ನೆಲ್ಯಾಡಿ : ರಿಯಲ್ KGF ಸ್ಟೋರಿ, ರಸ್ತೆ ಬದಿ ನಿಂತ ಲಾರಿಗೆ ಬಟ್ಟೆ ಕಟ್ಟಿ ಮಗುವಿಗೆ ಲಾಲಿ ಹಾಡು – ವೈರಲ್ ಆಯ್ತು ತಾಯಿ ಪ್ರೀತಿ ಸಾರುವ ಮನ ಮಿಡಿಯುವ ದೃಶ್ಯ..!!

ನೆಲ್ಯಾಡಿ : ರಿಯಲ್ KGF ಸ್ಟೋರಿ, ರಸ್ತೆ ಬದಿ ನಿಂತ ಲಾರಿಗೆ ಬಟ್ಟೆ ಕಟ್ಟಿ ಮಗುವಿಗೆ ಲಾಲಿ ಹಾಡು – ವೈರಲ್ ಆಯ್ತು ತಾಯಿ ಪ್ರೀತಿ ಸಾರುವ ಮನ ಮಿಡಿಯುವ ದೃಶ್ಯ..!!

ನ್ಯೂಸ್ ಆ್ಯರೋ‌ : ತಾಯಿ ಪ್ರೀತಿಗೆ ಕೊನೆಯಿಲ್ಲ. ಎಷ್ಟೇ ಕಷ್ಟ ಎದುರಾದರೂ ಅದನ್ನೆಲ್ಲ ನುಂಗಿ ಮಕ್ಕಳ ಏಳಿಗೆಗೆ ಶ್ರಮಿಸುವವಳೇ ತಾಯಿ. ಇದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ‘ಕೆ.ಜಿ.ಎಫ್.’ ಚಿತ್ರದಲ್ಲಿ ದೃಶ್ಯವೊಂದಿದೆ. ಅಲೆಮಾರಿ ತಾಯೊಬ್ಬಳು ಚಿಕ್ಕ ಮಗುವನ್ನು ಕಂಕುಳಲ್ಲಿ ಕರೆದುಕೊಂಡು ಹೋಗುವಾಗ ರಸ್ತೆ ಮಧ್ಯೆ ಬನ್ ಬೀಳುತ್ತದೆ. ವಾಹನ ಓಡಾಡುತ್ತಿರುವುದನ್ನು ಲೆಕ್ಕಿಸದೇ ಮಗುವಿಗಾಗಿ ಬನ್ ಎತ್ತಿಕೊಳ್ಳಲು ಆಕೆ ಮುಂದಾಗುತ್ತಾಳೆ. ಈ ದೃಶ್ಯ ಎಲ್ಲರ ಮನ ಕಲುಕಿತ್ತು.

ವೈರಲ್ ಆದ ದೃಶ್ಯ

ಇದು ರೀಲ್ ನ ಕಥೆಯಾಯಿತು. ಸದ್ಯ ತಾಯಿಯ ಮಮತೆ ಸಾರುವ ರಿಯಲ್ ದೃಶ್ಯವೊಂದು ಈಗ ವೈರಲ್ ಆಗಿದೆ. ತಾನು ಮಾಡುವ ಕೂಲಿ ಕೆಲಸದ ಮಧ್ಯೆಯೂ ಮಗುವಿಗಾಗಿ ಮಿಡಿಯುವ ತಾಯಿಯ ಜೀವವೊಂದು ಎಲ್ಲರ ಗಮನ ಸೆಳೆಯುತ್ತಿದೆ.

ವೀಡಿಯೋದಲ್ಲೇನಿದೆ?

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ಸೆರೆಯಾದ ವೀಡಿಯೋ ಮನ ಮಿಡಿಯುವಂತಿದೆ. ಮಂಗಳೂರು – ಬೆಂಗಳೂರು ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಡಿವೈಡರ್ ನಲ್ಲಿ ಗಿಡ ನೆಡಲಾಗುತ್ತಿದೆ.

ವೀಡಿಯೋ ನೋಡಿ

ಈ ಕೆಲಸ ನಿರ್ವಹಿಸುವ ಕೂಲಿ ಕೆಲಸದ ಮಹಿಳೆಯೊಬ್ಬರು ರಸ್ತೆಯಲ್ಲಿ ನಿಂತಿರುವ ಟಿಪ್ಪರ್ ಗೆ ಬಟ್ಟೆ ಕಟ್ಟಿ ತನ್ನ ಮಗುವನ್ನು ತೂಗುತ್ತಿದ್ದಾರೆ. ಕೆಲಸದ ಬ್ಯುಸಿ ಮಧ್ಯೆಯೂ ಮಗುವಿನ ಆರೈಕೆ ಮರೆಯದ ತಾಯಿಯ ಪ್ರೀತಿ ಸಾರುವ ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಾಮಾನ್ಯವಾಗಿ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ ಮುಂತಾದ ಶ್ರಮ ಬೇಡುವ ಕೆಲಸಗಳನ್ನು ಅಲೆಮಾರಿಗಳು ನಿರ್ವಹಿಸುತ್ತಾರೆ. ಕೆಲಸ ನಡೆಯುವ ಸ್ಥಳಗಳಲ್ಲಿ ಟೆಂಟ್ ಹಾಕಿ ವಾಸ ಮಾಡುವ ಅವರ ಮಕ್ಕಳಿಗೆ ಸೂಕ್ತ ಆರೈಕೆ ದೊರೆಯುವುದಿಲ್ಲ. ಆದರೂ ತಾಯಂದಿರು ತಮ್ಮ ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಶಕ್ತಿ ಮೀರಿ ಶ್ರಮಿಸುತ್ತಾರೆ. ಈ ವಿಡಿಯೋ ಕೂಡ ಬಡತನದ ಬೇಗೆಯಲ್ಲೂ ಮಗು ಮೇಲಿನ ತಾಯಿಯ ಮಮಕಾರವನ್ನು ತೆರೆದಿಟ್ಟಿದೆ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *