ಹ್ಯಾಕ್ ಆಯ್ತು ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರದ ಟೀಸರ್ – ಆ್ಯಕ್ಷನ್ ಪ್ರಿನ್ಸ್ ಗೆ ಹ್ಯಾಕರ್ಸ್ ಕಾಟ..!!

ಹ್ಯಾಕ್ ಆಯ್ತು ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರದ ಟೀಸರ್ – ಆ್ಯಕ್ಷನ್ ಪ್ರಿನ್ಸ್ ಗೆ ಹ್ಯಾಕರ್ಸ್ ಕಾಟ..!!

ನ್ಯೂಸ್ ಆ್ಯರೋ : ತಂತ್ರಜ್ಞಾನ ಬೆಳೆದಂತೆ ಅವುಗಳಿಂದ ಎಷ್ಟು ಉಪಯೋಗ ಪಡೆಯುತ್ತೆವೋ, ಅಷ್ಟೇ ಅಪಾಯವೂ ಇದೆ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ.‌ ಇದೀಗ ಇದೇ ತಂತ್ರಜ್ಞಾನದ ಕೆಟ್ಟ ದೃಷ್ಟಿ ಚಂದನವನದ ಮೇಲೆ ಬಿದ್ದಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಮಾರ್ಟಿನ್ ಚಿತ್ರದ ಟೀಸರ್ ಹ್ಯಾಕ್ ಆಗಿದ್ದು, ಈ ಚಿತ್ರದ ನಿರ್ಮಾಪಕ ಉದಯ್ ಮೆಹ್ತಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕೆಜಿಎಪ್, ಕಬ್ಜಾ ಚಿತ್ರಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿರುವ ಚಿತ್ರ ಮಾರ್ಟಿನ್ ಈಗಾಗಲೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಹತ್ತು ಹಲವು ದಾಖಲೆಗಳನ್ನೆಲ್ಲ ಪುಡಿಮಾಡಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಗಡ್ ಲುಕ್ ನಲ್ಲಿ ಅಬ್ಬರಿಸಿರುವ ಈ ಚಿತ್ರದ ಟೀಸರ್ ಬಿಡುಗಡೆಯಾದ ಕೆಲವೇ ಸಮಯದಲ್ಲಿ 10ಲಕ್ಷ ವೀಕ್ಷಣೆ ಪಡೆದು ದಾಖಲೆ ಬರೆದಿತ್ತು. ಅನಂತರ ಈ ದಾಖಲೆ 83 ಮಿಲಿಯನ್‌ ತನಕ‌ ತಲುಪಿದ್ದು ಚಿತ್ರತಂಡದ ನಿರೀಕ್ಷೆಯನ್ನು‌‌‌ ದುಪ್ಪಟ್ಟಾಗಿಸಿದೆ.

ಚಿತ್ರದ ಟೀಸರ್ ನೋಡಿದವರೆಲ್ಲ ಇದು ಅಚ್ಚ ಕನ್ನಡದ ಬಾಲಿವುಡ್ ಶೈಲಿಯ ಚಿತ್ರ ಎಂದಿದ್ದರು. ಹಲವು ಸಿನಿಮಾ ಚಿತ್ರರಂಗದ ಗಣ್ಯರು ಕೂಡ ಇದನ್ನು ಹಾಡಿ ಹೊಗಳಿದ್ದರು. ಚಿತ್ರದ ಒಂದೊಂದು ಸೀನ್, ಸನ್ನಿವೇಶಗಳೂ ಕೂಡ ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಷ್ಟು ಅದ್ಭುತವಾಗಿ ಮೂಡಿ ಬಂದಿದೆ. ಸೌತ್ ಇಂಡಿಯಾದಿಂದ ಹೊರ ಬರುತ್ತಿರುವ ಮತ್ತೊಂದು ಅಲ್ಟಿಮೇಟ್ ಸಿನಿಮಾ‌ ಇದಾಗಲಿದೆ ಎಂದು ಸಾಕಷ್ಟು ಸಿನಿ ಪಂಡಿತರು ಈಗಾಗಕೇ ಭವಿಷ್ಯ ನುಡಿದಿದ್ದಾರೆ.

ಇನ್ನು ಸದ್ಯ, ಚಿತ್ರತಂಡ ಪ್ರಿ ಪ್ರೊಡಕ್ಷನ್ಸ್ ಕೆಲಸಗಳಲ್ಲಿ ನಿರತವಾಗಿದ್ದರೆ, ಅತ್ತ ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್ ಮತ್ರು ನಿರ್ಮಾಪಕ ಉದಯ್ ಮೆಹ್ತಾ ಚಿತ್ರವನ್ನು‌ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಿಸುವ ಕೆಲಸದಲ್ಲಿದ್ದಾರೆ. ಈ‌ ನಡುವೆ ಮಾರ್ಟಿನ್‌ ಚಿತ್ರದ ಟೀಸರ್ ಮಾಡಿದ ದಾಖಲೆಗಳನ್ನು ಸಹಿಸದ ಕಿಡಿಗೇಡಿಗಳು ಟೀಸರ್ ಹ್ಯಾಕ್ ಮಾಡಿದ್ದಾರೆ. ಇದರಿಂದ ನೊಂದಿರುವ ಚಿತ್ರದ ನಿರ್ಮಾಪಕ ಉದಯ್ ಮೆಹ್ತಾ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಿರ್ಮಾಪಕರು ಹೇಳಿದ್ದೇನು?

ಈ ವಿಚಾರದ ಬಗ್ಗೆ ಮಾತನಾಡಿರುವ ಉದಯ್ ಮೆಹ್ತಾ, ‘ನಮ್ಮ ಕನ್ನಡ ಚಿತ್ರರಂಗದ ಸಿನಿಮಾವೊಂದರ ಟೀಸರ್ ಒಂದಕ್ಕೆ ಈ ಮಟ್ಟದ ಮನ್ನಣೆ ದೊರೆತಿರುವುದು ಸಂತಸದ ವಿಚಾರ. ಇದು ಕನ್ನಡದ ತಾಕತ್ತು. ಆದರೆ ಕನ್ನಡಿಗರ ಯಶಸ್ಸನ್ನು ಸಹಿಸದ ಕಿಡಿಗೇಡಿಗಳು ಚಿತ್ರದ ಟೀಸರ್ ಹ್ಯಾಕ್ ಮಾಡಿರುವುದು ಅತ್ಯಂತ ಹೀನಾಯ ಕೆಲಸ. ಮುಂದೆ ಇನ್ಯಾವ ಸಿನಿಮಾಗಳಿಗೂ ಈ ತೊಂದರೆ ಆಗಬಾರದು‌ ಎನ್ನುವ ಕಾರಣಕ್ಕೆ‌ ನಾನು ಈಗ ಧ್ವನಿ ಎತ್ತುತ್ತಿದ್ದೇನೆ’ ಎಂದಿದ್ದಾರೆ.

ಇನ್ನು ಮಾರ್ಟಿನ್ ಚಿತ್ರದಲ್ಲಿ ಮುದ್ದಾದ ಲವ್ ಸ್ಟೋರಿ, ಅತ್ಯದ್ಭುತ ಆ್ಯಕ್ಷನ್, ದೇಶ ಪ್ರೇಮದ ಕತೆಯಿದ್ದು, ಚಿತ್ರವನ್ನು ಎ.ಪಿ. ಅರ್ಜುನ್ ನಿರ್ದೇಶನ ಮಾಡಿದ್ದಾರೆ. ರವಿವರ್ಮ ಹಾಗೂ ರಾಮ್‌ಲಕ್ಷ್ಮಣ್ ಚಿತ್ರಕ್ಕೆ ಸಾಹಸ ನಿರ್ದೇಶನ‌ ಮಾಡಿದ್ದಾರೆ. ತೆಲುಗಿನ‌ ಮಣಿಶರ್ಮಾ ಸಂಗೀತ ನೀಡಿದ್ದು, ಸದ್ಯದಲ್ಲೇ ಈ ಚಿತ್ರ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ಏಕಾಕಾಲಕ್ಕೆ ಬಿಡುಗಡೆಯಾಗಲಿದೆ.

ಅಂತೂ ಕನ್ನಡದ ಬಹು ನಿರೀಕ್ಷಿತ ಚಿತ್ರ ಮಾರ್ಟಿನ್ ಗೆ ಆರಂಭದಲ್ಲೇ ಹ್ಯಾಕರ್ಸ್ ಗಳು ಹಾವಳಿ ನೀಡಿದ್ದು ಬೇಸರದ ಸಂಗತಿ. ಆದರೆ ಈ ಚಿತ್ರ ಬಿಡುಗಡೆಯಾದ ನಂತರ ಷ್ಟು ದಾಖಲೆಗಳನ್ನು ದೂಳಿಪಟ ಮಾಡಲಿದೆ, ಕಿಡಿಗೇಡಿಗಳಿಗೆ ಹೇಗೆ ಟಕ್ಕರ್ ಕೊಡಲಿದೆ ಎಂಬುದನ್ನ ಕಾದು ನೋಡಬೇಕಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *