ಈ ವಾರದ ಕನ್ನಡ ವಾಹಿನಿಗಳ ಟಿ.ಆರ್.ಪಿ. ವರದಿ ಬಿಡುಗಡೆ – ಪಾರಮ್ಯ ಮೆರೆದ ಝೀ ಕನ್ನಡ ವಾಹಿನಿ, ಟಾಪ್ ಸೀರಿಯಲ್ ಯಾವುದು?

ಈ ವಾರದ ಕನ್ನಡ ವಾಹಿನಿಗಳ ಟಿ.ಆರ್.ಪಿ. ವರದಿ ಬಿಡುಗಡೆ – ಪಾರಮ್ಯ ಮೆರೆದ ಝೀ ಕನ್ನಡ ವಾಹಿನಿ, ಟಾಪ್ ಸೀರಿಯಲ್ ಯಾವುದು?

ನ್ಯೂಸ್ ಆ್ಯರೋ‌ : ಕಿರುತೆರೆಗೆ ಈಗಲೂ ಸಾಕಷ್ಟು ಮಂದಿ ವೀಕ್ಷಕರಿದ್ದಾರೆ. ಅದರಲ್ಲೂ ಮುಖ್ಯವಾಗಿ ಧಾರಾವಾಹಿಗಳಿಗೆ ಅದರದ್ದೇ ಆದ ವೀಕ್ಷಕ ವರ್ಗವಿದೆ. ವಿವಿಧ ವಾಹಿನಿಗಳು ಹೊಸ ಹೊಸ ಪ್ರಯೋಗಗಳೊಂದಿಗೆ ವೀಕ್ಷಕರನ್ನು ಸೆಳೆಯಲು ಸೀರಿಯಲ್ ಗಳನ್ನು ಪ್ರಸಾರ ಮಾಡುತ್ತವೆ. ಟಿ.ಆರ್.ಪಿ. ಮಾನದಂಡದ ಆಧಾರದಲ್ಲಿ ಯಾವ ಕಾರ್ಯಕ್ರಮವನ್ನು ಜನ ಹೆಚ್ಚು ಇಷ್ಟ ಪಡುತ್ತಾರೆ ಎನ್ನುವುದನ್ನು ಲೆಕ್ಕ ಹಾಕಲಾಗುತ್ತದೆ.

ಕನ್ನಡದ ಕಿರುತೆರೆಯಲ್ಲಿ ಯಾರು ಟಾಪ್?

ಸದ್ಯ ಕನ್ನಡ ಕಿರುತೆರೆಯ ಈ ವಾರದ ಟಿ.ಆರ್.ಪಿ. ವರದಿ ಬಿಡುಗಡೆಗೊಂಡಿದೆ. ಝೀ ಕನ್ನಡ ಮತ್ತು ಕಲರ್ಸ್ ಕನ್ನಡ ವಾಹಿನಿಗಳ ಧಾರಾವಾಹಿಗಳು ಟಾಪ್ ಟೆನ್ ನ ಬಹುತೇಕ ಸ್ಥಾನಗಳನ್ನು ಪಡೆದುಕೊಂಡಿವೆ. ಅದರಲ್ಲೂ ವಿಶೇಷ ಎಂದರೆ ಈ ಬಾರಿ ಮೊದಲ ನಾಲ್ಕು ಸ್ಥಾನಗಳಲ್ಲಿ ಝೀ ಕನ್ನಡ ವಾಹಿನಿಯ ಧಾರಾವಾಹಿಗಳೇ ರಾರಾಜಿಸಿವೆ. ‘ಪುಟ್ಟಕ್ಕನ ಮಕ್ಕಳು’ 9.8 ಅಂಕ ಪಡೆದು ಮೊದಲ ಸ್ಥಾನದಲ್ಲಿದ್ದರೆ, ‘ಗಟ್ಟಿಮೇಳ’ 8 ಅಂಕ ಪಡೆದು ಎರಡನೇ ಸ್ಥಾನ, 6.3 ರೇಟಿಂಗ್ ಪಡೆದು ”ಶ್ರೀ ರಸ್ತು ಶುಭಮಸ್ತು’ ಮೂರು ಮತ್ತು 6 ಅಂಕ ಪಡೆಯುವ ಮೂಲಕ ‘ಸತ್ಯ’ ನಾಲ್ಕನೇ ಸ್ಥಾನದಲ್ಲಿದೆ. ಕಲರ್ಸ್ ಕನ್ನಡ ವಾಹಿನಿಯ ‘ಭಾಗ್ಯ ಲಕ್ಷ್ಮೀ'(5.6 ಅಂಕ) ಐದನೇ ಮತ್ತು ‘ಲಕ್ಷ್ಮೀ ಬಾರಮ್ಮ'(5.5 ಅಂಕ) ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿವೆ.

ಲೆಕ್ಕಾಚಾರ ಹೇಗೆ?

ಪ್ರತಿ ವಾರ ಟಿ.ಆರ್.ಪಿ. ಬಹಿರಂಗವಾಗುತ್ತದೆ. ಅದರ ಆಧಾರದಲ್ಲಿ ಧಾರಾವಾಹಿ/ಕಾರ್ಯಕ್ರಮಗಳ ಸ್ಥಾಗಳನ್ನು ನಿರ್ಧರಿಸಲಾಗುತ್ತದೆ. ಟೆಲಿವಿಷನ್ ರೇಟಿಂಗ್ ಪಾಯಿಂಟ್ ಎಂದು ಕರೆಯಲ್ಪಡುವ ಇದು ಯಾವ ಕಾರ್ಯಕ್ರಮ ಜನಪ್ರಿಯವಾಗಿದೆ ಎನ್ನುವುದನ್ನು ತಿಳಿಸುತ್ತದೆ. ಇದರ ಆಧಾರದಲ್ಲಿ ಸದ್ಯ ಜನರ ಮೂಡ್, ಮನಸ್ಥಿತಿ ಯಾವ ರೀತಿ ಇದೆ ಎನ್ನುವುದನ್ನು ಲೆಕ್ಕ ಹಾಕಲಾಗುತ್ತದೆ.

ಆದಾಯದ ಮೂಲ

ಟಿ.ಆರ್.ಪಿ. ಆಧಾರದಲ್ಲಿ ಜಾಹೀರಾತುದಾರರು ತಮ್ಮ ಜಾಹೀರಾತು ಎಲ್ಲಿ, ಹೇಗೆ ಪ್ರದರ್ಶಿಸಬೇಕೆಂದು ನಿರ್ಧರಿಸುತ್ತಾರೆ. ಬಾರ್-ಒ-ಮೀಟರ್ ಬಳಸಿ ಬ್ರಾಡ್ ಕಾಸ್ಟ್ ಆಡಿಯೆನ್ಸ್ ರಿಸರ್ಚ್ ಕೌನ್ಸಿಲ್(BARC) ಟಿ.ಆರ್.ಪಿ.ಯನ್ನು ಲೆಕ್ಕ ಹಾಕುತ್ತದೆ. BARC ಸುಮಾರು 45,000 ಮನೆಗಳಲ್ಲಿ ಬಾರ್-ಒ-ಮೀಟರ್ ಅಳವಡಿಸಿದೆ. ಈ ಮೂಲಕ ಸಾವಿರಾರು ವೀಕ್ಷಕರ ಸಮೀಕ್ಷೆ ನಡೆಸಲಾಗುತ್ತದೆ. ಈ ಉಪಕರಣ ವಾರದಲ್ಲಿ ಆ ಮನೆಯವರು ಯಾವ ಕಾರ್ಯಕ್ರಮವನ್ನು ಹೆಚ್ಚು ನೋಡಿದ್ದಾರೆ ಎನ್ನುವುದನ್ನು ತಿಳಿಸುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *