ಮಾರುತಿ ಸುಜುಕಿ ಕಂಪನಿಯ ಬಹುನಿರೀಕ್ಷಿತ ಹೊಸ ಇನ್ವಿಕ್ಟೊ ಕಾರ್ ಬಿಡುಗಡೆ – ಇನ್ನೋವಾಗೆ ಸೆಡ್ಡು ಹೊಡೆಯಲಿರೋ ಈ ಕಾರ್ ಹೇಗಿದೆ ಗೊತ್ತಾ?

ಮಾರುತಿ ಸುಜುಕಿ ಕಂಪನಿಯ ಬಹುನಿರೀಕ್ಷಿತ ಹೊಸ ಇನ್ವಿಕ್ಟೊ ಕಾರ್ ಬಿಡುಗಡೆ – ಇನ್ನೋವಾಗೆ ಸೆಡ್ಡು ಹೊಡೆಯಲಿರೋ ಈ ಕಾರ್ ಹೇಗಿದೆ ಗೊತ್ತಾ?

ನ್ಯೂಸ್ ಆ್ಯರೋ‌ : ಮಾರುತಿ ಸುಜುಕಿ ಭಾರತದ ಕಾರು ಮಾರುಕಟ್ಟೆಯ ದೊಡ್ಡ ಹೆಸರು. ಅತೀ ಹೆಚ್ಚು ಗ್ರಾಹಕರನ್ನು ಹೊಂದುವ ಮೂಲಕ ದೇಶದಲ್ಲಿ ನಂ.1 ಸ್ಥಾನದಲ್ಲಿದೆ. ತೀವ್ರ ಪೈಪೋಟಿಯನ್ನು ಎದುರಿಸಲು ಸದಾ ಪ್ರಯೋಗಶೀಲವಾಗಿರುವ ಕಂಪೆನಿ ಇನ್ವಿಕ್ಟೊ (Maruti Invicto) ಎಂಬ ಹೊಸ ಮಾದರಿಯ ಕಾರನ್ನು ಇಂದು ಬಿಡುಗಡೆ ಮಾಡಿದೆ.

ಬೆಲೆ ಎಷ್ಟು?

ಮಾರುತಿ ಕಾರುಗಳ ಪೈಕಿ ದುಬಾರಿ ಕಾರು ಇದಾಗಿದ್ದು, ಸುಮಾರು 24.79 ಲಕ್ಷ ರೂ. ದರ ಹೊಂದಿದೆ. ಇದನ್ನು ನೆಕ್ಸಾ ರಿಟೇಲ್ ನೆಟ್ ವರ್ಕ್ ಮೂಲಕ ಮಾರಾಟ ಮಾಡಲು ಕಂಪೆನಿ ನಿರ್ಧರಿಸಿದೆ.

ವೈಶಿಷ್ಟ್ಯ

ಇದು ಟೊಯೊಟಾ ಇನ್ನೋವಾ (Toyota Innova) ಹೈಕ್ರಾಸ್ ಕಾರಿನ ಹೋಲಿಕೆ ಹೊಂದಿದೆ. ಟೊಯೊಟಾ ಮತ್ತು ಸುಜುಕಿಯ ಜಾಗತಿಕ ಒಪ್ಪಂದದ ಮೂಲಕ ಈ ಮಾದರಿಯನ್ನು ತಯಾರಿಸಲಾಗಿದೆ. ಇನ್ವಿಕ್ಟೊ ಕಾರು ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ಪವರ್ ಟ್ರೇನ್ ಆಯ್ಕೆಗಳಲ್ಲಿ ದೊರೆಯಲಿದೆ.

ಈ ಕಾರು ಪನೋರಮಿಕ್ ಸನ್ ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, 360 ಡಿಗ್ರಿ ಕ್ಯಾಮರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಹೊಂದಿದೆ. ಪೆಟ್ರೋಲ್ ಆವೃತ್ತಿ 16.13 ಕಿ.ಮೀ. ಮತ್ತು ಹೈಬ್ರಿಡ್ ಆವೃತ್ತಿ 23.24 ಕಿ.ಮೀ. ಮೈಲೇಜ್ ನೀಡಲಿದೆ.

ಕಾರಿನ ಹಿಂಭಾಗದಲ್ಲಿ ಇನ್ವಿಕ್ಟೋ ಬ್ಯಾಡ್ಜಿಂಗ್ ಜೊತೆಗೆ ಎಲ್.ಇ.ಡಿ. ಹೆಡ್ ಲ್ಯಾಂಪ್ ಇದೆ. ಇದನ್ನು ಬಿಡದಿ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ ಎನ್ನುವುದು ವಿಶೇಷ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *