ಕೊಲೆ ಪ್ರಕರಣದಲ್ಲಿ ದರ್ಶನ್​ಗೆ ಬೇಲ್​; ಕಾಲಾಯ ತಸ್ಮೈ ನಮಃ ಎಂದ ನಟ ಶ್ರೀಮುರಳಿ

Murali
Spread the love

ನ್ಯೂಸ್ ಆ್ಯರೋ: “ಕೆಟ್ಟದ್ದು ಬರೋದೇ ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗುವುದಕ್ಕೆ, ಒಳ್ಳೆಯ ದಿನಗಳನ್ನು ತೋರಿಸುವುದಕ್ಕೆ. ಏನೇ ನೋವಾಗಿದ್ದರು ಎಲ್ಲರಿಗೂ ನೆಮ್ಮದಿ, ಸಮಾಧಾನ ಸಿಕ್ಕಿದೆ. ಕಾಲಾಯ ತಸ್ಮೈ ನಮಃ, ದೇವರು ನೋಡಿಕೊಳ್ಳುತ್ತಾನೆ. ದರ್ಶನ್ ಆಸ್ಪತ್ರೆಯಿಂದ ಬಂದ ಬಳಿಕ ಅವರನ್ನು ಭೇಟಿ ಮಾಡುತ್ತೇನೆ” ಎಂದು ನಟ ಶ್ರೀಮುರಳಿ ಹೇಳಿದರು.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ಗೆ ಜಾಮೀನು ಸಿಕ್ಕ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟ ಶ್ರೀಮುರಳಿ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಶ್ರೀಮುರಳಿಯನ್ನು ನೋಡಿದ ಅಭಿಮಾನಿಗಳು ಹಾಗೂ ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದರು. ಕೆಲ ಅಭಿಮಾನಿಗಳು ಶ್ರೀಮುರಳಿ ಜೊತೆ ಫೋಟೋ ತೆಗೆಸಿಕೊಂಡರು.

ನಂತರ ನಟ ಶಿವರಾಜ್ ಕುಮಾರ್ ಹಾಗೂ ಕುಟುಂಬಸ್ಥರು ನಡೆಸುತ್ತಿರುವ ಶಕ್ತಿಧಾ‌ಮಕ್ಕೆ ತೆರಳಿ, ಅಲ್ಲಿನ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಇದರ ಜೊತೆಗೆ ಅಭಿಮಾನಿಗಳು ಶ್ರೀಮುರಳಿ ಅವರಿಂದ ಕೇಕ್ ಕಟ್ ಮಾಡಿಸಿ, ಹಾರ ಹಾಕಿ ಹುಟ್ಟುಹಬ್ಬ ಆಚರಿಸಿದರು.

Leave a Comment

Leave a Reply

Your email address will not be published. Required fields are marked *

error: Content is protected !!