗಿ ಬೇಕಾಗಿರುವುದು ಸಿಮ್ ಕಾರ್ಡ್‌. ಹೀಗಾಗಿ ಮೊಬೈಲ್​ಗೆ ಸಿಮ್​ ಅನಿವಾರ್ಯವಾಗಿದೆ.

ನಮ್ಮ ನೆಟ್‌ವರ್ಕ್‌ ಹಾಗೂ ಗ್ರಾಹಕರಿಗೆ ನೀಡುವ ಕೊಡುಗೆಗಳ ಅನುಗುಣವಾಗಿ ಸಿಮ್‌ ಅನ್ನು ಖರೀದಿಸುತ್ತೇವೆ. ಆದರೆ ನೀವು ಬಳಕೆ ಮಾಡುವ ಮೊಬೈಲ್​ ಸಿಮ್​ಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ..? ಸಾಮಾನ್ಯವಾಗಿ ಎಲ್ಲರ ಮೊಬೈಲ್​ ಸಂಖ್ಯೆಯೂ 6,7, 8 ಅಥವಾ 9 ಅಂಕೆಯಿಂದಲೇ ಆರಂಭವಾಗಿರುತ್ತದೆ. ಈ ಅಂಕೆಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ವೈಯಕ್ತಿಕ ಬಳಕೆಗಾಗಿ ಬಳಸುವ ಸಿಮ್​ಗಳು ಯಾವುದೇ ಕಂಪನಿಗೆ ಸೇರಿದ್ದರೂ ಸಹ ಅವುಗಳ ನಂಬರ್​ 6,7,8 ಅಥವಾ 9 ರಿಂದಲೇ ಆರಂಭಗೊಳ್ಳುತ್ತದೆ. ಇದರ ಹಿಂದೆ ಒಂದು ಕುತೂಹಲಕಾರಿ ಕಾರಣವಿದೆ. ಅದು ಏನೆಂದರೆ 1 ಎನ್ನುವುದು ಒಂದು ವಿಶೇಷ ಸಂಖ್ಯೆಯಾಗಿದೆ. ಈ ನಂಬರ್​ನ್ನು ಪೊಲೀಸ್​, ಅಗ್ನಿಶಾಮಕ ದಳ ಹಾಗೂ ಆಂಬ್ಯೂಲೆನ್ಸ್​ ಸೇವೆ ಸೇರಿದಂತೆ ವಿವಿಧ ತುರ್ತು ಸೇವೆಗಳ ಸಂಖ್ಯೆಯ ಆರಂಭಿಕ ಅಂಖ್ಯೆಯಾಗಿ ಬಳಕೆ ಮಾಡಲಾಗುತ್ತದೆ.

ಅದೇ ರೀತಿ 2,3,4 ಹಾಗೂ ಐದು ಕೂಡ ಸಹಾಯವಾಣಿ ಸಂಖ್ಯೆಗಳ ಆರಂಭಿಕ ನಂಬರ್​ ಆಗಿ ಬಳಕೆಯಾಗುತ್ತದೆ. ಹೀಗಾಗಿ ಸಾಮಾನ್ಯರಿಗೆ ನೀಡುವ ಮೊಬೈಲ್​ ಸಿಮ್​ಗಳು 1ರಿಂದ ಐದರವರೆಗಿನ ಆರಂಭಿಕ ಸಂಖ್ಯೆಗಳನ್ನು ಹೊಂದಿರುವುದಿಲ್ಲ. 0 ಕೂಡ ಯಾರ ಮೊಬೈಲ್​ ನಂಬರ್​ ನ ಆರಂಭಿಕ ಅಂಕೆಯ ಸ್ಥಾನವನ್ನು ಪಡೆಯುವುದಿಲ್ಲ. ಇದಕ್ಕೂ ಕೂಡ ಕಾರಣವಿದೆ.

ಏಕೆಂದರೆ ಸೊನ್ನೆಯನ್ನು ಅನೇಕ ದೂರವಾಣಿ ಸಂಖ್ಯೆಗಳಿಗೆ ಎಸ್​ಟಿಡಿ ಕೋಡ್​ ಆಗಿ ಬಳಕೆ ಮಾಡಲಾಗುತ್ತದೆ. ಭಾರತ ದೇಶದ ಕೋಡ್​ +91 ಆಗಿದ್ದು ಈ ಆರಂಭಿಕ ಸಂಖ್ಯೆಯಿಂದ ಬರುವ ಯಾವುದೇ ಕರೆಯು ಭಾರತದಲ್ಲಿ ಖರೀದಿಸಿದ ಸಿಮ್​ನಿಂದಲೇ ಆಗಿರುತ್ತದೆ ಎಂದು ನೀವು ತಿಳಿಯಬಹುದಾಗಿದೆ.

ಮೊಬೈಲ್​ ಸಿಮ್​ಗಳ ಆರಂಭಿಕ ಸಂಖ್ಯೆ ಆದರೆ ನಂತರದಿಂದಲೇ ಆರಂಭವಾಗಬೇಕು ಅಂತಾ ಯಾವುದೇ ಕಡ್ಡಾಯ ನಿಯಮಗಳಿಲ್ಲ. ಆದರೆ ಇದುವರೆಗೂ ಆ ನಿಯಮನೇ ನಡೆದುಕೊಂಡು ಬಂದಿದ್ದುಸ, ಮುಂದಿನ ದಿನಗಳಲ್ಲಿ ಇದು ಬದಲಾವಣೆಯಾಗಬಹುದು.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *