ಹಸುವನ್ನೇಕೆ ಕಡಿಯಬಾರದು ಎಂದು ಪ್ರಶ್ನಿಸಿದ ಪಶು ಸಂಗೋಪನ ಸಚಿವ ವೆಂಕಟೇಶ್ – ಗೋಹತ್ಯೆ ಕಾಯ್ದೆ ರದ್ದು ಸಾಧ್ಯತೆ
- ಕರ್ನಾಟಕ
- June 13, 2023
- No Comment
- 123
ನ್ಯೂಸ್ ಆ್ಯರೋ : ಹೊಸದಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಕಾನೂನುಗಳ ಮರು ಪರಿಶೀಲನೆಗೆ ಮುಂದಾಗಿದೆ. ಈ ಹಿಂದೆ ಕಾಮಗಾರಿಗಳ ಟೆಂಡರ್ ರದ್ದು ಮಾಡಿದ್ದ ಸರಕಾರ ಇದೀಗ ಗೋವಧೆ ನಿಷೇಧ ಕಾಯ್ದೆ ಹಿಂಪಡೆಯುವ ಸಾಧ್ಯತೆ ಬಗ್ಗೆ ಪರಿಶೀಲಿಸುತ್ತಿದೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಪಶು ಸಂಗೋಪನ ಸಚಿವ ಕೆ.ವೆಂಕಟೇಶ್, ”ಹಸುವನ್ನೇಕೆ ಕಡಿಯಬಾರದು?” ಎಂದು ಪ್ರಶ್ನಿಸಿದ್ದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
”ಹಿಂದಿನ ಬಿಜೆಪಿ ಸರಕಾರ ಕೋಣ ಮತ್ತು ಎಮ್ಮೆಗಳನ್ನು ಕಡಿಯಲು ಅವಕಾಶ ನೀಡಿದೆ. ಆದರೆ ಹಸುಗಳನ್ನು ಕಡಿಯಬಾರದು ಎಂದಿದೆ. ಈ ಬಗ್ಗೆ ನಾವು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿದೆ. ಎಮ್ಮೆ, ಕೋಣ ಕಡಿಯುವುದಾದರೆ ಹಸು ಯಾಕೆ ಕಡಿಯಬಾರದು?” ಎಂದು ವೆಂಕಟೇಶ್ ಕೇಳಿದ್ದಾರೆ.
”ನಮ್ಮ ಮನೆಯದ್ದೇ ಉದಾಹರಣೆ ಕೊಡ್ತೀನಿ. ನಾವು ಮೂರ್ನಾಲ್ಕು ಹಸು ಸಾಕಿದ್ವಿ. ಅದರಲ್ಲಿ ಒಂದು ತೀರಿ ಹೋಯ್ತು. ಅದನ್ನು ಏನು ಮಾಡುವುದೆಂದು ವೈದ್ಯರಲ್ಲಿ ಕೇಳಿದಾಗ ಹೂಳಲು ಹೇಳಿದರು. 25 ಜನ ಬಂದರೂ ಅದನ್ನು ಎತ್ತಲಾಗಲಿಲ್ಲ. ಕೊನೆಗೆ ಜೆಸಿಬಿ ತರಿಸಿ ಹೂಳಬೇಕಾಯಿತು” ಎಂದು ಸಚಿವರು ಹೇಳಿದರು.