ಐಐಟಿ ಬಾಂಬೆಗೆ 315 ಕೋಟಿ ದೇಣಿಗೆ ನೀಡಿದ ನಂದನ್ ನಿಲೇಕಣಿ – ಧಾರಾಳ ಮೊತ್ತ ನೀಡಿದ್ದರ ಹಿಂದಿದೆ ಬಾಂಧವ್ಯ..!!
- ರಾಷ್ಟ್ರೀಯ ಸುದ್ದಿ
- June 21, 2023
- No Comment
- 90
ನ್ಯೂಸ್ ಆ್ಯರೋ : ಇನ್ಫೋಸಿಸ್ ಲಿಮಿಟೆಡ್ ಸಹ-ಸಂಸ್ಥಾಪಕ, ಅಧ್ಯಕ್ಷ ನಂದನ್ ನೀಲಕಣಿ ಐಐಟಿ ಬಾಂಬೆಗೆ ದೊಡ್ಡ ಮೊತ್ತದ ಕೊಡುಗೆ ನೀಡಿದ್ದಾರೆ. 315 ಕೋಟಿ ರೂ. ದೇಣಿಗೆಯನ್ನು ಅವರು ಹಸ್ತಾಂತರಿಸಿದರು.
ಕಾರಣವೇನು?
ಐಐಟಿ ಬಾಂಬೆಯಲ್ಲಿ ನಂದನ್ ಶಿಕ್ಷಣ ಪಡೆದಿದ್ದರು. 1973ರಲ್ಲಿ ಐಐಟಿ ಬಾಂಬೆಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿಗೆ ಸೇರ್ಪಡೆಯಾಗಿದ್ದರು. ಇದೀಗ 50 ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ಅವರು ದೊಡ್ಡ ಮೊತ್ತದ ದೇಣಿಗೆ ಒದಗಿಸಿದ್ದಾರೆ.
ಐಐಟಿ ಬಾಂಬೆಯಲ್ಲಿ ಮೂಲ ಸೌಕರ್ಯ, ಎಂಜಿನಿಯರಿಂಗ್, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಗೆ ಒತ್ತು ನೀಡುವುದು ನಂದನ್ ಅವರ ಕನಸು. ಅದಕ್ಕಾಗಿ ದೇಣಿಗೆ ನೀಡಿದ್ದಾರೆ.
ನಂದನ್ ಐಐಟಿ ಬಾಂಬೆ ಕೊಡುಗೆ ನೀಡುವುದು ಇದೇ ಮೊದಲ ಸಲವೇನಲ್ಲ. ಈ ಹಿಂದೆ ಅವರು 85 ಕೋಟಿ ರೂ. ದೇಣಿಗೆ ನೀಡಿದ್ದರು. ಹೀಗಾಗಿ ಇದುವರೆಗೆ ಒಟ್ಟು 400 ಕೋಟಿ ರೂ. ನೀಡಿದಂತಾಗಿದೆ. ”ನನಗೆ ಎಲ್ಲವನ್ನೂ ನೀಡಿದ ಸ್ಥಳಕ್ಕೆ ನೀಡುತ್ತಿರುವ ಗೌರವಾರ್ಪಣೆ” ಎಂದು ಅವರು ಹೇಳಿದ್ದಾರೆ.