ಮಹೀಂದ್ರಾ ಕಂಪೆನಿಯ ಥಾರ್ ಎಸ್.ಯು.ವಿ. ವಿನ್ಯಾಸಗೊಳಿಸಿದ್ದು ಒಬ್ಬ ಮಹಿಳೆ‌ – ಯಾರಿದು‌ ವಿನ್ಯಾಸಕಿ? ಇವರ ಹಿನ್ನೆಲೆ ಏನು?

ಮಹೀಂದ್ರಾ ಕಂಪೆನಿಯ ಥಾರ್ ಎಸ್.ಯು.ವಿ. ವಿನ್ಯಾಸಗೊಳಿಸಿದ್ದು ಒಬ್ಬ ಮಹಿಳೆ‌ – ಯಾರಿದು‌ ವಿನ್ಯಾಸಕಿ? ಇವರ ಹಿನ್ನೆಲೆ ಏನು?

ನ್ಯೂಸ್ ಆ್ಯರೋ‌ : ಅತ್ಯಂತ ಜನಪ್ರಿಯ ಮಹೀಂದ್ರಾ ಕಂಪೆನಿಯ ಥಾರ್ ಎಸ್.ಯು.ವಿ.ಯ ಮಾದರಿ ರಚಿಸಿದ್ದು ಮಹಿಳೆ ಎಂದರೆ ನಂಬುತ್ತೀರಾ? ಹೌದು, 49 ವರ್ಷದ ರಾಮ್ ಕೃಪಾ ಅನಂತನ್ ಯುವಜನತೆಯ ನೆಚ್ಚಿನ ಈ ವಾಹನವನ್ನು ವಿನ್ಯಾಸಗೊಳಿಸಿದ್ದಾರೆ.

ಯಾರು ಈ ರಾಮ್ ಕೃಪಾ ಅನಂತನ್?

ಪ್ರಸಿದ್ಧ ವಾಹನ ವಿನ್ಯಾಸಕಿಯಾಗಿರುವ ರಾಮ್ ಕೃಪಾ ರಾಜಸ್ತಾನದ ಬಿಟ್ಸ್ ಪಿಲನಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ಐಐಟಿ ಬಾಂಬೆಯಲ್ಲಿ ಡಿಸೈನ್ ಪ್ರೋಗ್ರಾಮ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಮಹೀಂದ್ರಾ ಥಾರ್ ಮಾತ್ರವಲ್ಲದೆ ಬೊಲೆರೊದಂತಹ ಜನಪ್ರಿಯ ವಾಹನಗಳನ್ನು ವಿನ್ಯಾಸಗೊಳಿಸಿ ದೇಶದ ವಾಹನ ಉದ್ಯಮದ ಗಮನ ಸೆಳೆದಿದ್ದಾರೆ.

ಯಶಸ್ಸಿನ ಯಾತ್ರೆ

1997ರಲ್ಲಿ ರಾಮ್ ಕೃಪಾ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪೆನಿಯಲ್ಲಿ ಒಳಾಂಗಣ ವಿನ್ಯಾಸಗಾರ್ತಿಯಾಗಿ ಉದ್ಯೋಗ ಆರಂಭಿಸಿದರು. ಬದ್ಧತೆ, ಪರಿಶ್ರಮದಿಂದ ಕೆಲಸ ಮಾಡಿದ ಅವರು 2005ರಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪೆನಿಯ ವಿನ್ಯಾಸ ತಂಡದ ಮುಖ್ಯಸ್ಥೆಯಾದರು. ಅವರ ತಂಡ ಬೊಲೆರೊ, ಕ್ಸೈಲೊ, ಸ್ಕಾರ್ಪಿಯೊದಂತಹ ಜನಪ್ರಿಯ ಕಾರುಗಳನ್ನು ವಿನ್ಯಾಸಗೊಳಿಸಿತು. ಇದರ ಯಶಸ್ಸಿನ ಬಳಿಕ ಅವರು ಮಹೀಂದ್ರಾ ಎಕ್ಸ್.ಯು.ವಿ. 500 ಪ್ರಾಜೆಕ್ಟ್ ನ ಭಾಗವಾದರು.

2022ರ ಆಗಸ್ಟ್ ನಲ್ಲಿ ರಾಮ್ ಕೃಪಾ ಓಲಾ ಎಲೆಕ್ಟ್ರಿಕ್ಸ್ ಕಂಪೆನಿಗೆ ಸೇರ್ಪಡೆಯಾದರು. ವಿನ್ಯಾಸ ವಿಭಾಗದ ಮುಖ್ಯಸ್ಥೆಯಾಗಿರುವ ಅವರಿಗೆ ದ್ಚಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳನ್ನು ವಿನ್ಯಾಸಗೊಳಿಸುವ ಜವಾಬ್ದಾರಿ ಇದೆ. ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ ಕಂಪೆನಿ ಸದ್ಯದಲ್ಲೇ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಇದರ ಬೆಲೆ 15 ರಿಂದ 25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *