2 ವರ್ಷಗಳ ಬಳಿಕ ಡಿವೋರ್ಸ್ ಗೆ ಕಾರಣ ತಿಳಿಸಿದ ಸಮಂತಾ – ಮದುವೆ ಬಗ್ಗೆ ಸ್ಯಾಮ್ ಹೇಳಿದ್ದೇನು ಗೊತ್ತಾ?

2 ವರ್ಷಗಳ ಬಳಿಕ ಡಿವೋರ್ಸ್ ಗೆ ಕಾರಣ ತಿಳಿಸಿದ ಸಮಂತಾ – ಮದುವೆ ಬಗ್ಗೆ ಸ್ಯಾಮ್ ಹೇಳಿದ್ದೇನು ಗೊತ್ತಾ?

ನ್ಯೂಸ್ ಆ್ಯರೋ : ಟಾಲಿವುಡ್ ಬ್ಯೂಟಿ ಸಮಂತಾ ಹಾಗೂ ತೆಲುಗು ನಟ ನಾಗಚೈತನ್ಯಾ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವೇ ಸಮಯಕ್ಕೆ ಇವರಿಬ್ಬರ ಬದುಕಿಗೆ ವಿಚ್ಚೇದನ ಪೂರ್ಣ ವಿರಾಮ ಹಾಕಿತು. ಈ ವಿಚಾರ ದೇಶದೆಲ್ಲೆಡೆ ಭಾರೀ ಸಂಚಲನ ಸೃಷ್ಟಿಸಿತ್ತು.

ಸ್ವತಃ ಸಮಂತಾ ಬದುಕಿನಲ್ಲಿ ಎದ್ದ ಬಿರುಗಾಳಿಗೆ ನಲುಗಿ ಸಿನಿಮಾದಿಂದಲೂ ಕೊಂಚ ಬ್ರೇಕ್ ಪಡೆದಿದ್ದರು. ಆದರೆ ಇದೀಗ ನಾಗಚೈತನ್ಯ ಅವರೊಂದಿಗಿನ ವಿಚ್ಚೇದನ ಸಂಬಂಧ ಅಚ್ಚರಿಯ ಹೇಳಿಕೆಯೊಂದನ್ನು ಸಮಂತಾ ನೀಡಿದ್ದಾರೆ. ಸ್ಯಾಮ್ ಹೇಳಿದ ಆ ಅಚ್ಚರಿಯ ಸಂಗತಿ ಹೀಗಿದೆ ನೋಡಿ.

ಹೊಡೆತದ ಮೇಲೆ ಹೊಡೆತ ಅನುಭವಿಸಿದೆ..!

ಮದುವೆಯಾಗಿ 3 ವರ್ಷಗಳ ಕಾಲ ಸಮಂತಾ-ನಾಗ್ ಒಟ್ಟಿಗೆ ಇದ್ದರು. ಬಳಿಕ ವಿಚ್ಚೇದನ ಪಡೆದರು. ಈ ಬಗ್ಗೆ ಮಾತನಾಡಿರುವ ಸ್ಯಾಮ್, ‘ನನ್ನದು ವಿಫಲವಾದ ಮದುವೆ. ವಿಚ್ಚೇದನ ಅನ್ನುವುದು ನನ್ನ ವೈಯಕ್ತಿಕ ಬದುಕು, ಆರೋಗ್ಯ ಹಾಗೂ ಸಿನಿಮಾದ ಮೇಲೆ ಪರಿಣಾಮ ಬೀರಿತು.

ಇದರಿಂದಾಗಿ ಹೊಡೆತದ ಮೇಲೆ ಹೊಡೆತ ಅನುಭವಿಸಿದೆ. ಟ್ರೋಲಿಗರು ನನ್ನ ಬದುಕಿನ‌ ಬಗ್ಗೆ ಮನಬಂದಂತೆ ಮಾತನಾಡಿದ್ದರು ಆದರೆ ಇದರಿಂದ ನಾನು ವಿಚಲಿತಳಾಗಿಲ್ಲ’ ಎಂದಿದ್ದಾರೆ.

ನಾನು ಹೋರಾಡಲು ಸಿದ್ಧ!

ಮಾತು ಮುಂದುವರೆಸಿದ ಸ್ಯಾಮ್, ‘ಮನುಷ್ಯನ ಗೆಲುವು ನಿರ್ಣಯವಾಗುವುದು ಪ್ರಶಸ್ತಿ, ಅಂತಸ್ತು ಅಥವಾ ಹೆಸರಿನಿಂದಲ್ಲ ಆತನ ಒಳ್ಳೆಯ ಗುಣದಿಂದ. ಕಷ್ಟ, ನೋವು, ಕೊರತೆಗಳು ನನ್ನನ್ನು ಕಾಡುತ್ತಿದೆ. ಆದರೆ ಅದೆಲ್ಲವನ್ನು ಸಾರ್ವಜನಿಕವಾಗಿಸಲು ನಾನು ಬಯಸುವುದಿಲ್ಲ.

ಎಂತಹ ಪರಿಸ್ಥಿತಿಯಲ್ಲೂ, ಯಾರ ವಿರುದ್ಧವೂ ಕೂಡ ನಾನು ಹೋರಾಡಲು ಸಿದ್ಧ’ ಎಂದು ಸಮಂತಾ ಹೇಳಿಕೆ ನೀಡಿದ್ದಾರೆ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *