Emergency Alert : ನಿಮ್ಮ ಮೊಬೈಲ್ ಗೆ ಆಗಸ್ಟ್ 17 ರಂದು ಫ್ಲಾಶ್ ಅಲರ್ಟ್ ಮೆಸೇಜ್ ಬಂದಿದ್ಯಾ? – ಹಾಗಾದರೆ ಈ ಸುದ್ದಿ ನೀವು ಓದಲೇಬೇಕು..!
- ಟೆಕ್ ನ್ಯೂಸ್
- August 18, 2023
- No Comment
- 143
ನ್ಯೂಸ್ ಆ್ಯರೋ : ಆಗಸ್ಟ್ 17, ಗುರುವಾರ ಮಧ್ಯಾಹ್ನ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ತುರ್ತು ಎಚ್ಚರಿಕೆ ಸಂದೇಶವೇನಾದರೂ ಬಂತಾ? ಬಂದಿದ್ದರೆ ಗಾಬರಿಯಾಗಬೇಕಾದ ಅಗತ್ಯವಿಲ್ಲ. ಯಾಕೆಂದರೆ, ಈ ತುರ್ತು ಎಚ್ಚರಿಕೆ ಸಂದೇಶವನ್ನು ಭಾರತ ಸರ್ಕಾರವೇ (Indian Government) ಕಳುಹಿಸಿದೆ..
ಈ ತುರ್ತು ಎಚ್ಚರಿಕೆ ಸಂದೇಶವು (Emergency Alert) ಎಲ್ಲ ಸ್ಮಾರ್ಟ್ಫೋನ್ ಬಳಕೆದಾರರಿಗೆ ಬಂದಿಲ್ಲ. ಯಾರಿಗೆ ದೊರೆತಿದೆಯೋ ಅವರ ಫೋನ್ ಜೋರಾದ ಬೀಪ್ನೊಂದಿಗೆ ’emergency alert: severe’ ಸಂದೇಶವನ್ನು ಪಡೆದುಕೊಂಡಿದ್ದಾರೆ.
ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ ಏಕೆಂದರೆ ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ. ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಟೆಸ್ಟ್ ಪ್ಯಾನ್-ಇಂಡಿಯಾ (TEST Pan-India) ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ . ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ” ಎಂದು ಫ್ಲಾಶ್ ಸಂದೇಶದಲ್ಲಿ ತಿಳಿಸಲಾಗಿದೆ.
ಮೊಬೈಲ್ ಆಪರೇಟರ್ಗಳು ಮತ್ತು ಸೆಲ್ ಬ್ರಾಡ್ಕಾಸ್ಟ್ ಸಿಸ್ಟಮ್ಗಳ ತುರ್ತು ಎಚ್ಚರಿಕೆ ಪ್ರಸಾರ ಸಾಮರ್ಥ್ಯಗಳ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸಲು ವಿವಿಧ ಪ್ರದೇಶಗಳಲ್ಲಿ ಕಾಲಕಾಲಕ್ಕೆ ಇಂತಹ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ದೂರಸಂಪರ್ಕ ಇಲಾಖೆಯ ಸೆಲ್ ಬ್ರಾಡ್ಕಾಸ್ಟಿಂಗ್ ಸಿಸ್ಟಮ್ ತಿಳಿಸಿದೆ.
ಭೂಕಂಪಗಳು, ಸುನಾಮಿಗಳು ಮತ್ತು ಹಠಾತ್ ಪ್ರವಾಹಗಳಂತಹ ವಿಪತ್ತುಗಳಿಗೆ ಉತ್ತಮವಾಗಿ ಸನ್ನದ್ಧವಾಗಿರಲು ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಕೆಲಸ ಮಾಡುತ್ತಿದೆ. ಭಾರತದಲ್ಲಿನ ಫೋನ್ ಬಳಕೆದಾರರು ಜುಲೈ 20 ರಂದು ಇದೇ ರೀತಿಯ ಪರೀಕ್ಷಾ ಎಚ್ಚರಿಕೆಯನ್ನು ಸ್ವೀಕರಿಸಿದ್ದರು.
ಇದು ನಾಗರೀಕರನ್ನು ವಿಪತ್ತುಗಳಿಂದ ತಪ್ಪಿಸಲು ಸಹಾಯ ಮಾಡುತ್ತದೆ. ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಭಾರಿ ಮಳೆಯಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ, ಹಲವು ಕಡೆಗಳಲ್ಲಿ ಹಠಾತ್ ಪ್ರವಾಹ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದರೆ, ನಾಗರಿಕರು ಮುನ್ನೆಚ್ಚರಿಕೆ ವಹಿಸುವುದು, ಸುರಕ್ಷಿತ ಸ್ಥಳಗಳನ್ನು ಸೇರಿಕೊಳ್ಳಲು ಅನುಕೂಲಕರವಾಗಲಿದೆ.