ಬೆಂಗಳೂರು ಕಂಬಳಕ್ಕೆ ಆಗಮಿಸಿ ತುಳುವಿನಲ್ಲೇ ಮಾತಾಡಿದ ನಟಿ ಪೂಜಾ ಹೆಗ್ಡೆ..! – ಮುಂದಿನ ವರ್ಷವೂ ಬರ್ತೇನೆಂದ ನಗುಮೊಗದ ಚೆಲುವೆ..
- ಕರ್ನಾಟಕ
- November 27, 2023
- No Comment
- 120
ನ್ಯೂಸ್ ಆ್ಯರೋ : ‘ಕಂಬಳ’ ಎನ್ನುವಂತದ್ದು ನಮ್ಮ ಕರಾವಳಿ ಮಣ್ಣಿನ ಜನಪ್ರಿಯ ಕ್ರೀಡೆ.ಈ ಕ್ರೀಡೆಯ ಬಗ್ಗೆ ನಡೆದ ವಿರೋಧಗಳೆಷ್ಟು, ನಡೆಸಿದ ಹೋರಾಟ, ಪ್ರತಿಭಟನೆಗಳೆಷ್ಟೊ. ಕೊನೆಗೂ ತೀರ್ಪು ಮಾತ್ರ ಕಂಬಳದ ಕಡೆಗೇ ಹಸಿರು ನಿಶಾನೆ ತೋರಿಸಿತ್ತು. ಇನ್ನೇನೋ ಕಂಬಳದ ಸೀಸನ್ ಶುರುವಾಗಿಬಿಟ್ಟಿದೆ. ನಮ್ಮ ಮಣ್ಣಿನ ಸೊಗಡಿನ ಈ ಕ್ರೀಡೆಯನ್ನು ಸಿಲಿಕಾನ್ ಸಿಟಿಯಲ್ಲೂ ನಡೆಸುವಲ್ಲಿ ಕಂಬಳ ಸಂಘಟಕರು ಯಶಸ್ವಿಯಾದ್ರು. ಈ ಕಂಬಳ ಕಾರ್ಯಕ್ರಮಕ್ಕೆ ಅನೇಕ ಸಿನಿಮಾ ಸೆಲೆಬ್ರಿಟಿಗಳು ಕೂಡಾ ಭಾಗವಹಿಸಿದ್ರು.
ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ ನಡೆಯುತ್ತಿದ್ದು ನಿನ್ನೆ 2ನೇ ದಿನಕ್ಕೆ ಕಾಲಿಟ್ಟಿತ್ತು. ಹಲವಾರು ನಟ-ನಟಿಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಾಲಿವುಡ್ ನಟಿ ಪೂಜಾ ಹೆಗ್ಡೆ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ಚೆಂದಗಾಣಿಸಿಕೊಟ್ಟಿದ್ದಾರೆ.
ಕಂಬಳದ ವೇದಿಕೆ ಆಗಮನಿಸಿದ ನಟಿ ಪೂಜಾ ಹೆಗ್ಡೆ ನೆರೆದಿದ್ದ ವೀಕ್ಷಕರನ್ನು ಕುರಿತು ತುಳುವಿನಲ್ಲಿ ಮಾತನಾಡಿದ್ದಾರೆ. ‘ನಾನು ಮೊದಲ ಬಾರಿಗೆ ಕಂಬಳ ನೋಡ್ತಾ ಇದ್ದೇನೆ. ಪ್ರಕಾಶ್ ಅಣ್ಣ ಕರೆದಿದ್ದಕ್ಕೆ ಥ್ಯಾಂಕ್, ನನ್ನ ಪ್ರೀತಿಯ ದೊಡ್ಡಪ್ಪ ಕೂಡ ಇದ್ದಾರೆ. ನಮ್ಮ ಒಂದು ಹೆಮ್ಮೆ ಇದು. ಕರ್ನಾಟಕದಿಂದ ವಿಶ್ವದಾದ್ಯಂತ ಹೋಗಬೇಕು. ಇದು ನಮ್ಮ ಸಂಸ್ಕೃತಿಯಲ್ಲಿ ಇದೆ.
ಈ ಪಂದ್ಯ ನೋಡಲು ಮಜವಾಗಿದೆ. ಥ್ಯಾಂಕ್ ಯು ಸೋ ಮಚ್. ಮುಂದಿನ ವರ್ಷ ಕೂಡ ಬರ್ತೇನೆ. ಇದಕ್ಕಿಂತ ದೊಡ್ಡದಾಗಿ ಕಾರ್ಯಕ್ರಮ ಆಗಲಿ’ ಎಂದಿದ್ದಾರೆ. ಬಳಿಕ ಕನ್ನಡದಲ್ಲಿ ಮಾತನಾಡಿದ
ನಟಿ ಪೂಜಾ ಹೆಗ್ಡೆ, ‘ಕನ್ನಡ ಸೊಲ್ಪ ಸೊಲ್ಪ ಬರ್ತದೆ. ನಾನು ಕನ್ನಡ ಕಲಿತಾ ಇದ್ದೇನೆ’ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ನಮ್ಮ ಹೆಮ್ಮೆಯ ಜಲಕ್ರೀಡೆಗೆ ಸೆಲೆಬ್ರೆಟಿಗಳೂ ಸೇರಿದಂತೆ ಬೆಂಗಳೂರಿನ ಜನರೂ ಇಷ್ಟು ಬೆಂಬಲ ವ್ಯಕಪಡಿಸಿರುವುದು ಹೆಮ್ಮೆಯ ಸಂಗತಿ.