ಶರ್ಟ್ ನ ಹಿಂಬದಿ ಸಣ್ಣ ಪಟ್ಟಿ ಯಾಕೆ ಗೊತ್ತೇ? – ಇದರ ಇತಿಹಾಸದ ಬಗ್ಗೆ ನಿಮಗೆ ಗೊತ್ತೇ ಇರಲಿಕ್ಕಿಲ್ಲ..!!

ಶರ್ಟ್ ನ ಹಿಂಬದಿ ಸಣ್ಣ ಪಟ್ಟಿ ಯಾಕೆ ಗೊತ್ತೇ? – ಇದರ ಇತಿಹಾಸದ ಬಗ್ಗೆ ನಿಮಗೆ ಗೊತ್ತೇ ಇರಲಿಕ್ಕಿಲ್ಲ..!!

ನ್ಯೂಸ್ ಆ್ಯರೋ : ಬಟ್ಟೆಗಳನ್ನು ತೊಳೆಯುವಾಗ ಯಾಕೆ ಕುಗ್ಗುತ್ತದೆ, ಬಟ್ಟೆಯ ಮೇಲೆ ಲಾಂಡ್ರಿ ಕೇರ್ ಲೇಬಲ್ ಗಳು ಯಾಕೆ ಅಗತ್ಯ, ಪ್ಯಾಂಟ್ ಗಳಿಗಿಂತ ಶರ್ಟ್ ಯಾಕೆ ದುಬಾರಿ… ಹೀಗೆ ಬಟ್ಟೆಗಳ ಮೇಲೆ ಕೆಲವೊಂದು ರಹಸ್ಯಗಳಿವೆ. ಅದು ಯಾಕೆ, ಏನು ಎಂಬುದನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ಮಾಡಿದರೂ ಕೆಲವೊಮ್ಮೆ ಸರಿಯಾದ ಉತ್ತರವೂ ದೊರೆಯುವುದಿಲ್ಲ. ಹೀಗಾಗಿ ಈ ರಹಸ್ಯಗಳು ಹಾಗೆ ಉಳಿದುಹೋಗುತ್ತದೆ.

ಬಟ್ಟೆಗಳ ರಹಸ್ಯಗಳಲ್ಲಿ ಒಂದು ಮುಖ್ಯವಾದದ್ದು ಎಂದರೆ ಶರ್ಟ್ ಗಳ ಹಿಂಬದಿ ಇರುವ ವಿಚಿತ್ರವಾದ ಲೂಪ್. ಇದು ಯಾಕೆ, ಏನು ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

ಸಾಮಾನ್ಯವಾಗಿ ಪುರುಷರು ಮತ್ತು ಮಹಿಳೆಯರಿಗಾಗಿ ಶರ್ಟ್‌ಗಳ ಮೇಲೆ ಇದು ಕಂಡುಬರುತ್ತದೆ. ಲೂಪ್ ಎನ್ನುವುದು ಎರಡು ಭುಜಗಳ ನಡುವಿನ ಪ್ರದೇಶದಲ್ಲಿ ಬರುವ ಬಟ್ಟೆಯ ಸಣ್ಣ ಪಟ್ಟಿ. ಇದು ಶರ್ಟ್‌ ಮೇಲಿನ ಹಿಂಭಾಗದಲ್ಲಿ ಇರುತ್ತದೆ.

ಇದರ ಇತಿಹಾಸವನ್ನು ಗಮನಿಸಿದರೆ ನೌಕಾಪಡೆಯ ನಾವಿಕರು ತಮ್ಮ ಸಮವಸ್ತ್ರವನ್ನು ವಾರ್ಡ್ ರೋಬ್ ನಲ್ಲಿ ಇಡಲು ಹೆಚ್ಚು ಸ್ಥಳವಿಲ್ಲದೇ ಇದ್ದಾಗ ಇದು ಕುಣಿಕೆಗಳಾಗಿ ವ್ಯಾಪಕ ಮನ್ನಣೆ ಗಳಿಸಿತ್ತು. ಶರ್ಟ್‌ಗಳನ್ನು ಕೊಕ್ಕೆಯಿಂದ ನೇತುಹಾಕಲು ಮತ್ತು ಅವುಗಳನ್ನು ಹೆಚ್ಚು ಅನುಕೂಲಕರವಾಗಿ ಒಣಗಿಸಲುಇದನ್ನು ವಿನ್ಯಾಸಗೊಳಿಸಲಾಗಿತ್ತು.

ಬಟ್ಟೆ ತಯಾರಕ ಜಿಎಎನ್ ಟಿ ಯು 1960ರ ದಶಕದಲ್ಲಿ ತಮ್ಮ ಉಡುಗೆಗೆ ಲಾಕರ್ ಲೂಪ್ ಅನ್ನು ಪರಿಚಯಿಸಿತು. ಅದರಲ್ಲಿ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ತಮ್ಮ ಶರ್ಟ್‌ಗಳನ್ನು ಸುಕ್ಕುಗಟ್ಟದಂತೆ ಲಾಕರ್‌ಗಳಲ್ಲಿ ನೇತುಹಾಕಲು ಇದು ಅನುಕೂಲವಾಗಿತ್ತು. ಈ ಲೂಪ್ ಗಳು ಹಿಂಭಾಗದಲ್ಲಿ ಕಾಲರ್ ಗೆ ಜೋಡಿಸಲಾಗಿತ್ತು.

ವಿದ್ಯಾರ್ಥಿಗಳ ಬಳಿಕ ಇದು ಎಲ್ಲರ ಶರ್ಟ್ ಗಳ ಮೇಲೂ ಸ್ಥಾನ ಪಡೆಯಿತು. 1960 ರ ದಶಕದಿಂದ ಇದು ಫ್ಯಾಷನ್ ಆಗಿ ಮಾರ್ಪಟ್ಟಿದೆ. ಬ್ರ್ಯಾಂಡೆಡ್ ಶರ್ಟ್‌ಗಳಲ್ಲಿ ಲೂಪ್ ಗಳಿದ್ದರೆ ಹೆಚ್ಚು ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಂದೇ ಪರಿಗಣಿಸಲ್ಪಟ್ಟಿದೆ.

ಸಾಮಾನ್ಯವಾಗಿ ಬಟ್ಟೆಗಳನ್ನು ಪರೀಕ್ಷಿಸುವವರು ಈ ಲೂಪ್ ಗಳನ್ನು ಎಳೆದು ನೋಡುತ್ತಾರೆ. ಇದು ಗಟ್ಟಿಯಾಗಿ ಇದ್ದರೆ ಬಟ್ಟೆ ಉತ್ತಮವಾಗಿದೆ ಎನ್ನಲಾಗುತ್ತದೆ. ಇದು ಎಷ್ಟು ಗಟ್ಟಿಯಾಗಿ ಇರುತ್ತದೆ ಎಂದರೆ ಇದನ್ನು ಎಳೆದಾಗ ಬಟ್ಟೆ ಹಾರಿದರೂ ಲೂಪ್ ಮಾತ್ರ ಬಟ್ಟೆಗೆ ಹಾಗೆಯೇ ಅಂಟಿಕೊಂಡಿರುತ್ತದೆ. ಹೀಗಾಗಿ ಒಂದು ರೀತಿಯಲ್ಲಿ ಇದು ಬಟ್ಟೆಯ ಗುಣಮಟ್ಟವನ್ನು ನಿರ್ಧರಿಸುವ ಅಂಶವೂ ಆಗಿದೆ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *