ಸಿಎಂ ನಿವಾಸಕ್ಕೆ ಆಟೋದಲ್ಲಿ ತಂದ ಬಿರಿಯಾನಿಗೆ ನೋ ಎಂಟ್ರಿ – ಬೆಂಜ್ ಕಾರ್ ಬಿರಿಯಾನಿಗೆ ರಾಜ ಮರ್ಯಾದೆ : ಏನಿದು ಹೊಸ ಸುದ್ದಿ?
- ರಾಜಕೀಯ
- June 29, 2023
- No Comment
- 580
ನ್ಯೂಸ್ ಆ್ಯರೋ : ಇಂದು ಎಲ್ಲೆಡೆ ಬಕ್ರೀದ್ (Bakrid )ಹಬ್ಬವನ್ನು ಮುಸ್ಲಿಮ್ ಬಾಂಧವರು ಆಚರಿಸಿದರು. ಹಬ್ಬದ ಹಿನ್ನಲೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ (Zameer Ahmad Khan) ಭರ್ಜರಿ ಬಾಡೂಟವನ್ನು (Biriyani) ಸಿಎಂ ಸಿದ್ದರಾಮಯ್ಯ (siddaramaiah) ಅವರಿಗೆ ಎರಡು ಬಾರಿ ಕಳುಹಿಸಿದ ಪ್ರಸಂಗ ನಡೆದಿದೆ.
ಏನಾಯ್ತು?
ಮೊದಲು ಜಮೀರ್ ಅಹಮದ್ ಕಡೆಯಿಂದ ಆಟೋ ರಿಕ್ಷಾದಲ್ಲಿ ಬಿರಿಯಾನಿ ಕಳುಹಿಸಲಾಗಿತ್ತು. ಆದರೆ ಇದನ್ನು ಸಿಎಂ ನಿವಾಸದೊಳಗೆ ತೆಗೆದುಕೊಂಡು ಹೋಗಲು ಪೊಲೀಸರು ನಿರಾಕರಿಸಿದರು.
ಆಟೋದಲ್ಲಿದ್ದ ಬಿರಿಯಾನಿಯನ್ನು ಪೊಲೀಸರು ವಾಪಸ್ ಕಳುಹಿಸಿದರು. ಬಳಿಕ ಇದನ್ನು ಹೇಗಾದರೂ ಮಾಡಿ ಸಿಎಂ ನಿವಾಸಕ್ಕೆ ಕಳುಹಿಸಬೇಕೆಂದು ಜಮೀರ್ ಬೆಂಬಲಿಗರು ಅದನ್ನು ಬೆಂಜ್ ಕಾರಿಗೆ (Benz Car) ರವಾನಿಸಿದರು.
ಬೆಂಜ್ ಕಾರಿನಲ್ಲಿ ಆಗಮಿಸಿದ ಬಿರಿಯಾನಿಗೆ ಪೊಲೀಸರು ಅನುಮತಿ ನೀಡಿದರು. ಬಿರಿಯಾನಿಯನ್ನು ಸಿಎಂ ನಿವಾಸಕ್ಕೆ ನೀಡಿ ಜಮೀರ್ ಬೆಂಬಲಿಗರು ವಾಪಾಸಾಗಿದ್ದಾರೆ. ಆದರೆ ಆಟೋದಲ್ಲಿ ಇದ್ದ ಬಿರಿಯಾನಿಗೆ ಸಿಗದ ಮರ್ಯಾದೆ ಬೆಂಜ್ ಕಾರಿನಲ್ಲಿ ಸಿಕ್ಕಿದ್ದು ಬಡತನ ಹಾಗೂ ಶ್ರೀಮಂತಿಕೆಗೆ ಇರುವ ವ್ಯತ್ಯಾಸವಾಗಿ ಕಂಡಿದ್ದು ಮಾತ್ರ ಸುಳ್ಳಲ್ಲ.