ಸಲ್ಮಾನ್ ಖಾನ್ ಗೆ ಗ್ಯಾಂಗ್ ಸ್ಟರ್ ಗಳ ಜೀವ ಬೆದರಿಕೆ – ‘ರೀಲ್ ಬಾಡಿಗಾರ್ಡ್’ಗೆ ರಿಯಲ್ ಭದ್ರತೆ ಹೇಗಿದೆ ಗೊತ್ತಾ?
- ಮನರಂಜನೆ
- June 29, 2023
- No Comment
- 228
ನ್ಯೂಸ್ ಆ್ಯರೋ : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ (Salman Khan) ಖಾನ್ ಅವರಿಗೆ ಪದೇ ಪದೆ ಜೀವ ಬೆದರಿಕೆ ಕರೆ ಬರುತ್ತಿರುವ ಹಿನ್ನಲೆಯಲ್ಲಿ ಮತ್ತಷ್ಟು ಭದ್ರತೆ (Security) ಒದಗಿಸಲಾಗಿದೆ. ಇದೀಗ ತಮ್ಮ ಕಾರನ್ನು ಬದಲಾಯಿಸಿರುವ ನಟ ಗುಂಡು ನಿರೋಧಕ ದುಬಾರಿ ಕಾರನ್ನು (Bullet Proofed Car) ಖರೀದಿಸಿದ್ದಾರೆ.
ಮುಂಜಾಗ್ರತಾ ಕ್ರಮ
ಗ್ಯಾಂಗ್ ಸ್ಟರ್ ಗಳ ಬೆದರಿಕೆ ಹಿನ್ನಲೆಯಲ್ಲಿ ಭದ್ರತಾ ಸಿಬ್ಬಂದಿ ಸೂಚನೆಯಂತೆ ಸಲ್ಮಾನ್ ಖಾನ್ ಈಗ ಬಹಿರಂಗ ಸಭೆ, ಜನಸಂದಣಿ ಇರುವ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅಲ್ಲದೆ ಚಿತ್ರೀಕರಣ ಸ್ಥಳದಲ್ಲಿ ಆಪ್ತರು ಕೂಡ ಸಮೀಪಕ್ಕೆ ಬಾರದಂತೆ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ಬಿಗಿ ಭದ್ರತೆ
ಸಲ್ಮಾನ್ ಖಾನ್ ಅವರಿಗೆ ವಿವಿಧ ಸುತ್ತಿನ ಭದ್ರತೆ ಒದಗಿಸಲಾಗಿದೆ. ಅವರ ಖಾಸಗಿ ಭದ್ರತೆಯನ್ನು ಅವರ ಆಪ್ತರೇ ಆಗಿರುವ ಶೇರಾ ನೋಡಿಕೊಳ್ಳುತ್ತಾರೆ. ನಂತರ ಸುತ್ತಿನಲ್ಲಿ ಮುಂಬಯಿ ಪೊಲೀಸರು ನಿಯೋಜಿಸಿರುವ ಭದ್ರತಾ ಸಿಬ್ಬಂದಿ ಇರುತ್ತಾರೆ.
ಕಾರಣವೇನು?
ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೇಳಿದ್ದ. ಆತ, ತಂಡದ ಅನೇಕರು ಪೊಲೀಸರ ಕೈಗೆ ಸಿಕ್ಕಿ ಬಿದ್ದರೂ ಇದೇ ಮಾತನ್ನು ಪುನರುಚ್ಚರಿಸಿದ್ದರು. ಜೊತೆಗೆ ಇದೀಗ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿರುವ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಕೂಡ ತನ್ನ ಮುಂದಿನ ಗುರಿ ಸಲ್ಮಾನ್ ಖಾನ್ ಎಂದು ಘೋಷಿಸಿದ್ದಾನೆ. ಸಲ್ಮಾನ್ ಖಾನ್ ನನ್ನು ಕೊಂದೇ ಕೊಲ್ಲುತ್ತೇನೆ ಎಂದಿದ್ದಾನೆ.
ಸುಮಾರು 25 ವರ್ಷಗಳ ಹಿಂದೆ ಸಲ್ಮಾನ್ ಖಾನ್ ಕೃಷ್ಣ ಮೃಗವನ್ನು ಬೇಟೆಯಾಡಿದ್ದು ಇದಕ್ಕೆಲ್ಲ ಕಾರಣ. ಈ ಕಾಳಗ ಸದ್ಯಕ್ಕೆ ಮುಗಿಯುವ ಲಕ್ಷಣ ಕಂಡು ಬರುತ್ತಿಲ್ಲ. ಈ ಸಂಬಂಧ ಈಗಾಗಲೇ ಹಲವರು ಜೈಲಿನಲ್ಲಿದ್ದಾರೆ.
ಕ್ಷಮೆ ಕೋರಬೇಕು
ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್ ಉಳಿಯ ಬೇಕು ಎಂದರೆ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆ ಯಾಚಿಸಬೇಕು ಎಂದಿದ್ದ. ಗೋಲ್ಡಿ ಬ್ರಾರ್ ಕೂಡ ಇದನ್ನೇ ಹೇಳಿದ್ದಾನೆ.