Sweet Home : ಮನೆಯಲ್ಲಿ ಸದಾಕಾಲ ಲಕ್ಷ್ಮಿ ನೆಲೆಸಬೇಕಾ..?‌ – ಹಾಗಾದರೆ ಈ ವಸ್ತುಗಳನ್ನು ಈಗಲೆ ಮನೆಯಿಂದ ಹೊರಗಿಡಿ…

Sweet Home : ಮನೆಯಲ್ಲಿ ಸದಾಕಾಲ ಲಕ್ಷ್ಮಿ ನೆಲೆಸಬೇಕಾ..?‌ – ಹಾಗಾದರೆ ಈ ವಸ್ತುಗಳನ್ನು ಈಗಲೆ ಮನೆಯಿಂದ ಹೊರಗಿಡಿ…

ನ್ಯೂಸ್ ಆ್ಯರೋ : ಕನಸಿನ ಮನೆಯನ್ನು ಕಟ್ಟಬೇಕೆನ್ನುವುದು ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲೂ ಇದ್ದೇ ಇರುತ್ತದೆ. ಅದಕ್ಕಾಗಿ ನಾವು ಕಷ್ಟಪಟ್ಟು ದುಡಿಯುತ್ತೇವೆ. ಮನೆ ಕಟ್ಟುವುದೇನು ಸುಲಭದ ಕೆಲಸವಲ್ಲ, ಮನೆ ಕಟ್ಟುವಲ್ಲಿ ಮನೆಯ ವಿನ್ಯಾಸ ಎಷ್ಟು ಮುಖ್ಯವೋ ಅದೇ ರೀತಿ ಮನೆಯ ವಾಸ್ತು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ನಮ್ಮ ಜೀವನದ ಏಳು-ಬೀಳು ಆ ಮನೆಯ ವಾಸ್ತುವನ್ನು ನಿರ್ಧರಿಸಿರುತ್ತದೆ.

ಒಂದು ಮಾತಿದೆ.. ಮನೆ ಕಟ್ಟಿ ನೋಡು ಒಮ್ಮೆ ಮದುವೆ ಮಾಡಿ ನೋಡಿ. ಹೌದು ಮನೆ ಕಟ್ಟೋದು ಎಷ್ಟು ಕಷ್ಟವೋ ಅಷ್ಟೇ ಮದುವೆ ಮಾಡೋದು ಕೂಡ. ಮನೆ ವಾಸ್ತು ಸರಿಯಾಗಿದ್ದರೆ ಮನೆಯಲ್ಲಿ ನಡೆಯುವ ಮಂಗಳ ಕಾರ್ಯವೆಲ್ಲವೂ ಸಮಯಕ್ಕೆ ಸರಿಯಾಗಿ ಸುಗಮವಾಗಿ ನೆರವೇರುತ್ತದೆ.

ಹಾಗೇ ವಾಸ್ತುವಿನಂತೆ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದರಿಂದ ಕೂಡ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ. ಇನ್ನು ಕೆಲವೊಂದು ನಿಸರ್ಗದತ್ತ ಅಂಶಗಳು ಮನೆಯನ್ನು ಸೇರುವುದರಿಂದ ಒಳ್ಳೆಯದಾದರೆ ಇನ್ನು ಕೆಲವು ಅಂಶಗಳಿಂದ ಆ ಮನೆಗೆ ಕೆಟ್ಟದ್ದಾಗುತ್ತದೆ. ಹಾಗಾಗಿ ಮನೆಯಲ್ಲಿ ಈ ಕೆಳಗಿನ ವಸ್ತುಗಳಿವೆಯೇ..? ಒಂದು ವೇಳೆ ಇದ್ದರೆ ಇಂದೇ ಅದನ್ನು ಮನೆಯಿಂದ ಹೊರಗಿಡಿ. ಈ ಕೆಳಗಿನ ವಸ್ತುಗಳು ಮನೆಯಲ್ಲಿರುವುದರಿಂದ ನಿಮ್ಮ ಮನೆಗೆ ಬರಬೇಕಾದ ಅದೃಷ್ಟ ಲಕ್ಷ್ಮಿ ಮನೆಯಿಂದ ಹೊರಗೆ ಇರುತ್ತಾಳೆ. ಲಕ್ಷ್ಮಿ ಸದಾಕಾಲ ನಿಮ್ಮ ಮನೆಯಲ್ಲೇ ಇರಬೇಕಾದರೆ ಈ 5 ವಸ್ತುಗಳನ್ನು ಮನೆಯಿಂದ ಹೊರಗಿಡಿ.

ಪಾರಿವಾಳದ ಗೂಡು

ಮನೆಯೊಳಗೆ ಪಕ್ಷಿಗಳು ಬಂದರೆ ಆ ಮನೆಗೆ ಅದೃಷ್ಟ ಖುಲಾಯಿಸುತ್ತದೆ ಎನ್ನುವುದು ಹೆಚ್ಚಿನವರ ನಂಬಿಕೆ. ಆದರೆ ಪಾರಿವಾಳದ ವಿಷಯದಲ್ಲಿ ಅದು ಶುದ್ಧ ಸುಳ್ಳು. ಪಾರಿವಾಳಗಳು ಮನೆಯಲ್ಲಿ ಗೂಡನ್ನು ನಿರ್ಮಿಸುವುದರಿಂದ ಆ ಮನೆಯಲ್ಲಿನ ಆರ್ಥಿಕ ಸ್ಥಿತಿ ಕ್ಷೀಣಿಸುತ್ತಾ ಹೋಗುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಪಾರಿವಾಳವೊಂದು ಗೂಡನ್ನು ನಿರ್ಮಿಸಿ ಅದರಲ್ಲಿ ಮೊಟ್ಟೆಗಳನ್ನಿಟ್ಟಿದ್ದರೆ, ಸ್ವಲ್ಪ ಸಮಯ ಅಂದರೆ ಮೊಟ್ಟೆಗಳು ಮರಿಯಾಗುವ ತನಕ ಕಾದು ಅದು ಗೂಡಿನಿಂದ ಹಾರಿಹೋದ ನಂತರ ಆ ಗೂಡನ್ನು ಮನೆಯಿಂದ ಹೊರಹಾಕಿ.

ಜೇಡರಬಲೆ

ಜೇಡರ ಹುಳು ಮನೆಯಲ್ಲಿ ಬಲೆ ಹೆಣೆಯುವುದು ಒಳ್ಳೆಯದಲ್ಲ ಎನ್ನುವುದು ಸಾಕಷ್ಟು ಜನರಿಗೆ ಈಗಾಗಲೇ ಗೊತ್ತಿರಬಹುದು. ಜೇಡರ ಬಲೆ ಮನೆಯಲ್ಲಿದ್ದರೆ ಅದು ಆ ಮನೆಯ ದುರಾದೃಷ್ಟವನ್ನು ಸೂಚಿಸುತ್ತದೆ. ಹಾಗಾಗಿ ಒಂದುವೇಳೆ ನೀವು ಮನೆಯಲ್ಲಿ ಜೇಡರ ಬಲೆಯನ್ನು ಕಂಡರೆ ತಕ್ಷಣವೇ ಅದನ್ನು ಮನೆಯಿಂದ ತೆಗೆದುಹಾಕಿ. ಜೇಡರ ಬಲೆ ಮನೆಯಲ್ಲಿರುವುದರಿಂದ ನಮ್ಮ ಜೀವನದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಮತ್ತು ಆ ಮನೆಯ ಸದಸ್ಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದದಂತೆ ಮಾಡುತ್ತದೆ.

ಜೇನುಗೂಡು

ಜೇನು ಸವಿಯಲು ಮಧುರವಾಗಿದ್ದರೂ ಕೂಡ ಅದು ಮನೆಯಲ್ಲಿ ಗೂಡುಕಟ್ಟಿದರೆ ಆ ಮನೆಯ ಸದಸ್ಯರಿಗೆ ಅದುವೇ ಒಳಿತಲ್ಲ. ಯಾವ ಮನೆಯಲ್ಲಿ ಜೇನುಗೂಡು ಕಟ್ಟಿರುತ್ತದೆಯೋ ಆ ಮನೆಯಿಂದ ಲಕ್ಷ್ಮಿಯು ಹೊರಹೋಗುತ್ತಾಳೆ. ಇದರಿಂದ ಆ ಮನೆಯಲ್ಲಿ ಬಡತನ ಮತ್ತು ದುರಾದೃಷ್ಟ ಉದ್ಭವವಾಗುತ್ತದೆ. ಜೇನು ಗೂಡನ್ನು ಎಲ್ಲರಿಂದಲೂ ತೆಗೆಯಲು ಸಾಧ್ಯವಿಲ್ಲ. ಜಾಗರೂಕರಿಂದ ನುರಿತ ಜೇನು ಹಿಡಿಯುವವರನ್ನು ಕರೆಸಿ ಜೇನು ಗೂಡನ್ನು ತೆಗೆದು ಹಾಕುವುದು ಉತ್ತಮ. ಒಂದುವೇಳೆ ನಿಮ್ಮ ಮನೆಯಲ್ಲೂ ಜೇನುಗೂಡಿದ್ದರೆ ಯಕ್ಷಣವೇ ಅದನ್ನು ತೆಗೆದು ಹಾಕುವತ್ತ ಗಮನ ಹರಿಸಿ.

ಒಡೆದ ಕನ್ನಡಿ

ಇಂದಿಗೂ ಕೂಡ ಅದೆಷ್ಟೋ ಜನರ ಮನೆಯಲ್ಲಿ ಒಡೆದ ಕನ್ನಡಿಯನ್ನು ಇಟ್ಟುಕೊಳ್ಳುವುದಿಲ್ಲ. ಮನೆಯಲ್ಲಿ ಅಜ್ಜ, ಅಜ್ಜಿ ಅಥವಾ ಹಿರಿಯರಿದ್ದರೆ ಒಡೆದ ಕನ್ನಡಿಯಲ್ಲಿ ಮುಖ ನೋಡಲು ಕೂಡ ಬಿಡುವುದಿಲ್ಲ. ಹೌದು, ಒಡೆದ ಕನ್ನಡಿ ನಮ್ಮ ಆರ್ಥಿಕ ಅಭಿವೃದ್ಧಿಗೆ ಅಷ್ಟು ಅಡ್ಡಿಪಡಿಸುತ್ತದೆ. ಒಡೆದ ಕನ್ನಡಿ ಮನೆಯಲ್ಲಿದ್ದರೆ ದುಷ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸಿ, ಆ ಮನೆಯಲ್ಲಿ ನೆಲೆಯಾಗಿದ್ದ ಲಕ್ಷ್ಮಿಯನ್ನು ಮನೆಯಿಂದ ಹೊರಹಾಕುತ್ತದೆ. ಅಷ್ಟು ಮಾತ್ರವಲ್ಲ, ಇದು ಆ ಮನೆಯ ಬಡತನವನ್ನೂ ಕೂಡ ಸೂಚಿಸುತ್ತದೆ. ಒಡೆದ ಕನ್ನಡಿಯನ್ನು ಮನೆಯಿಂದ ಹೊರ ಹಾಕುವುದರಿಂದ ಮನೆಯಲ್ಲಿದ್ದ ದುಷ್ಟ ಶಕ್ತಿಗಳು ಅದೇ ಕೂಡಲೇ ಮನೆಬಿಟ್ಟು ಹೋಗುತ್ತದೆ.

ಹಳೆಯ ವೈರ್ ಗಳು

ಈ ಮೇಲೆ ನಾವು ಹೇಳಿರುವ ನಾಲ್ಕು ವಸ್ತುಗಳಂತೆ ಈ ವಸ್ತುಗಳೂ ಕೂಡ ನಮ್ಮ ಮನೆಯಲ್ಲಿ ಇಟ್ಟುಕೊಳ್ಳಬಾರದು. ತುಂಬಾ ವರ್ಷಗಳಿಂದ ಉಪಯೋಗಿಸದ ವೈರ್‌ಗಳು ನಿಮ್ಮ ಮನೆಯಲ್ಲಿದ್ದರೆ ಅದನ್ನು ಇಂದೇ ಮನೆಯಿಂದ ಹೊರಹಾಕುವುದು ಉತ್ತಮ. ಹಳೆಯ ವೈರ್‌ಗಳು ಮಾತ್ರವಲ್ಲ, ಒಂದುವೇಳೆ ಮನೆಯಲ್ಲಿ ಯಾವುದೇ ವಿದ್ಯುತ್‌ ವಸ್ತುಗಳು ಕಾರ್ಯನಿರ್ವಹಿಸದೇ ಹಾಗೇ ಇದ್ದರೆ ಅದನ್ನು ಮೊದಲು ಸರಿಪಡಿಸಿಕೊಳ್ಳುವುದು ಒಳ್ಳೆಯದು.

Related post

ಡೈರೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ UIDAI; ತಿಂಗಳಿಗೆ 2 ಲಕ್ಷಕ್ಕೂ ಅಧಿಕ ಸಂಬಳ

ಡೈರೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ UIDAI; ತಿಂಗಳಿಗೆ 2 ಲಕ್ಷಕ್ಕೂ ಅಧಿಕ…

ನ್ಯೂಸ್ ಆರೋ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​ ಹುದ್ದೆಗಳು…
ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಆದೇಶ

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಆದೇಶ

ನ್ಯೂಸ್ ಆ್ಯರೋ : ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಿ ಇಂದು…
ಆರೋಗ್ಯ ಸಮಸ್ಯೆ; 14 ತಿಂಗಳ ಬಳಿಕ ಸ್ಯಾಂಟ್ರೋ ರವಿಗೆ ಜಾಮೀನು ನೀಡಿದ ನ್ಯಾಯಾಲಯ

ಆರೋಗ್ಯ ಸಮಸ್ಯೆ; 14 ತಿಂಗಳ ಬಳಿಕ ಸ್ಯಾಂಟ್ರೋ ರವಿಗೆ ಜಾಮೀನು ನೀಡಿದ…

ನ್ಯೂಸ್ ಆ್ಯರೋ : ಅತ್ಯಾಚಾರ, ಕೊಲೆ ಬೆದರಿಕೆ ಪ್ರಕರಣದ ಆರೋಪಿ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಗೆ ಮೈಸೂರಿನ ಆರನೇ ಹೆಚ್ಚುವರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಬಂಧಿತನಾಗಿ…

Leave a Reply

Your email address will not be published. Required fields are marked *