ಕಿಚ್ಚನ ಮುಂದೆಯೇ ವಾದಕ್ಕೆ ಇಳಿದ ತ್ರಿವಿಕ್ರಮ್; ವಾರದ ಕತೆ ನಡೆಸಿಕೊಂಡಲು ಬಂದು ಅರ್ಧಕ್ಕೆ ಹೋದ ಸುದೀಪ್
ನ್ಯೂಸ್ ಆ್ಯರೋ: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ವಾರದ ಕತೆಯನ್ನು ನಡೆಸಿಕೊಡಲು ಕಿಚ್ಚ ಸುದೀಪನ ಎಂಟ್ರಿಯಾಗಿದೆ. ಆದರೆ ಅಚ್ಚರಿ ಎಂಬಂತೆ ಬಿಗ್ಬಾಸ್ ವೇದಿಕೆ ಮೇಲಿಂದಲೇ ಕಿಚ್ಚ ಸುದೀಪ್ ಹೊರಟು ಹೋಗಿದ್ದಾರೆ.
ಬಿಗ್ಬಾಸ್ ವೇದಿಕೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ಕಿಚ್ಚ ಸುದೀಪ್ ಕೋಪದಲ್ಲೇ ಆಚೆ ಹೋಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ತ್ರಿವಿಕ್ರಮ್. ಈ ಹಿಂದೆ ಬಿಗ್ಬಾಸ್ ಮನೆ ಮಂದಿಗೆ ಒಂದು ಟಾಸ್ಕ್ ಅನ್ನು ಕೊಟ್ಟಿರುತ್ತಾರೆ.
ಆಗ ಆ ಟಾಸ್ಕ್ನಲ್ಲಿ ತ್ರಿವಿಕ್ರಮ್, ಭವ್ಯಾ ಗೌಡ ಹಾಗೂ ರಜತ್ ಆಚೆ ಉಳಿದುಕೊಂಡಿರುತ್ತಾರೆ. ಅಲ್ಲದೇ ಚೈತ್ರಾ, ಧನರಾಜ್, ಮಂಜು, ಮೋಕ್ಷಿತಾ, ಗೌತಮಿ ಹಾಗೂ ಹನುಮಂತ ಟಾಸ್ಕ್ ಆಡಲು ಓಕೆ ಅಂತ ಹೇಳಿತ್ತಾರೆ. ಆಗ ಧನರಾಜ್, ಹನುಮಂತನ ಮುಂದೆ ಬಂದ ತ್ರಿವಿಕ್ರಮ್ ಇಷ್ಟು ದಿನ ನಾವು ನಿಮಗೆ ಅನ್ನ ಹಾಕಿದ್ದೀವಿ, ಈಗ ನೀವು ನಮಗೆ ಹಾಕಿ ಎನ್ನುವ ಹೇಳಿಕೆ ನೀಡುತ್ತಾರೆ.
ಇದೇ ವಿಚಾರವಾಗಿ ಕಿಚ್ಚನ ಪಂಚಾಯ್ತಿಯಲ್ಲಿ ಪ್ರಸ್ತಾಪ ಆಗಿದೆ. ಆಗ ಕಿಚ್ಚ ಸುದೀಪ್ ಮುಂದೆಯೇ ತ್ರಿವಿಕ್ರಮ್ ನಾನು ಎಲ್ಲಿ ಹಾಗೇ ಹೇಳಿದ್ದೀನಿ ಅಂತ ವಾದ ಮಾಡಿದ್ದಾರೆ. ಇದಕ್ಕೆ ಕೋಪಗೊಂಡ ಕಿಚ್ಚ ಸುದೀಪ್ ವೇದಿಕೆಯಿಂದಲೇ ಹೊರಟು ಹೋಗಿದ್ದಾರೆ.
Leave a Comment