ಮೊಸರನ್ನ ಎನ್ನುವ ಪರಮಾನ್ನ ಅದೆಷ್ಟು ಆರೋಗ್ಯದಾಯಕ ಗೊತ್ತಾ? – ಮಾಡೋದು ಸುಲಭ, ತಿನ್ನೋದ್ರಿಂದ ಹಲವು ಪ್ರಯೋಜನ

ಮೊಸರನ್ನ ಎನ್ನುವ ಪರಮಾನ್ನ ಅದೆಷ್ಟು ಆರೋಗ್ಯದಾಯಕ ಗೊತ್ತಾ? – ಮಾಡೋದು ಸುಲಭ, ತಿನ್ನೋದ್ರಿಂದ ಹಲವು ಪ್ರಯೋಜನ

ನ್ಯೂಸ್ ಆ್ಯರೋ : ಸಾಮಾನ್ಯವಾಗಿ ಮೊಸರನ್ನ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಶೀತ, ಕಫದ ಬಾಧೆ ಇರುವವರು ಇದರಿಂದ ಕೊಂಚ ದೂರವಿರುತ್ತಾರೆ. ಆದರೂ ಅಪರೂಪಕ್ಕೊಮ್ಮೆ ಇದನ್ನು ಸವಿಯಬೇಕು ಎನ್ನುವ ಆಸೆಯಂತೂ ಮನದೊಳಗೆ ಹುಟ್ಟು ಹಾಕುತ್ತದೆ.

ನಮ್ಮ ಅಜ್ಜ, ಅಜ್ಜಿಯರ ಕಾಲದಲ್ಲಿ ಕಾಲದಲ್ಲಿ ಹೆಚ್ಚಾಗಿ ಮೊಸರನ್ನವನ್ನೇ ತಿನ್ನುತ್ತಿದ್ದರು. ಹೀಗಾಗಿ ಅವರಲ್ಲಿ ಬಹುತೇಕರು ಶತಾಯುಷಿಗಳಾಗಿ ಬಾಳಿ ಬದುಕಿದರು. ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವ ಮೊಸರನ್ನ ಬಹಳ ರುಚಿಕರವಾಗಿಯೂ ಇರುತ್ತದೆ. ಇದು ದೇಹಕ್ಕೆ ಪೌಷ್ಟಿಕ ಆಹಾರವೂ ಹೌದು.

ಮೊಸರನ್ನ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ಮುಖ್ಯವಾಗಿ ಇದು ಇದು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅನ್ನು ಯಥೇಚ್ಛ ಪ್ರಮಾಣದಲ್ಲಿ ಹೊಂದಿದೆ. ಇದು ಹಲ್ಲು, ಸ್ನಾಯು, ಮೂಳೆಗಳ ಆರೋಗ್ಯಕ್ಕೆ ಅತ್ಯಾವಶ್ಯಕವಾಗಿದೆ.

ಫೈಬರ್‌ನ ಗುಣವಿರುವ ಮೊಸರನ್ನ ಸೇವನೆಯಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮೊಸರನ್ನದಲ್ಲಿ ಪ್ರೋಬಯಾಟಿಕ್‌ ಅಂಶಗಳಿವೆ. ಅಂದರೆ ಉತ್ತಮ ಬ್ಯಾಕ್ಟೀರಿಯಾಗಳು. ಇದು ಕರುಳಿನ ಆರೋಗ್ಯವನ್ನು ವೃದ್ದಿಸುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ದೇಹದ ತೂಕ ಇಳಿಸಬೇಕು ಎನ್ನುವ ಬಯಕೆ ಇರುವವರು ಮೊಸರನ್ನವನ್ನು ನಿಯಮಿತವಾಗಿ ಸೇವಿಸಿದರೆ ಒಳ್ಳೆಯದು. ಮೊಸರಿನಲ್ಲಿ ಹೇರಳವಾದ ಪ್ರೋಟೀನ್ ಇದ್ದು, ಇದು ಹಸಿವನ್ನು ನಿಯಂತ್ರಿಸುತ್ತದೆ.

ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಮೊಸರನ್ನ ದೇಹಕ್ಕೆ ಶಕ್ತಿಯನ್ನು ನೀಡಿ, ಆಯಾಸವನ್ನು ಹೋಗಲಾಡಿಸುತ್ತದೆ.

ಮೊಸರನ್ನದಲ್ಲಿ ವಿಟಮಿನ್‌ ಮತ್ತು ಖನಿಜಗಳು ಹೇರಳವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ದೇಹವು ಸೋಂಕಿನ ವಿರುದ್ಧ ಹೋರಾಡಲು ಶಕ್ತಿ ತುಂಬುತ್ತದೆ.

ಒಟ್ಟಿನಲ್ಲಿ ಮೊಸರನ್ನದ ಸಾಕಷ್ಟು ಉತ್ತಮ ಗುಣಗಳಿದ್ದು, ನಿಯಮಿತವಾಗಿ ಇದನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ರಾತ್ರಿ ಹೊತ್ತು ಮೊಸರು ಸೇವಿಸಬಾರದು. ಯಾಕೆಂದರೆ ಇದು ಜೀರ್ಣಕ್ರಿಯೆ ಸಮಸ್ಯೆ ಉಂಟು ಮಾಡಬಹುದು ಮತ್ತು ನಿದ್ರೆಗೆ ತೊಂದರೆಯುಂಟು ಮಾಡಬಹುದು.

ಮೊಸರಿನ ಸೇವನೆ ಹಗಲು ಹೊತ್ತು ಉತ್ತಮ. ಇನ್ನು ಶೀತ, ಕಫದ ಬಾಧೆ ಇರುವವರು ಚಳಿ, ಮಳೆಗಾಲದಲ್ಲಿ ಮೊಸರಿನ ಉತ್ಪನ್ನಗಳನ್ನು ಸೇವಿಸದೇ ಇರುವುದು ಉತ್ತಮ.

ಮೊಸರನ್ನ ಮಾಡುವ ಸುಲಭ ವಿಧಾನ ಇಲ್ಲಿದೆ.

ಒಂದು ಲೋಟ ಸಾಮಾನ್ಯ ಬೆಳ್ತಿಗೆ ಅಕ್ಕಿಯನ್ನು ಬೇಯಿಸಿ ಇಟ್ಟುಕೊಂಡು ಬಳಿಕ ಅದಕ್ಕೆ ಮೊಸರನ್ನು ಕಲಸಿ ಇಡಿ. ಜೀರಿಗೆ, ಕರಿಬೇವು, ಕೆಂಪು ಮೆಣಸು, ಬೆಳ್ಳುಳ್ಳಿ ಸೇರಿಸಿ ತಯಾರಿಸಿದ ಒಗ್ಗರಣೆ ಹಾಕಿ. ರುಚಿ ಹೆಚ್ಚಬೇಕಾದರೆ ದಾಳಿಂಬೆ ಕಾಳುಗಳನ್ನು ಮೊಸರನ್ನದ ಕಲಸಿ ಸೇವಿಸಿ. ಹದ ಬಿಸಿಯಾಗಿರುವಾಗ ಸವಿದರೆ ಹೆಚ್ಚು ರುಚಿಕರವಾಗಿರುತ್ತದೆ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *