ಮನೆಯಲ್ಲಿ ಇರುವೆ ಕಾಟದಿಂದ ಬೇಸತ್ತಿದ್ದೀರಾ? – ಈ ಸಿಂಪಲ್ ಟ್ರಿಕ್ಸ್ ಬಳಸಿ, ಇರುವೆ ಓಡಿಸಿ‌..

ಮನೆಯಲ್ಲಿ ಇರುವೆ ಕಾಟದಿಂದ ಬೇಸತ್ತಿದ್ದೀರಾ? – ಈ ಸಿಂಪಲ್ ಟ್ರಿಕ್ಸ್ ಬಳಸಿ, ಇರುವೆ ಓಡಿಸಿ‌..

ನ್ಯೂಸ್ ಆ್ಯರೋ‌ : ಇರುವೆ ಕಾಟದಿಂದ (Ants Problem) ತೊಂದರೆ ಅನುಭವಿಸದವರು ಯಾರಿದ್ದಾರೆ ಹೇಳಿ? ಮನೆಯ ಸಂದಿ-ಗೊಂದು, ಅಡುಗೆ ಕೋಣೆ, ಬಾತ್ ರೂಮ್, ಜಗುಲಿ ಹೀಗೆ ಎಲ್ಲಾ ಕಡೆ ಕಾಣಿಸಿಕೊಂಡು ಉಪಟಳ ನೀಡುತ್ತದೆ.

ನಾನಾ ರೂಪ

ಈ ಇರುವೆಯಲ್ಲಿ ನಾನಾ ರೂಪಗಳಿವೆ. ಒಂದೊಂದು ಒಂದೊಂದು ರೀತಿಯ ತೊಂದರೆ ಕೊಡುತ್ತವೆ. ಅದರಲ್ಲೂ ಹಳ್ಳಿ ಮನೆಗಳ್ಳಿ ಇದರ ಕಾಟ ವಿಪರೀತ. ಬಟ್ಟೆಯನ್ನು ಕಡಿದು ಹಾಕುವುದರಿಂದ ಹಿಡಿದು ಅಂಗಳದಲ್ಲಿ ಮಣ್ಣನ್ನು ಎಳೆದು ರಾಶಿ ಹಾಕುತ್ತವೆ. ಇನ್ನು ದುರ್ವಾಸನೆ ಬೀರುವ ಸಣ್ಣ ಇರುವೆ ಮಜ್ಜಿಗೆ, ಹಾಲು, ಮೊಸರಿಗೆ ಮುತ್ತಿಗೆ ಹಾಕುತ್ತವೆ. ಹೀಗಾಗಿ ನಾವು ಇರುವೆ ಕಾಟದಿಂದ ಮುಕ್ತಿ ಪಡೆಯುವ ಮಾರ್ಗ ವಿವರಿಸುತ್ತೇವೆ.

ಮನೆಯಲ್ಲೇ ಇದೆ ಪರಿಹಾರ

ಇರುವೆಯನ್ನು ಓಡಿಸಲು ಮನೆಯಲ್ಲೇ ಇದೆ ಪರಿಹಾರ. ಒಂದು ಚಮಚ ಉಪ್ಪು ತೆಗೆದುಕೊಂಡು ಅದಕ್ಕೆ ನಿಂಬೆ ರಸ ಹಿಂಡಿ ಚೆನ್ನಾಗಿ ಮಿಶ್ರ ಮಾಡಿ. ಬಳಿಕ ಅದನ್ನು ಇರುವೆ ಹಿಂಡು ಇರುವಲ್ಲಿಗೆ ಚಿಮುಕಿಸಿ. ತಕ್ಷಣ ಇರುವೆಗಳೆಲ್ಲ ಜಾಗ ಖಾಲಿ ಮಾಡುತ್ತವೆ.

ಇನ್ನು ದಾಲ್ಚಿನಿ ಚಕ್ಕೆಯನ್ನು ಚೆನ್ನಾಗಿ ಹುಡಿ ಮಾಡಿ. ಬಳಿಕ ಇದನ್ನು ಇರುವೆಗಳ ಮೇಲೆ ಸಿಂಪಡಿಸಿ ಸ್ವಲ್ಪ ಹೊತ್ತು ಬಿಟ್ಟು ನೋಡಿ. ಒಂದು ಇರುವೆಯೂ ಅಲ್ಲಿರುವುದಿಲ್ಲ.

ಒಂದು ಚಮಚ ಕರಿಮೆಣಸಿನ ಪುಡಿಯನ್ನು ಒಂದು ಲೋಟ ಬಿಸಿನೀರಿಗೆ ಹಾಕಿಟ್ಟುಕೊಳ್ಳಿ. ಇರುವೆಗಳ ಸಾಲು ಕಂಡಾಗ ಇದನ್ನು ಅವುಗಳ ಮೇಲೆ ಸಿಂಪಡಿಸಿದರೆ ಸಾಕು.

ಅರಶಿನ ಹುಡಿಯಿಂದಲೂ ಇರುವೆಯನ್ನು ಓಡಿಸಲು ಸಾಧ್ಯ. ಇರುವೆ ಕಂಡು ಬಂದಲ್ಲಿ ಅರಶಿನ ಹುಡಿ ಚಿಮುಕಿಸಿ ಅಥವಾ ನೀರಿಗೆ ಸ್ವಲ್ಪ ಅರಶಿನ ಹುಡಿ ಮಿಶ್ರ ಮಾಡಿಟ್ಟುಕೊಂಡರೆ ಬೇಕಾದಾಗ ಬಳಸಿಕೊಳ್ಳಬಹುದು. ಅರಶಿನ ನೀರಿನಿಂದಲೂ ಇರುವೆಗಳು ಓಡಿ ಹೋಗುತ್ತವೆ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *