ಹೊಸ ಸಮವಸ್ತ್ರದ ಜೊತೆ ಮಿಂಚಲಿದ್ದಾರೆ ಹೊಸ ಸಂಸತ್ ಸಿಬ್ಬಂದಿ – ಹೊಸ ವಿನ್ಯಾಸದ ದಿರಿಸು ಹೇಗಿರಲಿದೆ ಗೊತ್ತಾ?

ಹೊಸ ಸಮವಸ್ತ್ರದ ಜೊತೆ ಮಿಂಚಲಿದ್ದಾರೆ ಹೊಸ ಸಂಸತ್ ಸಿಬ್ಬಂದಿ – ಹೊಸ ವಿನ್ಯಾಸದ ದಿರಿಸು ಹೇಗಿರಲಿದೆ ಗೊತ್ತಾ?

ನ್ಯೂಸ್ ಆ್ಯರೋ‌ : ಸೆಪ್ಟೆಂಬರ್ 18ರಿಂದ ಸಂಸತ್ ನ ಹೊಸ ಕಟ್ಟಡದಲ್ಲಿ ವಿಶೇಷ ಅಧಿವೇಶನ ನಡೆಯಲಿದ್ದು, ಈ ವೇಳೆ ರಾಜ್ಯಸಭೆ ಮತ್ತು ಲೋಕಸಭೆಯ ಒಳ ಮತ್ತು ಹೊರಗಿನ ಸಿಬ್ಬಂದಿ ಹೊಸ ಸಮವಸ್ತ್ರ ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಮವಸ್ತ್ರಕ್ಕೆ ಭಾರತೀಯತೆಯ ಸ್ಪರ್ಶ ಇರಲಿದೆ.

ಹೊಸ ವಿನ್ಯಾಸ

ಹೊಸ ಸಮವಸ್ತ್ರಗಳ ಪೈಕಿ ಎರಡೂ ಸದನಗಳ ಮಾರ್ಷಲ್ ಗಳು ಮಣಿಪುರಿ ತಲೆಗವಸು ಧರಿಸಲಿದ್ದಾರೆ. ಕಚೇರಿ ಸಿಬ್ಬಂದಿ, ಸಂಸದೀಯ ವರದಿಗಾರಿಕೆ ವಿಭಾಗದ ಅಧಿಕಾರಿಗಳಿಗೆ ತಾವರೆ ಹೂವಿನ ಚಿಹ್ನೆ ಇರುವ ಅಂಗಿ ಮತ್ತು ಮಹಿಳಾ ಅಧಿಕಾರಿಗಳಿಗೆ ಹೊಸ ವಿನ್ಯಾಸದ ಸೀರೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾವರೆ ಹೂ ಭಾರತದ ರಾಷ್ಟ್ರೀಯ ಪುಷ್ಪವಾದರೂ ಬಿಜೆಪಿಯ ಚಿಹ್ನೆಯಾಗಿರುವುದರಿಂದ ಈ ವಿಚಾರ ವಿವಾದ ಎಬ್ಬಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹೊಸ ಸಮವಸ್ತ್ರದ ವಿನ್ಯಾಸದ ಕುರಿತು ಎಲ್ಲಾ 18 ನ್ಯಾಷನಲ್ ಇಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (NIFT) ಬಳಿ ಅಭಿಪ್ರಾಯ ಕೇಳಲಾಗಿತ್ತು. ಕೊನೆಗೆ ತಜ್ಞರ ಸಮಿತಿ ಈ ಸಮವಸ್ತ್ರದ ವಿನ್ಯಾಸವನ್ನು ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಸಂಸತ್ ನ 5 ಮುಖ್ಯ ವಿಭಾಗಗಳಾದ ವರದಿಗಾರಿಕೆ, ಟೇಬಲ್ ಆಫೀಸ್, ನೋಟಿಸ್ ಆಫೀಸ್, ಶಾಸಕಾಂಗ ಶಾಖೆ ಮತ್ತು ಭದ್ರತೆಯ ಸಿಬ್ಬಂದಿ ಹೊಸ ಸಮವಸ್ತ್ರ ಧರಿಸಿ ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಸತ್ ನ ಮುಖ ಎಂದು ಇವರನ್ನು ಕರೆಯಲಾಗುತ್ತದೆ. ಹೊಸ ಸಮವಸ್ತ್ರ ಭಾರತೀಯ ಸಂಸತ್ತಿನ ಘನತೆ ಮತ್ತು ಅಂದವನ್ನು ಹೆಚ್ಚಿಸುತ್ತದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಮಾರ್ಷಲ್ ಗಳು ಸಫಾರಿ ಸೂಟ್ ಬದಲು ಕ್ರೀಮ್ ಬಣ್ಣದ ಕುರ್ತಾ ಪೈಜಾಮಾ ಧರಿಸಿ ಮಿಂಚಲಿದ್ದಾರೆ. ಪೇಟದ ಬದಲು ಮಣಿಪುರು ತೆಲೆಗವುಸು ಅವರ ಶಿರವನ್ನು ಅಲಂಕರಿಸಲಿದೆ.

2000 ಇಸವಿಯಿಂದ ಪ್ರತಿ 2 ವರ್ಷಗಳಿಗೊಮ್ಮೆ ಸಮವಸ್ತ್ರ ಖರೀದಿಸಲು ಈ 5 ವಿಭಾಗಗಳ ಪುರುಷರಿಗೆ 16,000 ರೂ. ಮತ್ತು ಮಹಿಳೆಯರಿಗೆ 17,000 ರೂ. ನೀಡಲಾಗುತ್ತಿದೆ.

5 ದಿನಗಳ ವಿಶೇಷ ಅಧಿವೇಶನ ಸೆಪ್ಟಂಬರ್ 18ರಂದು ಆರಂಭವಾಗಿ 22ರ ತನಕ ಜರಗಲಿದೆ. ಮೊದಲ ದಿನದ ಅಧಿವೇಶನ ಹಳೆ ಪಾರ್ಲಿಮೆಂಟ್ ಕಟ್ಟಡದಲ್ಲಿ ಜರಗಿದರೆ ಉಳಿದ ದಿನಗಳ ಕಲಾಪ ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಹೊಸ ಕಟ್ಟಡದಲ್ಲಿ ನಡೆಯಲಿದೆ. ವಿಶೇಷ ಅಧಿವೇಶದ ಅಜೆಂಡಾವನ್ನು ಸರಕಾರ ಇದುವರೆಗೆ ಘೋಷಿಸಿಲ್ಲ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *