ಸದೃಢ ಆರೋಗ್ಯಕ್ಕೆ ಕಪ್ಪು ಉಪ್ಪು ಪರಿಣಾಮಕಾರಿ – ಕಪ್ಪು ಉಪ್ಪು ಆರೋಗ್ಯಕ್ಕೆ ಏಕೆ ಒಳ್ಳೆಯದು ಗೊತ್ತಾ..? ಈ ವರದಿ ಓದಿ..

ಸದೃಢ ಆರೋಗ್ಯಕ್ಕೆ ಕಪ್ಪು ಉಪ್ಪು ಪರಿಣಾಮಕಾರಿ – ಕಪ್ಪು ಉಪ್ಪು ಆರೋಗ್ಯಕ್ಕೆ ಏಕೆ ಒಳ್ಳೆಯದು ಗೊತ್ತಾ..? ಈ ವರದಿ ಓದಿ..

ನ್ಯೂಸ್ ಆ್ಯರೋ : ಉಪ್ಪು ಎಂದರೆ ತಕ್ಷಣಕ್ಕೆ ಕಣ್ಣ ಮುಂದೆ ಬರುವುದು ಬಿಳಿಬಿಳಿಯಾಗಿ ಇರುವಂತಹ ಹರಳುಗಳು. ಯಾವುದೇ ಅಡುಗೆಯಾದರೂ ಉಪ್ಪಿಲ್ಲದೆ ಅದು ಪೂರ್ತಿಯಾಗದು. ಸಾಮಾನ್ಯವಾಗಿ ನಾವೆಲ್ಲರೂ ಕಲ್ಲುಪ್ಪು ಮತ್ತು ಹುಡಿ ಉಪ್ಪು ಬಳಕೆ ಮಾಡುತ್ತೇವೆ.

ಕಪ್ಪು ಉಪ್ಪನ್ನು ಕೂಡ ಇಂದಿನ ದಿನಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದನ್ನು ಹಿಂದಿನಿಂದಲೂ ಭಾರತೀಯರು ಇದನ್ನು ಬಳಸಿಕೊಂಡು ಬರುತ್ತಿದ್ದಾರೆ ಮತ್ತು ಇದರಲ್ಲಿ ಔಷಧೀಯ ಗುಣಗಳು ಇವೆ ಮತ್ತು ಆಯುರ್ವೇದದ ಪ್ರಕಾರ ಇದು ಹಲವಾರು ಚಿಕಿತ್ಸಕ ಗುಣ ಹೊಂದಿದೆ. ಹೊಟ್ಟೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದಂತಹ ಹಲವಾರು ಸಮಸ್ಯೆಗಳನ್ನು ಕಪ್ಪು ಉಪ್ಪು ಬಳಸಿಕೊಂಡು ನಿವಾರಣೆ ಮಾಡಬಹುದು.

ಕಪ್ಪು ಉಪ್ಪಿನಲ್ಲಿ ಖನಿಜಾಂಶಗಳು ಮತ್ತು ವಿಟಮಿನ್ ಗಳು ಅಗಾಧ ಪ್ರಮಾಣದಲ್ಲಿದೆ. ನಿಯಮಿತವಾಗಿ ಕಪ್ಪು ಉಪ್ಪು ಬಳಸಿಕೊಂಡರೆ ಆಗ ಖಂಡಿತವಾಗಿಯೂ ಇದರ ಆರೋಗ್ಯ ಲಾಭಗಳು ದೇಹಕ್ಕೆ ಲಭ್ಯವಾಗುವುದು. ಇದು ಕರುಳಿನ ಕ್ರಿಯೆ ಮತ್ತು ತೂಕ ಇಳಿಸಿಕೊಳ್ಳಲು ಕೂಡ ಪರಿಣಾಮಕಾರಿ ಆಗಿರುವುದು.

ಕಪ್ಪು ಉಪ್ಪನ್ನು ಹಿಮಾಲಯನ್ ಕಪ್ಪು ಉಪ್ಪು ಎಂದು ಕೂಡ ಕರೆಯುವರು. ಇದು ಭಾರತದಲ್ಲಿ ಸುಲಭವಾಗಿ ಸಿಗುವುದು ಮತ್ತು ಇದರ ರುಚಿಯು ತುಂಬಾ ವೈವಿಧ್ಯವಾಗಿರುವುದು. ಕಪ್ಪು ಉಪ್ಪನ್ನು ಹೆಚ್ಚಾಗಿ ಸಲಾಡ್ ಮತ್ತು ಪಾಸ್ತಾಗೆ ಅಲಂಕಾರ ಮಾಡಲು ಬಳಸಲಾಗುತ್ತದೆ. ಹಿಮಾಲಯನ್ ಶ್ರೇಣಿಯಲ್ಲಿ ಸಿಗುವಂತಹ ಕಪ್ಪು ಉಪ್ಪು ಇಂದು ಭಾರತದೆಲ್ಲೆಡೆ ತುಂಬಾ ಜನಪ್ರಿಯವಾಗಿದೆ.

ಕಪ್ಪು ಉಪ್ಪಿನಲ್ಲಿ ಕಬ್ಬಿನಾಂಶ, ಪೊಟಾಶಿಯಂ ಮತ್ತು ಇತರ ಹಲವು ರೀತಿಯ ಖನಿಜಾಂಶಗಳು ಇವೆ. ಇದರಲ್ಲಿ ಸಲ್ಫರ್ ಅಂಶವು ಇರುವ ಕಾರಣದಿಂದಾಗಿ ಇದು ಯಾವಾಗಲೂ ಬೇಯಿಸಿದ ಮೊಟ್ಟೆಯ ಹಳದಿ ಲೋಳೆಯಂತೆ ಸುವಾಸನೆ ಬರುವುದು. ಕಪ್ಪು ಉಪ್ಪಿನಿಂದ ಸಿಗುವಂತಹ ಆರೋಗ್ಯ ಲಾಭಗಳ ಬಗ್ಗೆ ಇಲ್ಲಿದೆ ಮಾಹಿತಿ.

ಹೊಟ್ಟೆ ಉಬ್ಬರ ನಿಯಂತ್ರಿಸುವುದು

ಆಯುರ್ವೇದಿಕ್ ಔಷಧಿಗಳಲ್ಲಿ ಕಪ್ಪು ಉಪ್ಪನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ. ಚೂರ್ಣ ಮತ್ತು ಜೀರ್ಣಕ್ರಿಯೆ ಮಾತ್ರೆಗಳಿಗೆ ಇದರ ಬಳಕೆ ಮಾಡುವರು. ಕಪ್ಪು ಉಪ್ಪಿನಲ್ಲಿ ಇರುವಂತಹ ಕ್ಷಾರೀಯ ಗುಣವು ಹೊಟ್ಟೆಯ ಸಮಸ್ಯೆ ನಿವಾರಣೆ ಮಾಡುವುದು. ಇದು ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಗೆ ಅವಕಾಶವೇ ನೀಡದು.

ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು ಮತ್ತು ಆಮ್ಲೀಯ ಹಿಮ್ಮುಖ ಹರಿವನ್ನು ಇದು ಕಡಿಮೆ ಮಾಡುವುದು. ಇದರಲ್ಲಿ ಸೋಡಿಯಂ ಕ್ಲೋರೈಡ್, ಸಲ್ಫೇಟ್, ಕಬ್ಬಿನಾಂಶ, ಮ್ಯಾಂಗನೀಸ್, ಫೆರ್ರಿಕ್ ಆಕ್ಸೈಡ್ ಇದ್ದು, ವಾಯುವನ್ನು ದೂರವಿಡುವುದು.

ಸಲಹೆ: ಹೊಟ್ಟೆ ಭಾರವಾಗುವ ಅಥವಾ ಎಣ್ಣೆಯುಕ್ತ ಆಹಾರ ಸೇವನೆ ಬಳಿಕ ನೀವು ಅರ್ಧ ಚಮಚ ಕಪ್ಪು ಉಪ್ಪನ್ನು ನೀರಿಗೆ ಹಾಕಿ ಕುಡಿಯಿರಿ. ಇದು ಜೀರ್ಣಕ್ರಿಯೆಗೆ ಸಹಕಾರಿ.

ಸ್ನಾಯು ಸೆಳೆತ ನಿವಾರಣೆ

ಪೊಟಾಶಿಯಂ ಅಧಿಕವಾಗಿ ಇರುವಂತಹ ಕಪ್ಪು ಉಪ್ಪು ಸ್ನಾಯುಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವುದು ಮತ್ತು ಸ್ನಾಯು ಸೆಳೆತ ಮತ್ತು ನೋವನ್ನು ಕಡಿಮೆ ಮಾಡುವುದು. ಕಪ್ಪು ಉಪ್ಪಿನ ಮತ್ತೊಂದು ಲಾಭವೆಂದರೆ ಅದು ನಮ್ಮ ಆಹಾರದಲ್ಲಿ ಇರುವಂತಹ ಪ್ರಮುಖ ಖನಿಜಾಂಶಗಳನ್ನು ಹೀರಿಕೊಂಡು ದೇಹಕ್ಕೆ ನೀಡುವುದು.

ಸಲಹೆ: ಬಿಳಿ ಉಪ್ಪಿನ ಬದಲಿಗೆ ಕಪ್ಪು ಉಪ್ಪು ಬಳಸಿಕೊಂಡು ಅದರ ಲಾಭ ಪಡೆಯಿರಿ ಮತ್ತು ಸ್ನಾಯು ಸೆಳೆತ ದೂರವಿಡಿ.

ಮಧುಮೇಹಕ್ಕೆ ರಾಮಬಾಣ

ಮಧುಮೇಹದ ಅಪಾಯವಿದ್ದರೆ ಅಥವಾ ಕಾರಣಗಳು ಇದ್ದರೆ ಆಗ ನೀವು ನಿಯಮಿತವಾಗಿ ಬಳಸುವ ಉಪ್ಪಿನ ಬದಲು ಕಪ್ಪು ಉಪ್ಪು ಬಳಸಿಕೊಳ್ಳಿ. ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ಪರಿಣಾಮಕಾರಿ ಆಗಿ ನಿಯಂತ್ರಣದಲ್ಲಿ ಇಡುವುದು. ಕಪ್ಪು ಉಪ್ಪು ಮಧುಮೇಹಿಗಳಿಗೆ ಒಂದು ವರವೆಂದರೂ ತಪ್ಪಾಗದು.

ಸಲಹೆ: ಪ್ರತೀ ದಿನ ಬೆಳಗ್ಗೆ ಒಂದು ಲೋಟ ನೀರಿಗೆ ಕಪ್ಪು ಉಪ್ಪು ಹಾಕಿಕೊಂಡು ಕುಡಿಯಿರಿ. ಇದು ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಮತ್ತು ರೋಗಗಳನ್ನು ದೂರವಿಡುವುದು.

ರಕ್ತ ಸಂಚಾರಕ್ಕೆ ಸಹಕಾರಿ

ಕಪ್ಪು ಉಪ್ಪನ್ನು ಬಳಕೆ ಮಾಡಿದರೆ ಅದು ದೇಹದಲ್ಲಿ ರಕ್ತ ಸಂಚಾರವನ್ನು ಉತ್ತೇಜಿಸುವುದು. ಇದರಲ್ಲಿ ಸೋಡಿಯಂ ಅಂಶವು ಕಡಿಮೆ ಇರುವ ಕಾರಣದಿಂದಾಗಿ ಇದು ರಕ್ತ ತೆಳು ಮಾಡಲು ನೆರವಾಗುವುದು ಮತ್ತು ಇದರಿಂದಾಗಿ ರಕ್ತ ಸಂಚಾರವು ಸುಗಮವಾಗಿ ಆಗುವುದು. ಇದೇ ರೀತಿಯಲ್ಲಿ ದೇಹದಲ್ಲಿನ ರಕ್ತದೊತ್ತಡವನ್ನು ಇದು ಕಾಪಾಡುವುದು. ರಕ್ತ ಹೆಪ್ಪುಗಟ್ಟುವಿಕೆ ತಡೆಯುವುದು ಮತ್ತು ಕೊಲೆಸ್ಟ್ರಾಲ್ ಸಮಸ್ಯೆ ನಿವಾರಿಸುವುದು.

ಸಲಹೆ: ಸಮುದ್ರ ಉಪ್ಪು, ಕಲ್ಲುಪ್ಪು, ಬೆಳ್ಳುಳ್ಳಿ ಉಪ್ಪು, ನೈಸರ್ಗಿಕ ಹುಡಿಉಪ್ಪು ಎಲ್ಲದರಲ್ಲಿ ಸೋಡಿಯಂ ಅಧಿಕವಾಗಿ ಇದೆ. ರಕ್ತದೊತ್ತಡದ ಸಮಸ್ಯೆ ಇರುವವರು ಇದರ ಬಳಕೆ ಮಾಡಬಾರದು.

ತೂಕ ಇಳಿಸಲು ಸಹಾಯ

ಕಪ್ಪು ಉಪ್ಪಿನಲ್ಲಿ ಇರುವಂತಹ ಕರಗಿಸುವ ಮತ್ತು ವಿಭಜಿಸುವಂತಹ ಗುಣವು ತೂಕ ಇಳಿಸಲು ಬಯಸುತ್ತಿರುವ ಜನರಿಗೆ ತುಂಬಾ ಒಳ್ಳೆಯದು. ಇದು ಕರುಳಿನ ಕ್ರಿಯೆಗೆ ಸಹಕಾರಿ. ಮಲಬದ್ಧತೆ, ಹೊಟ್ಟೆಉಬ್ಬರ ಸಮಸ್ಯೆಯನ್ನು ನಿವಾರಣೆ ಮಾಡುವ ಕಪ್ಪು ಉಪ್ಪು ತೂಕ ಇಳಿಸಲು ಸಹಕಾರಿ ಆಗಿರುವುದು.

ಸಲಹೆ: ತೂಕ ಇಳಿಸಲು ಬಯಸಿದ್ದರೆ ಆಗ ನೀವು ಉಪ್ಪಿನ ಬದಲಿಗೆ ಕಪ್ಪು ಉಪ್ಪು ಬಳಸಿ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *