ಇಂದಿನಿಂದ ಪಡಿತರ ಅಂಗಡಿಗಳು ಬಂದ್ – ಸರ್ಕಾರದ ವಿರುದ್ಧ ಪಡಿತರ ಅಂಗಡಿ ಮಾಲಕರ ಪ್ರತಿಭಟನೆ : ಕಾರಣ ಏನು?
- ಕರ್ನಾಟಕ
- July 5, 2023
- No Comment
- 245
ನ್ಯೂಸ್ ಆ್ಯರೋ : ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯ ಜೊತೆ 5 ಕೆಜಿಯ ಹಣವನ್ನು ಫಲಾನುಭವಿಯ ಖಾತೆಗೆ ಹಾಕುವ ಘೋಷಣೆ ಮಾಡಿದ್ದು, ಇದನ್ನು ವಿರೋಧಿಸಿ ಇಂದಿನಿಂದ ನ್ಯಾಯಬೆಲೆ ಅಂಗಡಿಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.
ವರ್ತಕರ ಅಸಮಾಧಾನ
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅಕ್ಕಿ ಸಿಗದ ಕಾರಣ 5 ಕೆಜಿ ಅಕ್ಕಿಯ ಬದಲಿಗೆ ಹಣ ನೀಡಲು ನಿರ್ಧರಿಸಿದೆ. ಇದರಿಂದ ನ್ಯಾಯಬೆಲೆ ಅಂಗಡಿ ವರ್ತಕರು ಅಸಮಾಧಾನಗೊಂಡಿದ್ದಾರೆ.
ಬೇಡಿಕೆ ಏನು?
ಫಲಾನುಭವಿಗಳ ಖಾತೆಗೆ ಹಣ ಹಾಕುವ ಮೊದಲು ಸರಕಾರ ನಮ್ಮನ್ನು ಕರೆದು ಚರ್ಚೆ ಮಾಡಬೇಕಿತ್ತು. ಖಾತೆಗೆ ಹಣ ಹಾಕುವ ಬದಲು ಬೇರೆ ಬೇರೆ ಧಾನ್ಯಗಳನ್ನು ನೀಡಿ. ಹಣವನ್ನೇ ಹಾಕುವುದಾದರೆ ನಮಗೆ 10 ಕೆಜಿ ಅಕ್ಕಿಯ ಕಮಿಷನ್ ನೀಡಿ ಎಂದು ವರ್ತಕರು ಪಟ್ಟು ಹಿಡಿದಿದ್ದಾರೆ.
ಜನರಿಗೆ 5 ಕೆಜಿಗೆ ಹಣ ನೀಡಿದರೆ ನಮಗೆ ನಷ್ಟ ಆಗುತ್ತದೆ. ನಾವೇ 10 ಕೆಜಿ ಅಕ್ಕಿ ನೀಡಿದರೆ ಹೆಚ್ಚಿನ ಕಮಿಷನ್ ಸಿಗುತ್ತದೆ. ಇದೀಗ 5 ಕೆಜಿ ಅಕ್ಕಿ ಮಾತ್ರ ನೀಡಿದರೆ ಕಮಿಷನ್ ನಷ್ಟ ಆಗುತ್ತದೆ. ಇದನ್ನೇ ನಂಬಿಕೊಂಡಿರುವ ನಮಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ರಾಜ್ಯದ ಒಟ್ಟು 20 ಸಾವಿರಕ್ಕೂ ಅಧಿಕ ಪಡಿತರ ವಿತರಕರು ಇಂದಿನಿಂದ ರೇಷನ್ ವಿಲೇವಾರಿ ಮಾಡದಿರಲು ನಿರ್ಧರಿಸಿದ್ದಾರೆ.