Spandana Death : ಪುಣ್ಯ ಸ್ಮರಣೆಯಲ್ಲಿ 4 ಸಾವಿರ ಮಂದಿಗೆ ಭೋಜನ ವ್ಯವಸ್ಥೆ – 21 ಬಗೆಯ ಐಟಂ, ಮೆನುವಿನಲ್ಲಿ ಏನೇನಿತ್ತು?
- ಮನರಂಜನೆ
- August 16, 2023
- No Comment
- 96
ನ್ಯೂಸ್ ಆ್ಯರೋ : ಬ್ಯಾಂಕಾಂಕ್ ನಲ್ಲಿ ಮೃತಪಟ್ಟ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರ 11ನೇ ದಿನದ ಪುಣ್ಯ ಸ್ಮರಣೆ ಇಂದು (ಬುಧವಾರ) ನಡೆಯಿತು.
ಭೋಜನ ವ್ಯವಸ್ಥೆ
ಸ್ಪಂದನಾ ಸ್ವಗೃಹದಲ್ಲಿ ಬೆಳಗ್ಗೆ ಶಾಂತಿ ಹೋಮ ನೆರವೇರಿತು. ಬಳಿಕ ಮಧ್ಯಾಹ್ನ 1 ಗಂಟೆಯಿಂದ ಕೋದಂಡರಾಮಪುರದ ಯಂಗ್ ಸ್ಟರ್ಸ್ ಕಬಡ್ಡಿ ಮೈದಾನದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸ್ಪಂದನಾ ಆತ್ಮಕ್ಕೆ ಶಾಂತಿ ಕೊರುವ ನಿಟ್ಟಿನಲ್ಲಿ ಎಲ್ಲರೂ ಭಾಗವಹಿಸುವಂತೆ ತಂದೆ ಬಿ.ಕೆ.ಶಿವರಾಂ, ಮಾವ ಎಸ್.ಎ.ಚಿನ್ನೇಗೌಡರು ಮತ್ತು ಕುಟುಂಬಸ್ಥರು ಮನವಿ ಮಾಡಿದ್ದರು.
4 ಸಾವಿರ ಜನರಿಗೆ ಭೋಜನ ವ್ಯವಸ್ಥೆ
ಸುಮಾರು 4 ಸಾವಿರ ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಭೋಜನದಲ್ಲಿ ಉಪ್ಪಿಟ್ಟು, ಪಲಾವ್, 2,500 ಲಾಡು, ಮಸಾಲ ವಡೆ, ಉದ್ದಿನ ವಡೆ, ಕೋಸಂಬರಿ, ಅನ್ನದ ಜೊತೆ ತರಕಾರಿ ಸಾರು ಮತ್ತು ತಿಳಿಸಾರು, ಪಾಯಸ, ಮೊಸರು, ಹಪ್ಪಳ, ಅಂಬೊಡೆ ಸೇರಿ 21 ಬಗೆಯ ಖಾದ್ಯ ತಯಾರಿಸಲಾಗಿತ್ತು.
ಬ್ಯಾಂಕಾಕ್ ಪ್ರವಾಸದ ವೇಳೆ ಆಗಸ್ಟ್ 6ರಂದು ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟಿದ್ದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನೆರವೇರಿತ್ತು.