ಶ್ರೀ ರಾಮರಕ್ಷಾಸ್ತೋತ್ರದ 11ನೇ ಶ್ಲೋಕ ಹಾಗೂ ಅದರ ಅರ್ಥ ಇಲ್ಲಿದೆ…
- ಧಾರ್ಮಿಕ
- May 8, 2023
- No Comment
- 154
ಶ್ಲೋಕ 11
ಜಾನುನೀ ಸೇತುಕೃತ್ ಪಾತು ಜಂಘ ದಶಮುಖಾಂತಕಃ | ಪಾದೌ ವಿಭೀಷಣಶ್ರೀದಃ ಪಾತು ರಾಮೋsಖಿಲಂ ವಪುಃ
ಶ್ಲೋಕದ ಅರ್ಥ
ಸಮುದ್ರಕ್ಕೆ ಸೇತುವೆ ನಿರ್ಮಿಸಿದ ರಾಮನು ಮೊಣಕಾಲು ಗಂಟುಗಳನ್ನೂ ಅಥವಾ ಮಂಡಿಗಳನ್ನೂ, ರಾವಣನನ್ನು ಸಂಹರಿಸಿದ ರಾಮನು ಮೊಣಕಾಲುಗಳನ್ನೂ, ವಿಭೀಷಣನಿಗೊಲಿದ ರಾಮನು ಪಾದಗಳನ್ನೂ – ಹೀಗೆ ಆ ಸರ್ವಶಕ್ತ ರಾಮನು ದೇಹದ ಎಲ್ಲಾ ಅಂಗಾಂಗಳನ್ನು ರಕ್ಷಿಸಿ ಕಾಪಾಡಲಿ ! ಹೀಗೆ ಮುಡಿಯಿಂದ ಹಿಡಿದು ಅಡಿಯ ವರೆಗೂ ಮಹಿಮಾನ್ವಿತ ರಾಮನ ಕೃಪೆಯ ಅಭಿಷೇಕವಾಗಿ ಕಣಕಣದಲ್ಲೂ ನಲಿವಿನ ಹೊಳೆ ಉಕ್ಕುವಂತಾಗಲಿ ! || 11 ||