ಆದಿಲ್ ನನ್ನ ಬೆತ್ತಲೆ ಫೋಟೋ, ವಿಡಿಯೋ ಮಾರಾಟ ಮಾಡಿದ್ದಾನೆ ಎಂದ ರಾಖಿ ಸಾವಂತ್ – ಬಾಲಿವುಡ್ ನಟಿ ಬಾಳಲ್ಲಿ ಮತ್ತೆ ಶೋಕಗಾನ..!!

ಆದಿಲ್ ನನ್ನ ಬೆತ್ತಲೆ ಫೋಟೋ, ವಿಡಿಯೋ ಮಾರಾಟ ಮಾಡಿದ್ದಾನೆ ಎಂದ ರಾಖಿ ಸಾವಂತ್ – ಬಾಲಿವುಡ್ ನಟಿ ಬಾಳಲ್ಲಿ ಮತ್ತೆ ಶೋಕಗಾನ..!!

ನ್ಯೂಸ್ ಆ್ಯರೋ : ರಾಖಿ ಸಾವಂತ್ ಅವರು ಮೈಸೂರು ಮೂಲದ ಪತಿ ಆದಿಲ್ ಖಾನ್ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಬಂದಿದ್ದು, ತನ್ನ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಇದೀಗ ರಾಖಿ ಸಾವಂತ್ ತಮ್ಮ ಪತಿ ಆದಿಲ್ ಖಾನ್ ವಿರುದ್ಧ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದು, ಆದಿಲ್ ನನ್ನ ಬೆತ್ತಲೆ ವಿಡಿಯೋ ಮಾಡಿ ಮಾರಾಟ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಫೆ.9ರಂದು ಕೋರ್ಟ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ನಟಿ, “ಆದಿಲ್ ನನ್ನ ಬೆತ್ತಲೆ ವಿಡಿಯೋ ಮಾಡಿ ಮಾರಾಟ ಮಾಡಿದ್ದಾನೆ. ನನ್ನ ಕೇಸ್‌ ಸೈಬರ್‌ಕ್ರೈಮ್‌ ಡಿಪಾರ್ಟ್‌ಮೆಂಟ್‌ನಲ್ಲಿದೆ. ಈಗ ಅವನು ಮೂರನೇ ಬಾರಿಗೆ ತನು ಎನ್ನುವ ಹುಡುಗಿಯನ್ನು ಮದುವೆಯಾಗಬೇಕು ಎಂದುಕೊಂಡಿದ್ದಾನೆ” ಎಂದು ರಾಖಿ ಸಾವಂತ್ ಹೇಳಿದ್ದಾರೆ.

“ನಾನು ನನ್ನ ಕಥೆ ಹೇಳಲು ಕೋರ್ಟ್‌ಗೆ ಬಂದಿದ್ದೇನೆ. ಆದಿಲ್‌ಗೆ ಬೇಲ್ ಸಿಕ್ಕಿಲ್ಲ. ನಾನು ಮೆಡಿಕಲ್ ಟೆಸ್ಟ್ ಮಾಡಿ ಸಾಕ್ಷಿಯನ್ನೆಲ್ಲ ಓಶಿವಾರ ಪೊಲೀಸ್ ಠಾಣೆಗೆ ನೀಡಿದ್ದೇನೆ. ಜಡ್ಜ್ ಹತ್ತಿರ ನಾನು ನ್ಯಾಯ ಕೇಳಲು ಬಂದಿದ್ದೇನೆ. ನನಗೆ ಮೋಸ ಮಾಡಿರುವ, ದೌರ್ಜನ್ಯ ನೀಡಿರುವ ಆದಿಲ್‌ಗೆ ಜಾಮೀನು ಸಿಗಬಾರದು. ನಾನು ಅವನಿಗೆ ನನ್ನ ಬ್ಯಾಂಕ್ ಸ್ಟೇಟ್‌ಮೆಂಟ್‌ ಕೊಟ್ಟಿದ್ದೇನೆ, ಓಟಿಪಿಯನ್ನೂ ಪಡೆದುಕೊಂಡು, ಬ್ಯಾಂಕ್‌ನಲ್ಲಿರುವ ಹಣ ಪಡೆದಿದ್ದಾನೆ. ನನ್ನ ನಂಬಿಕೆಯನ್ನು ಹಾಳು ಮಾಡಿದ್ದಾನೆ” ಎಂದು ರಾಖಿ ಸಾವಂತ್ ಹೇಳಿದ್ದಾರೆ.

ಇನ್ನೂ ಆದಿಲ್ ಖಾನ್ ರಾಖಿ ಸಾವಂತ್ ಧಮ್ಕಿ ಕೂಡ ಹಾಕಿದ್ದು, ಆತ ಉದ್ಯಮಿಯೇ ಅಲ್ಲ, ಅವನಿಗೆ ಬಾಲಿವುಡ್‌ಗೆ ಎಂಟ್ರಿ ಬೇಕಿತ್ತು, ಹೀರೋ ಆಗಬೇಕಿತ್ತು. ಅದಕ್ಕೆ ಅವನು ನನ್ನನ್ನು ಬಳಸಿಕೊಂಡ. ನಾನು ಉದ್ಯಮಿ ಅಂತ ಎಲ್ಲರೆದುರು ಹೇಳು ಅಂತ ಅವನೇ ಒತ್ತಾಯ ಮಾಡುತ್ತಿದ್ದ. ನಾನು ಅವನ ವಿರುದ್ಧ ಹೋದರೆ ಯಾರಿಗಾದರೂ ದುಡ್ಡು ಕೊಟ್ಟು ನಿನ್ನ ಮೇಲೆ ಟ್ರಕ್ ಹರಿಸ್ತೀನಿ ಅಂತ ಅವನು ಧಮ್ಕಿ ಹಾಕಿದ್ದಾನೆ. ನನ್ನ ದುಡ್ಡೆಲ್ಲ ತಗೊಂಡು ತಾಯಿ ಚಿಕಿತ್ಸೆಗೂ ಹಣ ಕೊಡಲಿಲ್ಲ. ಅವಳಿಗೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ರೆ ಬದುಕಿರುತ್ತಿದ್ದಳು ಎಂದು ರಾಖಿ ಸಾವಂತ್ ಅವರು ಅಳಲನ್ನು ತೋಡಿಕೊಂಡಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *