15 ಕೋಟಿ ಖರ್ಚು ಮಾಡಿ ಸಾಂಗ್ ಶೂಟ್ ಮಾಡಿದ ‘ಜವಾನ್’ – ಬರೋಬ್ಬರಿ ಸಾವಿರಕ್ಕೂ ಹೆಚ್ಚು ಲೇಡಿ ಡ್ಯಾನ್ಸರ್ಸ್ ಬಳಸಿದ್ದೇಕೆ?

15 ಕೋಟಿ ಖರ್ಚು ಮಾಡಿ ಸಾಂಗ್ ಶೂಟ್ ಮಾಡಿದ ‘ಜವಾನ್’ – ಬರೋಬ್ಬರಿ ಸಾವಿರಕ್ಕೂ ಹೆಚ್ಚು ಲೇಡಿ ಡ್ಯಾನ್ಸರ್ಸ್ ಬಳಸಿದ್ದೇಕೆ?

ನ್ಯೂಸ್ ಆ್ಯರೋ : ‘ಪಠಾಣ್’ ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ ದೇಶದಾದ್ಯಂತ ಶಾರುಖ್ ಖಾನ್ ಅಭಿಮಾನಿಗಳು ಕಾಯುತ್ತಿರುವ ಮತ್ತು ಬಹುನಿರೀಕ್ಷೆ ಹುಟ್ಟಿಸಿರುವ ಚಿತ್ರ ‘ಜವಾನ್’. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಚಿತ್ರದಲ್ಲಿ ಸ್ಟಾರ್ ನಟ ನಟಿಯರ ದಂಡೇ ಇದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ನಿಶ್ಚಿತ ಎನ್ನಲಾಗಿದೆ. ಇದೀಗ ‘ಜವಾನ್’ ಚಿತ್ರದ ಒಂದು ಹಾಡು ಶೂಟ್ ಮಾಡಲು ಬರೋಬ್ಬರಿ 15 ಕೋಟಿ ಖರ್ಚು ಮಾಡಲಾಗಿದೆ ಎಂಬ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ‌.

ಸಾವಿರಕ್ಕೂ ಹೆಚ್ಚು ಲೇಡಿ ಡ್ಯಾನ್ಸರ್ಸ್, 15 ಕೋಟಿ ಖರ್ಚು!

Jawan’s FIRST Song Zinda Banda Cost Rs 15 Crore To Make, Will Feature Shah Rukh Khan With OVER 1,000 Dancers

‘ಜವಾನ್’ ಸಿನಿಮಾದ ಪ್ರಮುಖ ಹಾಡು ಎನ್ನಲಾದ ‘ಜಿಂದಾ ಬಂದಾ’ ಹಾಡಿನ ಚಿತ್ರೀಕರಣಕ್ಕಾಗಿ ನಿರ್ದೇಶಕ ಅಟ್ಲಿ ಕುಮಾರ್ ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ ಹಲವು ರಾಜ್ಯಗಳ ಸಾವಿರಕ್ಕೂ ಹೆಚ್ಚು ಲೇಡಿ ಡ್ಯಾನ್ಸರ್ಸ್ ಗಳನ್ನು ಹುಡುಕಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಶೋಬಿ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದು, ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಈ ಹಾಡು ಅದ್ದೂರಿಯಾಗಿ ಮೂಡಿ ಬಂದಿದ್ದು ಇದು ಶಾರುಖ್ ಖಾನ್ ಇಂಟ್ರಡಕ್ಷನ್ ಹಾಡು ಎನ್ನಲಾಗಿದೆ. ಈ ಹಾಡಿಗೆ 15 ಕೋಟಿ ಖರ್ಚು ಮಾಡಿದ್ದಾರಂತೆ.

‘ಜವಾನ್’ ನಲ್ಲಿ ದಳಪತಿ ವಿಜಯ್!

ಈ ಹಿಂದೆ ತಮಿಳಿನ‌ ಖ್ಯಾತ ನಟ ದಳಪತಿ ವಿಜಯ್ ಅವರಿಗೆ ನಿರ್ದೇಶಕ ಅಟ್ಲಿ ಎರಡು ಸಿನಿಮಾಗಳನ್ನು ಮಾಡಿದ್ದು ಅವೆರಡು ಕೂಡ ಸೂಪರ್ ಹಿಟ್ ಆಗಿತ್ತು. ಇದೀಗ ಅಟ್ಲಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಜವಾನ್’ ಸಿನಿಮಾದಲ್ಲಿ ನಟ ದಳಪತಿ ವಿಜಯ್ ಅಥಿತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಸಿನಿಮಾದಲ್ಲಿ ವಿಜಯ್ ಯಾವ ಪಾತ್ರ ಮಾಡಲಿದ್ದಾರೆ ಎಂಬ ವಿಚಾರವನ್ನು ಚಿತ್ರತಂಡ ಬಹಿರಂಗ ಪಡಿಸಿಲ್ಲ ಜೊತೆಗೆ ಟ್ರೇಲರ್ ನಲ್ಲೂ ವಿಜಯ್ ಅವರನ್ನು ತೋರಿಸಿಲ್ಲ.

ಶಾರುಖ್ ಎದುರು ಅಬ್ಬರಿಸಲಿರುವ ವಿಜಯ್ ಸೇತುಪತಿ!

ಇನ್ನು ಭಾರತೀಯ ಚಿತ್ರರಂಗದ ಅತ್ಯದ್ಭುತ ನಟ ವಿಜಯ್ ಸೇತುಪತಿ ‘ಜವಾನ್’ ಸಿನಿಮಾದಲ್ಲಿ ಖಳನಟನಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ನಟ ಶಾರುಖಾನ್ ವಿಜಯ್ ಸೇತುಪತಿ ಅವರ ಪಸ್ಟ್ ಲುಕ್ ರಿಲೀಸ್ ಮಾಡಿದ್ದರು. ವಿಜಯ್ ಸೇತುಪತಿ ಅವರನ್ನು ಚಿತ್ರದಲ್ಲಿ ‘ಸಾವಿನ ವ್ಯಾಪಾರಿ’ ಎಂದು ಬಣ್ಣಿಸಲಾಗಿದೆ‌. ಈ ಸಿನಿಮಾದ ನಟನೆಗಾಗಿ ವಿಜಯ್ ಸೇತುಪತಿ ಬರೋಬ್ಬರಿ 21 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಸದ್ಯದಲ್ಲೇ ತೆರಗಪ್ಪಳಿಸಲಿರುವ ‘ಜವಾನ್’ ಯಾವೆಲ್ಲ ದಾಖಲೆಗಳನ್ನು ಉಡಿಸ್ ಮಾಡಲಿದ್ದಾನೋ ಕಾದು ನೋಡಬೇಕಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *