‘ಸನಕ್’ ಹಾಡಿನ‌ ಅಸಭ್ಯ ಸಾಹಿತ್ಯಕ್ಕೆ ತೀವ್ರ ಆಕ್ಷೇಪ – ಕೊನೆಗೂ ಕ್ಷಮೆಯಾಚಿಸಿದ ರ್ಯಾಪರ್ ಬಾದ್ ಶಾ : ಈ ಹಾಡಲ್ಲಿ ಅಂಥಾದ್ದೇನಿದೆ?

‘ಸನಕ್’ ಹಾಡಿನ‌ ಅಸಭ್ಯ ಸಾಹಿತ್ಯಕ್ಕೆ ತೀವ್ರ ಆಕ್ಷೇಪ – ಕೊನೆಗೂ ಕ್ಷಮೆಯಾಚಿಸಿದ ರ್ಯಾಪರ್ ಬಾದ್ ಶಾ : ಈ ಹಾಡಲ್ಲಿ ಅಂಥಾದ್ದೇನಿದೆ?

ನ್ಯೂಸ್ ಆ್ಯರೋ : ವಿವಾದ, ಗಲಾಟೆಗಳು, ಅತಿರೇಕದ ವರ್ತನೆ ಇವೆಲ್ಲಾ ಸೆಲೆಬ್ರಿಟಿಗಳ ಹುಟ್ಟುಗುಣದಂತೆ. ದಿನಕ್ಕೊಂದು ಸೆಲೆಬ್ರಿಟಿಯ ವಿವಾದಗಳು ಸುದ್ದಿಯಾಗುತ್ತಲೇ ಇರುತ್ತದೆ. ಇತ್ತೀಚೆಗೆ ರ್ಯಾಪ್ ಹಾಡುಗಳ ಕಿಂಗ್ ಎನಿಸಿಕೊಂಡ ಬಾದ್ ಶಾ ಹಾಡಿದ ‘ಸನಕ್’ ಹಾಡಿನ ಸಾಹಿತ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಂತಿಮವಾಗಿ ಬಾದ್ ಶಾ ಕ್ಷಮೆಯಾಚಿಸುವುದರೊಂದಿಗೆ ವಿವಾದಕ್ಕೆ ತೆರೆ ಬಿದ್ದಿದೆ. ಅಷ್ಟಕ್ಕೂ ಸಾಹಿತ್ಯದಲ್ಲಿ ಏನಿತ್ತು, ಬಾದ್ ಶಾ ಎಡವಿದ್ದೆಲ್ಲಿ ಎಂಬುದನ್ನು ನೋಡೋಣ.

ಅಷ್ಟಕ್ಕೂ ಆಗಿದ್ದೇನು?

ಬಾದ್ ಶಾ ಅವರ ‘ಸನಕ್’ ಹಾಡು ಬಿಡುಗಡೆಯಾಗುತ್ತಿದ್ದಂತೆ ಲಕ್ಷಾಂತರ ವೀಕ್ಷಣೆ ಪಡೆಯಿತು. ಆದರೆ ಹಾಡಿನ ಬಗ್ಗೆ ತಕರಾರು ಎತ್ತಿದ ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದ ಅರ್ಚಕರಾದ ಮಹೇಶ್ ಅವರು ‘ಹಾಡಿನಲ್ಲಿ ಅಶ್ಲೀಲ ಪದಗಳ ಜೊತೆಗೆ ಶಿವ ದೇವರ ಹೆಸರನ್ನು ಬಳಸಿದ್ದು ಅಕ್ಷಮ್ಯ ಅಪರಾಧ. ತಕ್ಷಣವೇ ಈ ಹಾಡಿನಿಂದ ದೇವರ ಹೆಸರನ್ನು ತೆಗೆದು ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಈ ಬಗ್ಗೆ ಎಪ್.ಐ.ಆರ್ ದಾಖಲಿಸಲಾಗುವುದು’ ಎಂದು ಎಚ್ಚರಿಕೆ‌ ನೀಡಿದ್ದರು.

ಕ್ಷಮೆ ಕೇಳಿದ ಬಾದ್ ಶಾ!

ಅರ್ಚಕರ ಖಡಕ್ ಎಚ್ಚರಿಕೆಯ ನಂತರ ಎಲ್ಲಾ ಕಡೆಯಿಂದ ಬಾದ್ ಶಾ ಅವರಿಗೆ ಟೀಕೆಗಳು, ಆಕ್ರೋಶದ ಮಾತುಗಳು‌ ಕೇಳಿ ಬರಲಾರಂಭಿಸಿದವು.‌ ಇದರಿಂದ ಎಚ್ಚೆತ್ತುಕೊಂಡ ಬಾದ್ ಶಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ‌ ಮೂಲಕ, ‘ಇತ್ತೀಚೆಗೆ ಬಿಡುಗಡೆಯಾದ ‘ಸನಕ್’ ಸಾಹಿತ್ಯವು ಕೆಲವರ ಭಾವನೆಗೆ ದಕ್ಕೆ ತಂದಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಇದನ್ನು ಸ್ವ ಇಚ್ಛೆಯಿಂದ ಅಥವಾ ತಿಳಿದು ನಾನು‌ ಮಾಡಿಲ್ಲ. ನಾನು ಅತ್ಯಂತ ಉತ್ಸಾಹ ಮತ್ತು ಪ್ರಾಮಾಣಿಕತೆಯಿಂದ ಸಾಹಿತ್ಯಗಳನ್ನು ಅಭಿಮಾನಿಗಳೆದುರು‌ ತರಲು ಆಶಿಸುತ್ತೇನೆ. ಹೀಗಾಗಿ ನನ್ನ ಹಾಡಿನ‌ ಕೆಲವು ಸಾಹಿತ್ಯಗಳನ್ನು ಬದಲಾಯಿಸಲು ಕ್ರಮ ಕೈಗೊಂಡಿದ್ದೇನೆ’ ಎಂದಿದ್ದಾರೆ.

ಮುಂದುವರೆಸಿದ ಬಾದ್ ಶಾ,’ ಇದರೊಂದಿಗೆ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲೂ ಬದಲಿ‌ ಕ್ರಮ ಕೈಗೊಳ್ಳುತ್ತೇನೆ. ಹೀಗಾಗಿ ಅಭಿಮಾನಿಗಳು ಮತ್ತು‌ ಜನರು ಸ್ವಲ್ಪ ಕಾಲಾವಕಾಶ ನೋಡಿ ತಾಳ್ಮೆಯಿಂದ ಇರಬೇಕು. ನನಗೆ ಅಭಿಮಾನಿಗಳೇ ಆಧಾರ.. ಹೀಗಾಗಿ ನಾನು ನಿಮ್ಮ ಮಾತಿಗೆ ಗೌರವ ನೀಡುತ್ತೇನೆ ಮತ್ತು ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ತಿಂಗಳ ಹಿಂದಷ್ಟೇ ಬಿಡುಗಡೆಯಾದ ‘ಸನಕ್’ ಸಾಹಿತ್ಯವು ಅತ್ಯಂತ ಕಡಿಮೆ ಸಮಯದಲ್ಲಿ ಬರೋಬ್ಬರಿ 22 ಮಿಲಿಯನ್ ವೀಕ್ಷಣೆ ಪಡೆದಿತ್ತು. ಆದರೆ ಇದೀಗ ಅದಕ್ಕೆ ಆಕ್ಷೇಪ ವ್ಯಕ್ತವಾಗಿರುವ ಕಾರಣ ರ್ಯಾಪರ್ ಬಾದ್ ಶಾ ಸಾಹಿತ್ಯದ ಸಾಲುಗಳನ್ನು ಬದಲಿಸಲು ನಿರ್ಧರಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *