ಗೋವಿಂದ ಬಾಬು ಪೂಜಾರಿ ವಿರುದ್ಧ ಇಡಿಗೆ ಪತ್ರ ಬರೆದಿದ್ಲು ಚೈತ್ರಾ – ತಾನು ಸೇಫ್ ಆಗಲು ಪೂಜಾರಿಗೇ ಸ್ಕೆಚ್ ಹಾಕಿದ್ದ ನೌಟಂಕಿ ನಾಯಕಿ..!!

ಗೋವಿಂದ ಬಾಬು ಪೂಜಾರಿ ವಿರುದ್ಧ ಇಡಿಗೆ ಪತ್ರ ಬರೆದಿದ್ಲು ಚೈತ್ರಾ – ತಾನು ಸೇಫ್ ಆಗಲು ಪೂಜಾರಿಗೇ ಸ್ಕೆಚ್ ಹಾಕಿದ್ದ ನೌಟಂಕಿ ನಾಯಕಿ..!!

ನ್ಯೂಸ್ ಆ್ಯರೋ : ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ಐದು ಕೋಟಿ ರೂಪಾಯಿ ಹಣ ಪಡೆದ ಬಳಿಕ ಟಿಕೆಟ್ ಹಂಚಿಕೆಯಾಗದ ಹಿನ್ನೆಲೆಯಲ್ಲಿ ವಂಚಿಸಿದ್ದ ಹಣ ವಾಪಾಸ್ ಕೇಳಿದ್ದ ಗೋವಿಂದ ಬಾಬು ಪೂಜಾರಿ ಅವರಿಗೆ ಖೆಡ್ಡಾ ತೋಡಲು ಚೈತ್ರಾ ಕುಂದಾಪುರ ಮುಂದಾಗಿದ್ದ ವಿಚಾರ ಬಯಲಾಗಿದೆ.

ಗೋವಿಂದ ಬಾಬು ಪೂಜಾರಿ ಅವರು ಹಣ ಮರಳಿ ಕೇಳುವ ಇಲ್ಲವೇ ಪೋಲಿಸ್ ದೂರು ದಾಖಲಿಸುವ ಬಗ್ಗೆ ಮಾತುಕತೆ ಆಡುತ್ತಿದ್ದಾಗಲೇ ಈ‌ ಕಿಲಾಡಿ ಚೈತ್ರಾ ಕುಂದಾಪುರ ಐಟಿ ಮತ್ತು ಜಾರಿ ನಿರ್ದೇಶನಾಲಯಕ್ಕೆ ವಿಸ್ತೃತ ಪತ್ರ ಬರೆದು ತಾನು ಸೇಫ್ ಆಗಬಹುದು ಅಂದುಕೊಂಡಿದ್ದಳು‌.

ಅಕ್ರಮ ಹಣ ವರ್ಗಾವಣೆ ಬಗ್ಗೆ ದೂರು ನೀಡಿದ ಚೈತ್ರಾ ಕುಂದಾಪುರ ಅದರಲ್ಲಿ ಗೋವಿಂದ ಬಾಬು ಪೂಜಾರಿ ಅಕ್ರಮವಾಗಿ 6 ಕೋಟಿ ಹಣ ವರ್ಗಾವಣೆ ಮಾಡಿದ ಆರೋಪ ಹೊರಿಸಿದ್ದಳು.

ಗೋವಿಂದ ಪೂಜಾರಿ ಆಪ್ತನಿಂದ ಮಾಹಿತಿ ಪಡೆದಿದ್ದಾಗಿ ಇಡಿಗೆ ಪತ್ರ ಬರೆದಿದ್ದು, ಚೈತ್ರಾ ಜೊತೆಗೂ ಹಣ ನೀಡಿರುವ ಕುರಿತು ಗೋವಿಂದ ಪೂಜಾರಿ ಚರ್ಚಿಸಿದ್ದಾಗಿ ಉಲ್ಲೇಖಿಸಿದ್ದಳು‌.

ಪತ್ರದಲ್ಲಿ ಚುನಾವಣಾ ಟಿಕೆಟ್ ಗಾಗಿ ಹಣ ವರ್ಗಾಯಿಸಿದ್ದಾಗಿ ಉಲ್ಲೇಖಿಸಿದ್ದು, ಮಂಜುನಾಥ್ ಗೆ 1 ಕೋಟಿ, ಅಭಿನವ ಹಾಲಶ್ರೀ ಗೆ 1.5 ಕೋಟಿ, ವಿಶ್ವನಾಥ್ ಜೀ ಗೆ 3 ಕೋಟಿ ನೀಡಿದ್ದಾಗಿ ಚೈತ್ರಾ ಜೊತೆಗೆ ಗೋವಿಂದ ಬಾಬು ಪೂಜಾರಿ ಚರ್ಚೆ ನಡೆದಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ‌.

ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದ ಚೈತ್ರಾ, ಬಳಿಕ ಚೈತ್ರಾಳನ್ನೇ ಗೋವಿಂದ ಬಾಬು ಪೂಜಾರಿ 5 ಕೋಟಿ ಸಂಬಂಧ ಪ್ರಶ್ನಿಸಿದಾಗ ಚೈತ್ರಾ ಆ್ಯಂಡ್ ಟೀಂ ಎಚ್ಚೆತ್ತುಕೊಂಡಿತ್ತು.

ಹಾಗಾಗಿ ಇಡಿಗೆ ತಾನೇ ಖುದ್ದು ಅರ್ಜಿ ಸಲ್ಲಿಸಿ 5 ಕೋಟಿ ವ್ಯವಹಾರದ ಕುರಿತು ಇಡಿ ವಿಚಾರಣೆಗೆ ಮನವಿ ಮಾಡಲಾಗಿದೆ. 2022-23 ನೇ ಐಟಿ ರಿಟರ್ನ್ಸ್ ನಲ್ಲಿ ನಮೂದಿಸಲಾಗಿದೆಯೇ ಅನ್ನೋದರ ತನಿಖೆಗೆ ಮನವಿ ಮಾಡಿದ್ದಾಳೆ.

ತನ್ನ ಜೊತೆ ಮಾತನಾಡಿದ ಫೋನ್ ಸಂಭಾಷಣೆಯನ್ನು ಇಡಿಗೆ ಸಲ್ಲಿಸಿದ್ದ ಚೈತ್ರಾ, ಗೋವಿಂದ ಪೂಜಾರಿಯನ್ನೇ ಸಿಕ್ಕಿಸಿ ಹಾಕಲು ಮುಂದಾಗಿದ್ದಳು.

ಇಷ್ಟಾಗುತ್ತಲೇ ಚೈತ್ರಾ ವಿರುದ್ಧ ಗೋವಿಂದ ಬಾಬು ಪೂಜಾರಿ ದೂರು ದಾಖಲಿಸಿದ್ದು, ಪತ್ರದಲ್ಲಿ ತಾನು ಅಮಾಯಕಿಯಂತೆ ನಾಟಕ ಮಾಡಿರುವ ಚೈತ್ರಾ ಬೆಂಗಳೂರಿನ ಖಾಸಗಿ ಕಂಪೆನಿ ಉದ್ಯೋಗಿ ಎಂದು ತನ್ನನ್ನು ತಾನು ಉಲ್ಲೇಖಿಸಿದ್ದಾಳೆ. ಸದ್ಯ ಈ ಬಗ್ಗೆ ಇಡಿ ಏನು ಕ್ರಮ ಕೈಗೊಳ್ಳಲಿದೆ? ಪ್ರಕರಣ ಏನಾಗಲಿದೆಯೋ ಕಾದು‌ ನೋಡಬೇಕಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *