ಶ್ರಾವಣ ಮಾಸದಲ್ಲಿ ದಾನ ಮಾಡಿದರೆ ಜೀವನ ಸಮೃದ್ಧ – ಯಾವ ವಸ್ತುಗಳನ್ನು ದಾನ ಮಾಡಬಹುದು?
- ಧಾರ್ಮಿಕ
- August 19, 2023
- No Comment
- 240
Adhik Maas 2023 : ಶ್ರಾವಣ ಮಾಸ ಎನ್ನುವುದು ಹಿಂದುಗಳಿಗೆ ಬಹಳ ಮಹತ್ವದ್ದು. ಈ ವರ್ಷ ಜು. 18ರಂದು ಇದು ಆರಂಭವಾಗಲಿದೆ. ಪುರಾಣಗಳ ಪ್ರಕಾರ ಈ ತಿಂಗಳಲ್ಲಿ ಕೆಲವೊಂದು ವಸ್ತುಗಳನ್ನು ದಾನ ಮಾಡಿದರೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.
ಅಕ್ಕಿ
ಶ್ರಾವಣ ಸೋಮವಾರದ ಪೂಜೆಯ ಸಮಯದಲ್ಲಿ ಶಿವಲಿಂಗಕ್ಕೆ ಒಂದು ಹಿಡಿ ಅಕ್ಷತೆ ಅರ್ಪಿಸಬೇಕು. ಜೊತೆಗೆ ಅಗತ್ಯವಿರುವವರಿಗೆ ಅಕ್ಕಿ ದಾನ ಮತ್ತು ಅನ್ನ ದಾನ ಮಾಡಬೇಕು. ಇದರಿಂದ ಅಭಿವೃದ್ಧಿ ಸಾಧ್ಯ ಎಂದು ಹಿರಿಯರು ಹೇಳುತ್ತಾರೆ.
ಕಪ್ಪು ಎಳ್ಳು
ಇದು ಶಿವ ಮತ್ತು ಶನಿ ದೇವರಿಗೆ ಪ್ರಿಯವಾದ ವಸ್ತು. ಹೀಗಾಗಿ ಶ್ರಾವಣ ಸೋಮವಾರ ಅಥವಾ ಶನಿವಾರ ಕಪ್ಪು ಎಳ್ಳನ್ನು ದಾನ ಮಾಡಬೇಕು. ಇದರಿಂದ ಶನಿ ಪ್ರಭಾವ ಕಡಿಮೆ ಆಗುವುದರ ಜೊತೆಗೆ ರಾಹು-ಕೇತು ಜನ್ಮ ದೋಷಗಳು ದೂರವಾಗುತ್ತವೆ.
ಉಪ್ಪು
ಕೆಟ್ಟ ಸಮಯ ದೂರವಾಗಿ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಬೇಕು ಎಂದರೆ ಶ್ರಾವಣ ಮಾಸದಲ್ಲಿ ಉಪ್ಪು ದಾನ ಮಾಡಬೇಕು ಎಂದು ಶಿವ ಪುರಾಣ ಹೇಳುತ್ತದೆ. ಉಪ್ಪು ಸಕಾರಾತ್ಮಕ ಶಕ್ತಿಯ ಸಂಕೇತ ಎನ್ನುವ ನಂಬಿಕೆ ಇದೆ.
ರುದ್ರಾಕ್ಷ
ಇದು ಶಿವನ ನೆಚ್ಚಿನ ವಸ್ತು. ಮಾತ್ರವಲ್ಲ ಶಿವನ ಭಾಗವೆಂದೇ ಪರಿಗಣಿಸಲಾಗುತ್ತದೆ. ಆಯಸ್ಸು ಹೆಚ್ಚಲು, ದಾಂಪತ್ಯ ಜೀವನ ಸುಖದಿಂದ ಕೂಡಿರಲು, ಅಕಾಲಿಕ ಮರಣ ಭಯವನ್ನು ದೂರ ಮಾಡಲು ಶ್ರಾವಣ ಮಾಸದಲ್ಲಿ ರುದ್ರಾಕ್ಷವನ್ನು ದಾನ ಮಾಡಬೇಕು ಎಂದು ಹೇಳಲಾಗುತ್ತದೆ.
ಬೆಳ್ಳಿ
ಹಲವು ವರ್ಷಗಳಿಂದ ಮಕ್ಕಳಾಗಲಿಲ್ಲವೆಂಬ ಕೊರಗು ಕಾಡುತ್ತಿರುವ ದಂಪತಿ ಶ್ರಾವಣ ಮಾಸದಲ್ಲಿ ಬೆಳ್ಳಿ ವಸ್ತು ದಾನ ಮಾಡುವುದರಿಂದ ಉತ್ತಮ ಫಲ ಪಡೆದುಕೊಳ್ಳಲಿದ್ದಾರೆ. ಜೊತೆಗೆ ಸರ್ಪದೋಷ ನಿವಾರಣೆಯೂ ಆಗುತ್ತದೆ ಎನ್ನುವುದು ಧಾರ್ಮಿಕ ನಂಬಿಕೆ.