ಕೀರ್ತಿ ಪಾತ್ರಕ್ಕೆ ಗುಡ್ ಬೈ ಹೇಳಿದ ‘ಲಕ್ಷ್ಮೀ ಬಾರಮ್ಮ’ ತನ್ವಿ ರಾವ್ – ಏಕಾಏಕಿ ನಟಿ ಧಾರವಾಹಿಯಿಂದ ಹೊರ ಬಂದಿದ್ದು ಯಾಕೆ?
- ಮನರಂಜನೆ
- July 27, 2023
- No Comment
- 342
ನ್ಯೂಸ್ ಆ್ಯರೋ : ಸಾಕಷ್ಟು ಖಾಸಗಿ ಚಾನೆಲ್ ಗಳಲ್ಲಿ ಧಾರವಾಹಿಗಳದ್ದೇ ಸಿಂಹಪಾಲು. ಧಾರವಾಹಿಗಳನ್ನು, ಅವುಗಳಲ್ಲಿ ಬರುವ ಪಾತ್ರಗಳನ್ನು ಜನರು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಹೀಗಿರುವಾಗ ಕಲರ್ಸ್ ಕನ್ನಡ ಖಾಸಗಿ ಚಾನೆಲ್ನ ಸೂಪರ್ ಹಿಟ್ ಹಾಗೂ ನಾಡಿನಾದ್ಯಂತ ಮನೆಮಾತಾಗಿದ್ದ ‘ಲಕ್ಷ್ಮಿ ಬಾರಮ್ಮ’ ಧಾರವಾಹಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಧಾರವಾಹಿಯಲ್ಲಿ ಕೀರ್ತಿ ಎಂಬ ಪ್ರಮುಖ ಪಾತ್ರಧಾರಿಗೆ ಜೀವ ತುಂಬಿದ್ದ ನಟಿ ತನ್ವಿ ರಾವ್ ಏಕಾಏಕಿ ತಂಡದಿಂದ ಹೊರ ನಡೆದಿದ್ದಾರೆ.
ಧಾರವಾಹಿಯಲ್ಲಿ ಏನಾಗಿತ್ತು?
ಪ್ರಸ್ತುತ ‘ಲಕ್ಷ್ಮಿ ಬಾರಮ್ಮ’ ಧಾರವಾಹಿಯಲ್ಲಿ ಕೀರ್ತಿ ಮತ್ತು ವೈಷ್ಣವ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ವೈಷ್ಣವ್ ತಾಯಿ ಕಾವೇರಿಗೆ ಈ ಪ್ರೀತಿ ಇಷ್ಟವಿರಲಿಲ್ಲ. ಆ ಕಾರಣ ತಮ್ಮ ಮಗನಿಗೆ ಲಕ್ಷ್ಮಿ ಎಂಬ ಮಧ್ಯಮ ಕುಟುಂಬದ ಹುಡುಗಿಯೊಂದಿಗೆ ಮದುವೆ ಮಾಡಿಸುತ್ತಾರೆ. ಇನ್ನೊಂದೆಡೆ ಕೀರ್ತಿ ವೈಷ್ಣವ್ ಗಾಗಿ ಹಂಬಲಿಸುತ್ತಿರುತ್ತಾಳೆ. ವೈಷ್ಣವ್ ನನ್ನು ಪಡೆದುಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾಳೆ. ಈ ನಡುವೆ ಕೀರ್ತಿ ಪಾತ್ರಕ್ಕೆ ಜೀವ ತುಂಬಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ನಟಿ ತನ್ವಿ ರಾವ್ ತಂಡದಿಂದ ಏಕಾಏಕಿ ಹೊರ ನಡೆದಿದ್ದಾರೆ.
ಇನ್ನೂ ಸ್ಪಷ್ಟನೆ ನೀಡದ ಲಕ್ಷ್ಮೀ ಬಾರಮ್ಮ ಟೀಂ!
ಆಕೃತಿ ಮತ್ತು ರಾಧೆ ಶ್ಯಾಮ್ ಎಂಬ ಕನ್ನಡ ಧಾರವಾಹಿಗಳ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿದ ನಟಿ ತನ್ವಿ ರಾವ್ ಆ ಬಳಿಕ ‘ಜಮಿಲ’ ಎಂಬ ತಮಿಳು ಧಾವಾಹಿಯಲ್ಲೂ ನಟಿಸಿದ್ದಾರೆ. ಇದೀಗ ಈಕೆ ನಟಿಸುತ್ತಿದ್ದ ‘ಲಕ್ಷ್ಮೀ ಬಾರಮ್ಮ’ ಧಾರವಾಹಿ ತಂಡದಿಂದ ಹೊರ ಬಂದಿದ್ದಾರೆ. ಈ ಬಗ್ಗೆ ಸೀರಿಯಲ್ ಟೀಂ ಅಥವಾ ಚಾನೆಲ್ ಯಾವುದೇ ಸ್ಪಷ್ಟನೆ ನೀಡಿಲ್ಲ. ತನ್ವಿ ರಾವ್ ಕೂಡ ತುಟಿ ಬಿಚ್ಚಿಲ್ಲ. ಅಸಲಿಗೆ ನಟಿ ತಂಡದಿಂದ ಹೊರ ಬಂದಿರುವ ವಿಚಾರ ನಿಜಾನಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.