ಮಾಡೋಕೆ ತುಂಬಾ ಕೆಲ್ಸ್ ಇದೆ, ದೊಡ್ಮನೆಗೆ ಹೋಗಲ್ಲ – ಡ್ರೋಣ್ ಪ್ರತಾಪ್ ಹಳೆ ವಿಡಿಯೋ ವೈರಲ್
- ಮನರಂಜನೆ
- October 13, 2023
- No Comment
- 156
ನ್ಯೂಸ್ ಆ್ಯರೋ : 10ನೇ ಆವೃತ್ತಿಯ ಕನ್ನಡ ಬಿಗ್ಬಾಸ್ ಆರಂಭಗೊಂಡ ವಾರಗಳು ಆಗುತ್ತ ಬಂದಿದೆ. ಇನ್ನೂ ಬಿಗ್ಬಾಸ್ಗೆ ಆಗಸಿದ ನಿರೀಕ್ಷಿತರ ಪಟ್ಟಿಯಲ್ಲಿ ಡ್ರೋಣ್ ಪ್ರತಾಪ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಈ ಹಿಂದೆ ವಿವಾದಕ್ಕೆ ಸಿಲುಕಿದ್ದ ಪ್ರತಾಪ್ ಅವರು ಸೀಸನ್ 10ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಡುವ ಮೂಲಕ ಜನರ ನಿರೀಕ್ಷೆ ಸುಳ್ಳಾಗಿರಲಿಲ್ಲ. ಅಸಮರ್ಥನಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟ ಪ್ರತಾಪ್ ಸೈಲೆಂಟ್ ಆಗಿಯೇ ಆಟವಾಡುತ್ತಿದ್ದಾರೆ. ಇದೀಗ ಪ್ರತಾಪ್ ಅವರ ಹಳೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹಳೆಯ ವಿಡಿಯೋ ವೈರಲ್
ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ಕೂಡಾ ಆಕ್ಟಿವ್ ಇದ್ದಾರೆ. ತನ್ನ ಸ್ಟಾರ್ಟ್ ಅಪ್ನಲ್ಲಿ ಹಲವರಿಗೆ ಕೆಲಸ ಕೊಟ್ಟಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಪ್ರತಾಪ್ ತನ್ನ ವಿರುದ್ಧ ಟ್ರೋಲ್ ಮಾಡಿದವರಿಗೆ ನೋಟಿಸ್ ನೀಡುತ್ತಿರುವುದಾಗಿ ಹೇಳಿದ್ದರು.
ಅದಲ್ಲದೆ ಬಿಗ್ ಬಾಸ್ಗೆ ಹೋಗುವುದಿಲ್ಲ ಎಂದು ಹೇಳಿದ್ದ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. ನಾನು ಬಿಗ್ ಬಾಸ್ಗೆ ಹೋಗುವುದಿಲ್ಲವೆಂದು ಸಂಗೀತಾ ಶೃಂಗೇರಿ ಕೂಡಾ ಹೇಳಿದ್ದಾಗಿ ಸುದೀಪ್, ಬಿಗ್ ಬಾಸ್ ಓಪನಿಂಗ್ ವೇದಿಕೆಯಲ್ಲಿ ಸಂಗೀತಾ ಕಾಲೆಳೆದಿದ್ದರು. ಇದೀಗ ಪ್ರತಾಪ್ ವಿಡಿಯೋ ವೈರಲ್ ಆಗುತ್ತಿದೆ.
ಬಿಗ್ಬಾಸ್ ಬಗ್ಗೆ ಆಸಕ್ತಿ ಇಲ್ಲ ಎಂದಿದ್ದ ಪ್ರತಾಪ್:
ಪ್ರತಾಪ್ ಅವರನ್ನು ವ್ಯಕ್ತಿಯೊಬ್ಬ ನೀವು ಬಿಗ್ಬಾಸ್ಗೆ ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದ್ದಕ್ಕೆ, ನನಗೆ ಆಫರ್ ಬಂದಿತ್ತು ಆದರೆ, ನಾನು ಹೋಗಲಿಲ್ಲ, ನನಗೆ ಆಸಕ್ತಿ ಇಲ್ಲ ಎಂದಿದ್ದರು.
ಎಲ್ಲರೂ ಬೇಕು ಬೇಕು ಎಂದು ಲಾಬಿ ಮಾಡಿದರೆ ನೀವೇಕೆ ಬೇಡ ಎನ್ನುತ್ತೀರಿ ಎಂಬ ಪ್ರಶ್ನೆಗೆ, ನನಗೆ ಮಾಡೋಕೆ ಬಹಳ ಕೆಲಸ ಇದೆ, ತಿಂಗಳುಗಟ್ಟಲೆ ಒಂದು ಕಡೆ ಕೂರೋಕೆ ಆಗುವುದಿಲ್ಲ. ಬಿಗ್ ಬಾಸ್ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಏನೂ ಐಡಿಯಾ ಇಲ್ಲ. ಐಡಿಯಾ ಇಲ್ಲದ ಜಾಗಕ್ಕೆ, ಆಸಕ್ತಿ ಇಲ್ಲದ ಕಡೆಗೆ ಹೋಗಿ ಏನು ಮಾಡೋದು ಎಂದು ಪ್ರತಾಪ್ ಹೇಳಿದ್ದಾರೆ.
ಈ ವಿಡಿಯೋವನ್ನು ಮತ್ತೇ ಟ್ರೋಲ್ ಮಾಡುತ್ತಿದ್ದಾರೆ. ನೆಟ್ಟಿಗರು ಆಸಕ್ತಿ ಇಲ್ಲದಿದ್ದರೆ ಮತ್ತೇಕೆ ಬಿಗ್ಬಾಸ್ಗೆ ಹೋದ್ರಿ ಎಂದು ಕಾಲೆಳೆಯುತ್ತಿದ್ದಾರೆ.
ಟ್ರೋಲ್ ಆಗಿದ್ದ ಪ್ರತಾಪ್:
ಈ ಹಿಂದೆ ನಾನು ಡ್ರೋಣ್ ಕಂಡುಹಿಡಿದಿರುವುದಾಗಿ ಹೇಳಿದ್ದರು. ಅವರಿಗೆ ರಾಜ್ಯದಾದ್ಯಂತ ಭಾರೀ ಪ್ರಚಾರ ದೊರಕಿತು. ಅದಲ್ಲದೆ ಯುವ ವಿಜ್ಞಾನಿಯೆಂದು ಗುರುತಿಸಿಕೊಂಡಿದ್ದರು. ಕೆಲ ಸಮಯಗಳ ಬಳಿಕ ಪ್ರತಾಪ್ ಅವರು ಯಾವ ಡ್ರೋಣ್ ಕೂಡಾ ತಯಾರಿಸಿಲ್ಲ ಎಂಬುದು ತಿಳಿದು ಬಂದಿತ್ತು. ಆ ಬಳಿಕ ಪ್ರತಾಪ್ ಅವರನ್ನು ಡ್ರೋಣ್ ವಿಚಾರ ಸಂಬಂಧ ಟ್ರೋಲ್ ಮಾಡುತ್ತಿದ್ದಾರೆ. ಎಲ್ಲಿ ಹೋದರೂ ಜನರು ಪ್ರತಾಪ್ನನ್ನು ಇದೇ ವಿಚಾರವಾಗಿ ಪ್ರಶ್ನಿಸುತ್ತಿದ್ದರು. ಇದೇ ಕಾರಣಕ್ಕೆ ಕೆಲವು ದಿನಗಳವರೆಗೆ ಪ್ರತಾಪ್ ತಲೆ ಮರೆಸಿಕೊಂಡಿದ್ದರು.
ಈಗ ಅವರು ಸ್ಟಾರ್ಟ್ ಅಪ್ ತೆರೆದಿದ್ದಾರೆ. ರೈತರ ಹೊಲ ಗದ್ದೆಗಳಿಗೆ ಔಷಧ ಸಿಂಪಡಿಸುವ ಡ್ರೋಣ್ ಕಂಡುಹಿಡಿದಿದ್ದಾರೆ. ಅದಲ್ಲದೆ ಕೊನೆಗೂ ಬಿಗ್ಬಾಸ್ ಸೀಸನ್ 10ಕ್ಕೆ ಎಂಟ್ರಿಕೊಡುವ ಮೂಲಕ ಕುತೂಹಲವನ್ನು ಸೃಷ್ಟಿಸಿದ್ದಾರೆ.