ರಿಯಲ್ ಚೆಲುವಿನ ಚಿತ್ತಾರ : ದುರಂತ ಪ್ರೇಮಕಥೆಗೆ ಜಾತಿಯೇ ವಿಲನ್..!! – ಆದ್ರೆ ಇಲ್ಲಿ ಹುಚ್ಚಿಯಾಗಿದ್ದು ಮಾತ್ರ ಹುಡುಗಿ..!!

ರಿಯಲ್ ಚೆಲುವಿನ ಚಿತ್ತಾರ : ದುರಂತ ಪ್ರೇಮಕಥೆಗೆ ಜಾತಿಯೇ ವಿಲನ್..!! – ಆದ್ರೆ ಇಲ್ಲಿ ಹುಚ್ಚಿಯಾಗಿದ್ದು ಮಾತ್ರ ಹುಡುಗಿ..!!

ನ್ಯೂಸ್ ಆ್ಯರೋ : ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ನಟನೆಯ ಸೂಪರ್ ಹಿಟ್ ಚಿತ್ರ ಚೆಲುವಿನ ಚಿತ್ತಾರ ಸಿನಿಮಾವನ್ನು ಬಹುಶಃ ನೋಡಿದವರ್ಯಾರೂ ಮರೆತಿರಲಿಕ್ಕಿಲ್ಲ. ಜಾತಿ ಹಾಗೂ ಶ್ರೀಮಂತಿಕೆಯ ನಡುವೆ ಸಿಲುಕುವ ಈ ಪ್ರೇಮಕತೆಯಲ್ಲಿ ಅಂತಿಮವಾಗಿ ಯುವಕ ಪ್ರೀತಿ ಸಿಗದೆ ಹುಚ್ಚನಾಗಿ ಬೀದಿ, ಬೀದಿ ಅಲೆಯುತ್ತಾನೆ.ಈ ಚಿತ್ರದ ದುರಂತ ಪ್ರೇಮಕತೆಯನ್ನು ಕಂಡು ಅದೆಷ್ಟೊ ಜನ ದಿನಗಟ್ಟಲೆ ಅತ್ತಿದ್ದಾರೆ. ಆ ಚಿತ್ರವನ್ನೇ ನೆನಪಿಸುವಂತಹ ದುರಂತವೊಂದು ಇದೀಗ ನಡೆದಿದ್ದು, ಇಲ್ಲಿ ಹುಚ್ಚಿಯಾಗಿದ್ದು ಮಾತ್ರ ಅಮಾಯಕ ಯುವತಿ!

ಪ್ರೀತಿಗೆ ಬಿದ್ದಳು ಹದಿಹರೆಯದ ಯುವತಿ!

ಆಕೆ ಕನಸಿನ ಕಂಗಳ ಹದಿಹರೆಯದ ಯುವತಿ. ಒಮ್ಮೆ ತನ್ನ ಗೆಳತಿಯ ಮದುವೆಗೆ ಹೋಗಿದ್ದಾಗ ಆಕೆಯ ಗಂಡನ ಸಹೋದರನ ಪರಿಚಯವಾಗುತ್ತಾನೆ‌. ಹುಡುಗಿ ಚೆನ್ನಾಗಿದ್ದಾಳೆ ಎಂದು ಆತನೂ ಸ್ನೇಹ ಬೆಳೆಸಿದ. ಅನಂತರ ಇಬ್ಬರೂ ಆತ್ಮೀಯರಾದರು. ದಿನಗಟ್ಟಲೆ ಫೋನ್ ಕಾಲ್, ಚಾಟಿಂಗ್ ನಲ್ಲಿ ಮುಳುಗಿದರು. ದಿನಕಳೆದಂತೆ ಈ ಸ್ನೇಹ ಪ್ರೀತಿಗೆ ತಿರುಗಿತು. ಆಗಲೇ ಆ ಯುವತಿ ತಾನು ಕೆಳ ಸಮುದಾಯದ ಹುಡುಗಿ ಎಂದು ತಿಳಿಸಿದ್ದಳು. ಆದರೆ ಆ ಯುವಕ ಪ್ರೀತಿಗೆ ಜಾತಿಯ ಅಗತ್ಯವಿಲ್ಲ ಎಂದು ಡೈಲಾಗ್ ಹೊಡೆದು ಆಕೆಯನ್ನು ಮರಳು ಮಾಡಿ ನಂಬಿಸಿದ್ದ. ಮಾತು ನಂಬಿದ ಹುಡುಗಿ ತನ್ನ ಸರ್ವಸ್ವನ್ನೂ ಆತನಿಗೆ ಸಮರ್ಪಿಸಿ ಬಿಟ್ಟಳು. ಆದರೆ‌ ಮುಂದೆ ನಡೆದಿದ್ದೇ ದುರಂತ!

ದಾಹ ತೀರಿದಾಗ ಯುವತಿಯನ್ನು ತಿರಸ್ಕರಿಸಿದ!

ಮಗಳಿಗೆ ಮದುವೆ ವಯಸ್ಸಾಯಿತು ಎಂಬುದನ್ನರಿತ ಆಕೆಯ ಮನೆಯವರು ಮದುವೆ ಸಿದ್ಧತೆಯಲ್ಲಿರುವಾಗ ಆಕೆ ಯುವಕನೊಂದಿಗೆ ನೀನೇ ಮದುವೆಯಾಗು ಎಂದಿದ್ದಾಳೆ. ಆದರೆ ಅದಾಗಲೇ ಆತನ ಕಾಮ ದಾಹ ತೀರಿತ್ತು. ಅದೇ ಕಾರಣಕ್ಕೆ ‘ನೀನು ಕೆಳ ಜಾತಿಯ ಹುಡುಗಿ ನಿನ್ನನ್ನು ಮದುವೆಯಾಗುವುದಿಲ್ಲ’ ಎಂದು ಬಿಟ್ಟಿದ್ದಾನೆ. ಇದರಿಂದ ಧಿಗ್ಬ್ರಾಂತಗೊಂಡ ಯುವತಿ ಕೈ ಜಾರಿ ಹೋಗುತ್ತಿರುವ ಪ್ರೀತಿಯನ್ನು ಉಳಿಸಿಕೊಳ್ಳು ಶತ ಪ್ರಯತ್ನ‌ ಮಾಡಿದಳು. ಆತನ ಕೈಕಾಲು ಹಿಡಿದು ಗೋಗರೆದಳು. ‘ದೇಹ ಹಂಚಿಕೊಳ್ಳುವಾಗಿಲ್ಲದ ಜಾತಿ ಈಗೆಲ್ಲಿಂದ’ ಎಂದಳು. ಆದರೆ ಆಕೆಯ ಕಣ್ಣೀರ ಮಳೆಗೆ ಕಲ್ಲು ಹೃದಯದ ಕಾಮಿಷ್ಟ ಯುವಕ ಕರಗಲೇ ಇಲ್ಲ.

ಹುಚ್ಚಿಯಂತೆ ನರಳಿ ಸಾವಿಗೆ ಅಣಿಯಾದಳಾಕೆ!

ಯುವತಿ ಎಷ್ಟೇ ಬೇಡಿಕೊಂಡರೂ, ಅಂಗಾಲಾಚಿದರೂ ಆ ಯುವಕ ಜಾತಿಯ ಹೆಸರೆತ್ತಿ ದೂರವಾಗಿಯೇ ಬಿಟ್ಟ. ಕೈಗೆಟುಕದ ಪ್ರೀತಿಯನ್ನು ನೆನೆದು ಆಕೆ ಹುಚ್ಚಿಯಂತೆ ನರಳಿದಳು, ದಿನಗಟ್ಟಲೆ ಅತ್ತಳು. ಕೊನೆಗೊಮ್ಮೆ ದೇಹ ಒಬ್ಬನೊಂದಿಗೆ ಹಂಚಿ, ಜೀವನ ಮತ್ತೊಬ್ಬನೊಂದಿಗೆ ನಡೆಸುವುದು ಸಾಧ್ಯವೇ ಇಲ್ಲ. ಇದಕ್ಕಿಂತ ಸಾವೇ ಮೇಲು ಎಂಬ ನಿರ್ಧಾರಕ್ಕೆ ಬಂದಳು. ಅದರಂತೆ ಡೆತ್ ನೋಟ್ ನಲ್ಲಿ ‘ಪ್ರಿಯಕರ ಸುನೀಲ್ ಮಾಡಿದ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಬಗ್ಗೆ’ ಪ್ರಸ್ತಾಪಿಸಿ ಆಕೆ ನೇಣಿಗೆ ಶರಣಾದಳು.

ನ್ಯಾಯಕ್ಕಾಗಿ ಹೋರಾಡುತ್ತಿದೆ ಆ ಬಡ ಕುಟುಂಬ!

ಯುವತಿ ನೇಣಿಗೆ ಶರಣಾದಾಗಲೇ ಇದನ್ನು ಗಮನಿಸಿದ ಕುಟುಂಬಸ್ಥರು ಆಕೆ ಸಾಯುವ ಮುನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ತನ್ನ ಮಗಳಿಗಾದ ಅನ್ಯಾಯ, ನಂಬಿಕೆ ದ್ರೋಹವನ್ನು ನೆನೆದು ಆ ಪೋಷಕರು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲ ಮೇಲೆರಗಿ ಗೋಗರೆಯುತ್ತಿದ್ದಾರೆ. ಅವರ ಅಸಹಾಯಕತೆಯ ಆಕ್ರಂದನ ಮುಗಿಲು ಮುಟ್ಟುತ್ತಿದೆ‌. ಪ್ರೀತಿಯನ್ನೇ ನಂಬಿ ಆತನಿಗೆ ಎಲ್ಲವನ್ನೂ ಸಮರ್ಪಿಸಿದ ಅಮಾಯಕ ಯುವತಿ ಕೊನೆಗೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *