ಸಿಎಂ ನಿವಾಸಕ್ಕೆ ಆಟೋದಲ್ಲಿ ತಂದ ಬಿರಿಯಾನಿಗೆ ನೋ ಎಂಟ್ರಿ – ಬೆಂಜ್ ಕಾರ್ ಬಿರಿಯಾನಿಗೆ ರಾಜ ಮರ್ಯಾದೆ : ಏನಿದು ಹೊಸ ಸುದ್ದಿ?

ಸಿಎಂ ನಿವಾಸಕ್ಕೆ ಆಟೋದಲ್ಲಿ ತಂದ ಬಿರಿಯಾನಿಗೆ ನೋ ಎಂಟ್ರಿ – ಬೆಂಜ್ ಕಾರ್ ಬಿರಿಯಾನಿಗೆ ರಾಜ ಮರ್ಯಾದೆ : ಏನಿದು ಹೊಸ ಸುದ್ದಿ?

ನ್ಯೂಸ್ ಆ್ಯರೋ‌ : ಇಂದು ಎಲ್ಲೆಡೆ ಬಕ್ರೀದ್ (Bakrid )ಹಬ್ಬವನ್ನು ಮುಸ್ಲಿಮ್ ಬಾಂಧವರು ಆಚರಿಸಿದರು. ಹಬ್ಬದ ಹಿನ್ನಲೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ (Zameer Ahmad Khan) ಭರ್ಜರಿ ಬಾಡೂಟವನ್ನು (Biriyani) ಸಿಎಂ ಸಿದ್ದರಾಮಯ್ಯ (siddaramaiah) ಅವರಿಗೆ ಎರಡು ಬಾರಿ ಕಳುಹಿಸಿದ ಪ್ರಸಂಗ ನಡೆದಿದೆ.

ಏನಾಯ್ತು?

ಮೊದಲು ಜಮೀರ್ ಅಹಮದ್ ಕಡೆಯಿಂದ ಆಟೋ ರಿಕ್ಷಾದಲ್ಲಿ ಬಿರಿಯಾನಿ ಕಳುಹಿಸಲಾಗಿತ್ತು. ಆದರೆ ಇದನ್ನು ಸಿಎಂ ನಿವಾಸದೊಳಗೆ ತೆಗೆದುಕೊಂಡು ಹೋಗಲು ಪೊಲೀಸರು ನಿರಾಕರಿಸಿದರು.

ಆಟೋದಲ್ಲಿದ್ದ ಬಿರಿಯಾನಿಯನ್ನು ಪೊಲೀಸರು ವಾಪಸ್ ಕಳುಹಿಸಿದರು. ಬಳಿಕ ಇದನ್ನು ಹೇಗಾದರೂ ಮಾಡಿ ಸಿಎಂ ನಿವಾಸಕ್ಕೆ ಕಳುಹಿಸಬೇಕೆಂದು ಜಮೀರ್ ಬೆಂಬಲಿಗರು ಅದನ್ನು ಬೆಂಜ್ ಕಾರಿಗೆ (Benz Car) ರವಾನಿಸಿದರು.

ಬೆಂಜ್ ಕಾರಿನಲ್ಲಿ ಆಗಮಿಸಿದ ಬಿರಿಯಾನಿಗೆ ಪೊಲೀಸರು ಅನುಮತಿ ನೀಡಿದರು. ಬಿರಿಯಾನಿಯನ್ನು ಸಿಎಂ ನಿವಾಸಕ್ಕೆ ನೀಡಿ ಜಮೀರ್ ಬೆಂಬಲಿಗರು ವಾಪಾಸಾಗಿದ್ದಾರೆ. ಆದರೆ ಆಟೋದಲ್ಲಿ ಇದ್ದ ಬಿರಿಯಾನಿಗೆ ಸಿಗದ ಮರ್ಯಾದೆ ಬೆಂಜ್ ಕಾರಿನಲ್ಲಿ ಸಿಕ್ಕಿದ್ದು ಬಡತನ ಹಾಗೂ ಶ್ರೀಮಂತಿಕೆಗೆ ಇರುವ ವ್ಯತ್ಯಾಸವಾಗಿ ಕಂಡಿದ್ದು ಮಾತ್ರ‌ ಸುಳ್ಳಲ್ಲ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *