ಶಬರಿಮಲೆಯ ಮುಖ್ಯ ಅರ್ಚಕರಾಗಿ ಪಿ.ಎನ್.ಮಹೇಶ್ ನೇಮಕ – ಪಂದಳಂ ರಾಜಮನೆತನದ ‌ಮುಂದೆಯೇ ನಡೆಯಿತು ಆಯ್ಕೆ

ಶಬರಿಮಲೆಯ ಮುಖ್ಯ ಅರ್ಚಕರಾಗಿ ಪಿ.ಎನ್.ಮಹೇಶ್ ನೇಮಕ – ಪಂದಳಂ ರಾಜಮನೆತನದ ‌ಮುಂದೆಯೇ ನಡೆಯಿತು ಆಯ್ಕೆ

ನ್ಯೂಸ್ ಆ್ಯರೋ : ಶಬರಿಮಲೆಯ ಮುಖ್ಯ ಅರ್ಚಕರನ್ನಾಗಿ ಮೂವಾಟ್ಟುಪ್ಪುಳ ಎನನಲ್ಲೂರ್‌ನ ಪುಟಿಲ್ಲತ್ ಮಾನಾದ ಪಿ.ಎನ್.ಮಹೇಶ್ ಅವರನ್ನು ಒಂದು ವರ್ಷದ ಅವಧಿಗೆ ನೇಮಕಗೊಳಿಸಲಾಗಿದೆ.

ಇವರು ಪ್ರಕೃತ ತ್ರಿಶೂರ್‌ನ ಪರಮೇಕ್ಕಾವು ಭಗವತಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಗುರುವಾಯೂರ್ ಬಳಿಯ ಪೂಂಗತ್ ಮಾನಾದ ಪಿ.ಜಿ.ಮುರಳಿ ನಂಬೂದಿರಿ ಅವರನ್ನು ಶಬರಿಮಲೆಗೆ ಹೊಂದಿಕೊಂಡಿರುವ ಶ್ರೀಮಾಳಿಕಪ್ಪುರಂ ದೇವಿ ದೇವಸ್ಥಾನದ ಮೇಲ್ಶಾಂತಿಯಾಗಿ ನೇಮಕಗೊಳಿಸಲಾಗಿದೆ.

ಇವರು ಕಳೆದ ೨೫ವರ್ಷಗಳಿಂದ ಹೈದರಾಬಾದ್‌ನ ಸೋಮಾಜಿಗುಡದಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ನೇಮಕಾತಿಯನ್ನು ಶ್ರೀಕೋವಿಲ್ (ದೇವಸ್ಥಾನ)ನ ಮುಂದೆ ಚೀಟಿ ಎತ್ತುವ ಮೂಲಕ ಘೋಷಿಸಲಾಯಿತು. ತಿರುವಾಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ಸಂದರ್ಶನ ನಡೆಸಿದ ಬಳಿಕ ಅರ್ಚಕರ ಸಮಿತಿಯೊಂದು ಇವರ ಹೆಸರನ್ನು ಒಳಗೊಂಡ ಪಟ್ಟಿಯೊಂದನ್ನು ನೀಡಿತ್ತು. ಪಂದಳಂ ರಾಜಮನೆತನದ ವೈದೇಹಿ ವರ್ಮ(ಶಬರಿಮಲೆ) ಮತ್ತು ನಿರುಪಮ ಜಿ.ವರ್ಮ (ಮಾಳಿಗಪ್ಪುರಂ) ಅವರು ಟಿಡಿಬಿ ಅಕಾರಿಗಳ ಉಪಸ್ಥಿತಿಯಲ್ಲಿ ಚೀಟಿ ಎತ್ತಿದರು.

ಶಬರಿಮಲೆ ದೇವಳವು ತುಲಾ ಮಾಸದ ಪೂಜೆಗಾಗಿ ಮಂಗಳವಾರ ತೆರೆದುಕೊಂಡಿತು. ಮುಖ್ಯ ಅರ್ಚಕ ಕೆ.ಜಯರಾಮನ್ ನಂಬೂದಿರಿ ಅವರು ತಂತ್ರಿವರ್ಯ ಕಂಟರಾರು ಮಹೇಶ್ ಮೊಹನಾರು ಅವರ ಸಮ್ಮುಖ ನಡೆ ತೆರೆದರು. ಅನಂತರ ಅವರು ಮಾಳಿಗಪ್ಪುರಂ ದೇವಳದ ಕೀಲಿ ಕೈಯ್ಯನ್ನು ಮುಖ್ಯ ಅರ್ಚಕ ವಿ.ಹರಿಹರನ್ ಅವರಿಗೆ ನೀಡಿದರು. ಅನಂತರ ಭಕ್ತರು ದೇವರ ದರ್ಶನ ಮಾಡಿದರು. ಅಕ್ಟೋಬರ್ 22ವರೆಗೆ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *