ನಾನೇನು ವರ್ಜಿನ್ ಅಲ್ಲ, ನಾನು ಕನ್ಯತ್ವ ಕಳೆದುಕೊಂಡಿದ್ದು ಈತನ ಜೊತೆ..! – ಲೈಂಗಿಕತೆ ಬಗ್ಗೆ ಬೋಲ್ಡಾಗಿ ಮಾತನಾಡಿದ ಶಕೀಲಾ ಹೇಳಿದ್ದೇನು..?

ನಾನೇನು ವರ್ಜಿನ್ ಅಲ್ಲ, ನಾನು ಕನ್ಯತ್ವ ಕಳೆದುಕೊಂಡಿದ್ದು ಈತನ ಜೊತೆ..! – ಲೈಂಗಿಕತೆ ಬಗ್ಗೆ ಬೋಲ್ಡಾಗಿ ಮಾತನಾಡಿದ ಶಕೀಲಾ ಹೇಳಿದ್ದೇನು..?

ನ್ಯೂಸ್ ಆ್ಯರೋ‌ : ಒಂದು ಕಾಲದ ಜನಪ್ರಿಯ ನಟಿ ಶಕೀಲಾ. ಮಲೆಯಾಳಂ ಮೂಲದ ಈ ನಟಿ ಸಾಫ್ಟ್ ಕೋರ್ ನೀಲಿ ಚಿತ್ರಗಳಲ್ಲಿ ಅಭಿನಯಿಸಿ ಸ್ಟಾರ್ ನಟರ ಸಿನಿಮಾಗಳಿಗೆ ಪೈಪೋಟಿ ನೀಡಿದ್ದರು. ನಿರಂತರ ಸಾಫ್ಟ್ ಕೋರ್ ಚಿತ್ರಗಳಲ್ಲಿ ನಟಿಸಿದ್ದರಿಂದ ಅವರನ್ನು ಮಲೆಯಾಳಂ ಚಿತ್ರರಂಗದಿಂದ ಬ್ಯಾನ್ ಮಾಡಲಾಯಿತು. ಬಳಿಕ ಅವರು ತಮಿಳುನಾಡಿಗೆ ತೆರಳಿದರು. ಕ್ರಮೇಣ ಅವರ ಖ್ಯಾತಿಯು ಕಡಿಮೆಯಾಗುತ್ತಾ ಸಾಗಿತು.

ಕನ್ನಡದಲ್ಲೂ ಅಭಿನಯ

ಶಕೀಲಾ ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ, ತಮಿಳು, ತೆಲುಗಿನಲ್ಲೂ ಅಬಿನಯಿಸಿದ್ದಾರೆ. ಕನ್ನಡ ಬಿಗ್ ಬಾಸ್ ಸೀಸನ್ 2 ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಶಕೀಲಾ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಲೈಂಗಿಕತೆಯ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಅವರು ಬೋಲ್ಡಾಗಿ ಉತ್ತರಿಸಿದ್ದು ಹಲವರ ಹುಬ್ಬೇರಿಸಿದೆ. ನಾನೇನೂ ವರ್ಜಿನ್ ಅಲ್ಲ. ನಾನು ಮೊದಲ ಬಾರಿಗೆ ಗೆಳೆಯ ರಿಚಾರ್ಡ್ ಜೊತೆ ಲೈಂಗಿಕ ಕ್ರಿಯೆ ನಡೆಸಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಮಾತನಾಡಿದ್ದ ಅವರು ತಾನಿನ್ನೂ ಬಾಡಿಗೆ ಮನೆಯಲ್ಲೇ ವಾಸಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದರು. ಒಂದು ಕಾಲದಲ್ಲಿ ಪ್ರತಿ ದಿನ ಸಂಪಾದಿಸುತ್ತಿದ್ದ 4 ಲಕ್ಷ ರೂ. ಅನ್ನು ಸಹೋದರಿ ಹೇಗೆ ದೋಚಿದ್ದರು ಎನ್ನುವುದನ್ನು ವಿವರಿಸಿದ್ದರು.

ಶಕೀಲಾ ಜೀವನವನ್ನಾಧರಿಸಿ ಸ್ಯಾಂಡಲ್ ವುಡ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ‘ಶಕೀಲಾ’ ಹೆಸರಿನ ಬಾಲಿವುಡ್ ಚಿತ್ರ ತೆರೆಗೆ ತಂದಿದ್ದರು. ರಿಚಾ ಚಡ್ಡಾ ನಾಯಕಿಯಾಗಿ ಕಾಣಿಸಿಕೊಂಡಿದ್ದ ಈ ಚಿತ್ರ ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ 2020ರಂದು ಬಿಡುಗಡೆಯಾಗಿತ್ತು. ಮಲೆಯಾಳಂ, ತಮಿಳು, ತೆಲುಗು, ಹಿಂದಿ, ಕನ್ನಡ, ಒಡಿಯಾ ಸೇರಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶಕೀಲಾ ಕೈಯಲ್ಲಿ ಸದ್ಯ ಯಾವುದೇ ಸಿನಿಮಾಗಳಿಲ್ಲ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *