ಆಯತಪ್ಪಿ ಜಾರಿ ಬಿದ್ದ ‘ಬಿಂಕದ ಮದನಾರಿ’ ಹನಿರೋಸ್ – ಕಾಲು ಜಾರಿದ ಹಾಟ್ ನಟಿಯ ವಿಡಿಯೋ ವೈರಲ್ ಆಯ್ತು ನೋಡಿ..!!

ಆಯತಪ್ಪಿ ಜಾರಿ ಬಿದ್ದ ‘ಬಿಂಕದ ಮದನಾರಿ’ ಹನಿರೋಸ್ – ಕಾಲು ಜಾರಿದ ಹಾಟ್ ನಟಿಯ ವಿಡಿಯೋ ವೈರಲ್ ಆಯ್ತು ನೋಡಿ..!!

ನ್ಯೂಸ್ ಆ್ಯರೋ‌ : ಸೆಲೆಬ್ರಿಟಿಗಳು ಅದರಲ್ಲೂ ಚಿತ್ರ ನಟ-ನಟಿ ಎಂದರೇನೇ ಹಾಗೆ. ಅವರ ಪ್ರತಿಯೊಂದು ನಡೆ ನುಡಿ ಗಮನಿಸಲ್ಪಡುತ್ತವೆ. ಅವರು ಹೋದಲ್ಲಿ ಬಂದಲ್ಲಿ ಕ್ಯಾಮರಾ ಹಿಂಬಾಲಿಸುತ್ತಿರುತ್ತದೆ. ಕೆಲವೊಮ್ಮೆ ಆಕಸ್ಮಿಕವಾಗಿ ಜರಗುವ ಸಣ್ಣ ಘಟನೆಗಳೂ ವೈರಲ್ ಆಗುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಮಾಲಿವುಡ್ ನಟಿ ಹನಿರೋಸ್.

ವೈರಲ್ ಆದ ಪುಟ್ಟ ವೀಡಿಯೋ

ಮಾಲಿವುಡ್ ನಟಿ ಹನಿರೋಸ್ ಇತ್ತೀಚೆಗೆ ಕಾರ್ಯಕ್ರಮ ಮುಗಿಸಿ ಕಾರು ಹತ್ತುವಾಗ ಜಾರಿ ಬಿದ್ದರು. ಸದ್ಯ ಈ ಕೆಲವೇ ಸೆಕೆಂಡ್ ಗಳ ದೃಶ್ಯ ವೈರಲ್ ಆಗುತ್ತಿದೆ. ಇನ್ಸ್ಟಾಗ್ರಾಮ್ ನಲ್ಲಿ ಮಾಧ್ಯಮ ಸಂಸ್ಥೆಯೊಂದು ಪೋಸ್ಟ್ ಮಾಡಿರುವ ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜಾರಿ ಬಿದ್ದ ಪ್ರಿಯನಟಿ ಹನಿರೋಸ್ ಎನ್ನುವ ಶೀರ್ಷಿಕೆಯಡಿ ಈ ಪುಟ್ಟ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ಏನಾಯ್ತು?

ಕೇರಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರ ಉದ್ಘಾಟನೆಯಲ್ಲಿ ಮಲೆಯಾಳಂನ ಜನಪ್ರಿಯ ನಾಯಕ ಜಯಸೂರ್ಯ ಜೊತೆ ಹನಿರೋಸ್ ಕೂಡ ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಇಬ್ಬರೂ ಕಾರಿನತ್ತ ಹೊರಟರು. ರಸ್ತೆ ಎರಡೂ ಬದಿ ಅಭಿಮಾನಿಗಳ ನೂಕು ನುಗ್ಗಲು ಇತ್ತು.

ಎಲ್ಲರತ್ತ ಕೈ ಬೀಸಿ ಮೊದಲು ಜಯಸೂರ್ಯ ಕಾರು ಹತ್ತಿದರು. ಬಳಿಕ ಬಂದ ಹನಿರೋಸ್ ಕಾರು ಹತ್ತಲು ಮುಂದಾದಾಗ ಕಾಲು ಜಾರಿ ಕುಸಿದರು. ಕೂಡಲೇ ಅಲ್ಲೇ ಇದ್ದ ರಕ್ಷಣಾ ಸಿಬ್ಬಂದಿ ಅವರನ್ನು ಹಿಡಿದೆತ್ತಿದರು. ಒಂದು ಕ್ಷಣ ಗಾಬರಿಯಾದ ನಟಿ ಬಳಿಕ ಸಾವರಿಸಿಕೊಂಡು ಕಾರು ಹತ್ತಿ ಜನರತ್ತ ಕೈ ಬೀಸಿ ಹೊರಟರು.

ಯಾರು ಹನಿರೋಸ್?

ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಳಲ್ಲಿ ಅಭಿನಯಿಸಿರುವ ಹನಿರೋಸ್ 2005ರಲ್ಲಿ ‘ಬಾಯ್ ಫ್ರೆಂಡ್’ ಎನ್ನುವ ಮಲೆಯಾಳಂ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. 2007ರಲ್ಲಿ ‘ಮುದಲ್ ಕನವೇ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮಿಳು ಸಿನಿರಂಗಕ್ಕೆ ಪ್ರವೇಶಿಸಿದರು. 2008ರಲ್ಲಿ ಮೊದಲ ಬಾರಿ ‘ಆಲಯಂ’ ತೆಲುಗು ಚಿತ್ರದಲ್ಲಿ ಕಾಣಿಸಿಕೊಂಡರು. 2009ರಲ್ಲಿ ಕನ್ನಡ ಚಿತ್ರ ‘ಅಜಂತಾ’ದಲ್ಲಿ ನಟಿಸಿದರು. ಈ ವರ್ಷ ಟಾಲಿವುಡ್ ನಲ್ಲಿ ತೆರೆಕಂಡ ‘ವೀರ ಸಿಂಹ ರೆಡ್ಡಿ’ ತೆಲುಗು ಚಿತ್ರದ ಮೂಲಕ ಎಲ್ಲರ ಗಮನ ಸೆಳೆದರು.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *