ಆದಿಲ್ ನನ್ನ ಬೆತ್ತಲೆ ಫೋಟೋ, ವಿಡಿಯೋ ಮಾರಾಟ ಮಾಡಿದ್ದಾನೆ ಎಂದ ರಾಖಿ ಸಾವಂತ್ – ಬಾಲಿವುಡ್ ನಟಿ ಬಾಳಲ್ಲಿ ಮತ್ತೆ ಶೋಕಗಾನ..!!

ಆದಿಲ್ ನನ್ನ ಬೆತ್ತಲೆ ಫೋಟೋ, ವಿಡಿಯೋ ಮಾರಾಟ ಮಾಡಿದ್ದಾನೆ ಎಂದ ರಾಖಿ ಸಾವಂತ್ – ಬಾಲಿವುಡ್ ನಟಿ ಬಾಳಲ್ಲಿ ಮತ್ತೆ ಶೋಕಗಾನ..!!

ನ್ಯೂಸ್ ಆ್ಯರೋ : ರಾಖಿ ಸಾವಂತ್ ಅವರು ಮೈಸೂರು ಮೂಲದ ಪತಿ ಆದಿಲ್ ಖಾನ್ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಬಂದಿದ್ದು, ತನ್ನ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಇದೀಗ ರಾಖಿ ಸಾವಂತ್ ತಮ್ಮ ಪತಿ ಆದಿಲ್ ಖಾನ್ ವಿರುದ್ಧ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದು, ಆದಿಲ್ ನನ್ನ ಬೆತ್ತಲೆ ವಿಡಿಯೋ ಮಾಡಿ ಮಾರಾಟ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಫೆ.9ರಂದು ಕೋರ್ಟ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ನಟಿ, “ಆದಿಲ್ ನನ್ನ ಬೆತ್ತಲೆ ವಿಡಿಯೋ ಮಾಡಿ ಮಾರಾಟ ಮಾಡಿದ್ದಾನೆ. ನನ್ನ ಕೇಸ್‌ ಸೈಬರ್‌ಕ್ರೈಮ್‌ ಡಿಪಾರ್ಟ್‌ಮೆಂಟ್‌ನಲ್ಲಿದೆ. ಈಗ ಅವನು ಮೂರನೇ ಬಾರಿಗೆ ತನು ಎನ್ನುವ ಹುಡುಗಿಯನ್ನು ಮದುವೆಯಾಗಬೇಕು ಎಂದುಕೊಂಡಿದ್ದಾನೆ” ಎಂದು ರಾಖಿ ಸಾವಂತ್ ಹೇಳಿದ್ದಾರೆ.

“ನಾನು ನನ್ನ ಕಥೆ ಹೇಳಲು ಕೋರ್ಟ್‌ಗೆ ಬಂದಿದ್ದೇನೆ. ಆದಿಲ್‌ಗೆ ಬೇಲ್ ಸಿಕ್ಕಿಲ್ಲ. ನಾನು ಮೆಡಿಕಲ್ ಟೆಸ್ಟ್ ಮಾಡಿ ಸಾಕ್ಷಿಯನ್ನೆಲ್ಲ ಓಶಿವಾರ ಪೊಲೀಸ್ ಠಾಣೆಗೆ ನೀಡಿದ್ದೇನೆ. ಜಡ್ಜ್ ಹತ್ತಿರ ನಾನು ನ್ಯಾಯ ಕೇಳಲು ಬಂದಿದ್ದೇನೆ. ನನಗೆ ಮೋಸ ಮಾಡಿರುವ, ದೌರ್ಜನ್ಯ ನೀಡಿರುವ ಆದಿಲ್‌ಗೆ ಜಾಮೀನು ಸಿಗಬಾರದು. ನಾನು ಅವನಿಗೆ ನನ್ನ ಬ್ಯಾಂಕ್ ಸ್ಟೇಟ್‌ಮೆಂಟ್‌ ಕೊಟ್ಟಿದ್ದೇನೆ, ಓಟಿಪಿಯನ್ನೂ ಪಡೆದುಕೊಂಡು, ಬ್ಯಾಂಕ್‌ನಲ್ಲಿರುವ ಹಣ ಪಡೆದಿದ್ದಾನೆ. ನನ್ನ ನಂಬಿಕೆಯನ್ನು ಹಾಳು ಮಾಡಿದ್ದಾನೆ” ಎಂದು ರಾಖಿ ಸಾವಂತ್ ಹೇಳಿದ್ದಾರೆ.

ಇನ್ನೂ ಆದಿಲ್ ಖಾನ್ ರಾಖಿ ಸಾವಂತ್ ಧಮ್ಕಿ ಕೂಡ ಹಾಕಿದ್ದು, ಆತ ಉದ್ಯಮಿಯೇ ಅಲ್ಲ, ಅವನಿಗೆ ಬಾಲಿವುಡ್‌ಗೆ ಎಂಟ್ರಿ ಬೇಕಿತ್ತು, ಹೀರೋ ಆಗಬೇಕಿತ್ತು. ಅದಕ್ಕೆ ಅವನು ನನ್ನನ್ನು ಬಳಸಿಕೊಂಡ. ನಾನು ಉದ್ಯಮಿ ಅಂತ ಎಲ್ಲರೆದುರು ಹೇಳು ಅಂತ ಅವನೇ ಒತ್ತಾಯ ಮಾಡುತ್ತಿದ್ದ. ನಾನು ಅವನ ವಿರುದ್ಧ ಹೋದರೆ ಯಾರಿಗಾದರೂ ದುಡ್ಡು ಕೊಟ್ಟು ನಿನ್ನ ಮೇಲೆ ಟ್ರಕ್ ಹರಿಸ್ತೀನಿ ಅಂತ ಅವನು ಧಮ್ಕಿ ಹಾಕಿದ್ದಾನೆ. ನನ್ನ ದುಡ್ಡೆಲ್ಲ ತಗೊಂಡು ತಾಯಿ ಚಿಕಿತ್ಸೆಗೂ ಹಣ ಕೊಡಲಿಲ್ಲ. ಅವಳಿಗೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ರೆ ಬದುಕಿರುತ್ತಿದ್ದಳು ಎಂದು ರಾಖಿ ಸಾವಂತ್ ಅವರು ಅಳಲನ್ನು ತೋಡಿಕೊಂಡಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *