ರಾಜ್ಯದಲ್ಲಿ ರಾಜಕೀಯ ತರಬೇತಿ ಕಾಲೇಜು ಆರಂಭ : ಯು‌.ಟಿ. ಖಾದರ್ – ಉಪನ್ಯಾಸಕರ ಜೊತೆ ರಾಜಕಾರಣಿಗಳೂ ನೀಡಲಿದ್ದಾರಂತೆ ತರಬೇತಿ…!!

ರಾಜ್ಯದಲ್ಲಿ ರಾಜಕೀಯ ತರಬೇತಿ ಕಾಲೇಜು ಆರಂಭ : ಯು‌.ಟಿ. ಖಾದರ್ – ಉಪನ್ಯಾಸಕರ ಜೊತೆ ರಾಜಕಾರಣಿಗಳೂ ನೀಡಲಿದ್ದಾರಂತೆ ತರಬೇತಿ…!!

ನ್ಯೂಸ್ ಆ್ಯರೋ : ಇಂಜಿನಿಯರಿಂಗ್, ಡಾಕ್ಟರ್, ವಕೀಲಿ ವೃತ್ತಿ ಹೀಗೆ ಎಲ್ಲಾ ವಿಷಯಗಳಿಗೂ ಪ್ರತ್ಯೇಕ ಕಾಲೇಜುಗಳಿವೆ. ಆದರೆ ಪದವಿಯ ನಂತರ ಯುವ ಜನರಿಗೆ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ಮತ್ತು ಸರ್ಕಾರಿ ಕೆಲಸಗಳ ಬಗ್ಗೆ ಮಾಹಿತಿ ಪಡೆಯಲು ತರಬೇತಿ ಕೇಂದ್ರಗಳಿಲ್ಲ. ಈ ನಿಟ್ಟಿನಲ್ಲಿ ರಾಜಕೀಯ ತರಬೇತಿ ಸಂಸ್ಥೆ ಆರಂಭಿಸುವ ಯೋಜನೆ ಇದೆ’ ಎಂದು ನೂತನ ಸ್ಪೀಕರ್ ಯು.ಟಿ ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಕಾಲೇಜು ಎಲ್ಲಿ ಆರಂಭವಾಗಲಿದೆ?
ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಮಹತ್ವದ ಯೋಜನೆಗೆ ನಮ್ಮ ಸರ್ಕಾರ ಶೀಘ್ರದಲ್ಲೇ ಹಸಿರು ನಿಶಾನೆ ತೋರಿಸಲಿದೆ. ಸದ್ಯ ಪುಣೆಯಲ್ಲಿ ಈ ರೀತಿಯ ತರಬೇತಿ ಸಂಸ್ಥೆ ಜಾರಿಯಲ್ಲಿದ್ದು, ಅವರ ಜೊತೆ ಚರ್ಚಿಸಿ ನಮ್ಮ ರಾಜ್ಯದಲ್ಲೂ ಒಂದು ವರ್ಷದ ಕೋರ್ಸ್ ಆರಂಭಿಸಲಾಗುವುದು. ರಾಜ್ಯದ ಪ್ರಮುಖ ಕೇಂದ್ರದಲ್ಲಿ ಈ ಕಾಲೇಜು ಸ್ಥಾಪನೆಯಾಗಲಿದ್ದು, ನುರಿತ ಉಪನ್ಯಾಸಕರನ್ನೂ ನೇಮಿಸಲಾಗುವುದು’ ಎಂದಿದ್ದಾರೆ.

ತರಗತಿಗಳು ಹೇಗೆ ನಡೆಯಲಿದೆ?
ಈ ರಾಜಕೀಯ ತರಬೇತಿ ಸಂಸ್ಥೆ ರಾಜ್ಯದಲ್ಲಿ ಆದಷ್ಟು ಬೇಗ ತಲೆ ಎತ್ತಲಿದೆ ಎಂಬ ವಿಚಾರವನ್ನು ಸ್ಪೀಕರ್ ಪ್ರಸ್ತಾಪಿಸಿದ್ದಾರೆ. ಅಲ್ಲದೇ ಈ ಕೋರ್ಸ್ ಒಂದು ವರ್ಷದ ಅವಧಿಗೆ ಸೀಮಿತವಾಗಿದ್ದು, 6ತಿಂಗಳು ಥಿಯರಿ ಹಾಗೂ 6 ತಿಂಗಳು ಪ್ರಾಕ್ಟಿಕಲ್ ತರಗತಿಗಳು ನಡೆಯಲಿದೆ. ಸಂವಿಧಾನದಲ್ಲಿರುವ ಕಾನೂನುಗಳು, ಪತ್ರಕೋದ್ಯಮ, ಸಾಮಾನ್ಯ ಜ್ಞಾನ ಹಾಗೂ ರಾಜ್ಯಕೀಯ ಶಾಸ್ತ್ರದ ವಿವಿಧ ಭಾಗಗಳನ್ನು ಇಲ್ಲಿ ಅಭ್ಯರ್ಥಿಗಳಿಗೆ ಕಲಿಸಲಾಗುವುದು ಎಂದು ಸ್ಪೀಕರ್ ಯು.ಟಿ‌ ಖಾದರ್ ತಿಳಿಸಿದ್ದಾರೆ.

ರಾಜಕಾರಣಿಗಳಿಂದಲೂ ಕ್ಲಾಸ್!
ಸದ್ಯದಲ್ಲೇ ರಾಜ್ಯದಲ್ಲಿ ತಲೆ ಎತ್ತಲಿರುವ ರಾಜಕೀಯ ತರಬೇತಿ ಸಂಸ್ಥೆಯಲ್ಲಿ ಒಂದು ವರ್ಷದ ಅವಧಿಗೆ ಕೋರ್ಸ್ ಇರಲಿದ್ದು, 6 ನುರಿತ ಉಪನ್ಯಾಸಕರನ್ನೂ ಕೂಡ ನೇಮಿಸಲಾಗುತ್ತದೆ. ಇದರೊಂದಿಗೆ ರಾಜ್ಯದ ಹಿರಿಯ ರಾಜಕೀಯ ನಾಯಕರು, ಮುತ್ಸದ್ದಿಗಳು ತರಗತಿಗಳಿಗೆ ಭೇಟಿ ನೀಡಿ ತರಬೇತಿ ನೀಡುತ್ತಾರೆ. ಕೋರ್ಸ್ ಮುಗಿದ ಬಳಿಕ ಯುವಕರು ರಾಜಕೀಯಕ್ಕೂ ಪ್ರವೇಶ ಮಾಡಬಹುದು ಇಲ್ಲವೇ ಶಾಸಕರ ಜೊತೆಗೆ ಕೆಲಸ ಮಾಡಬಹುದಾಗಿದೆ’ ಎಂದು ಯು.ಟಿ ಖಾದರ್ ಅವರು ತಿಳಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *