‘ರಾಮಧೂತ ಹನುಮಂತ ದೇವರಲ್ಲ’ – ಆದಿಪುರುಷ್ ಚಿತ್ರದ ಸಂಭಾಷಣೆಕಾರನ ವಿವಾದಾತ್ಮಕ ಹೇಳಿಕೆ ; ಕೆರಳಿದ ನೆಟ್ಟಿಗರು?
- ಮನರಂಜನೆ
- June 21, 2023
- No Comment
- 111
ನ್ಯೂಸ್ ಆ್ಯರೋ : ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಸೈಫ್ ಅಲಿ ಖಾನ್, ಕೃತಿ ಸನನ್ ನಟಿಸಿ ಓಂ ರಾವತ್ ನಿರ್ದೇಶನ ಮಾಡಿರುವ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ‘ಆದಿಪುರುಷ್’ ಬಿಡುಗಡೆಯಾದ ದಿನದಿಂದಲೂ ಒಂದಿಲ್ಲೊಂದು ವಿಚಾರಕ್ಕೆ ಟೀಕೆಗೆ ಒಳಗಾಗುತ್ತಲೇ ಇದೆ. ಇದೀಗ ಈ ಚಿತ್ರತಂಡ ನೀಡಿರುವ ಹೇಳಿಕೆಯಿಂದ ದೇಶದಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ. ಅಷ್ಟಕ್ಕೂ ಈ ಚಿತ್ರತಂಡ ನೀಡಿದ ಹೇಳಿಕೆ ಏನು? ಇಲ್ಲಿದೆ ವಿವರ.
ಚಿತ್ರತಂಡ ಹೇಳಿದ್ದೇನು?
ಆದಿಪುರುಷ್ ಚಿತ್ರದ ಸಂಭಾಷಣೆಯ ಬಗ್ಗೆ ನೇಪಾಳ ಸೇರಿದಂತೆ ಹಲವೆಡೆ ತೀವ್ರ ಆಕ್ರೋಶ ಭುಗಿಲೆದ್ದ ಹಿನ್ನಲೆಯಲ್ಲಿ, ಚಿತ್ರದ. ಸಂಭಾಷಣೆಕಾರ ಮನೋಜ್ ಮುಂತಾಶಿರ್ ಸಂದರ್ಶನವೊಂದರಲ್ಲಿ ಭಾಗಿಯಾಗಿ, ‘ಭಜರಂಗಬಲಿ ಹನುಮಂತ ದೇವರಲ್ಲ ಭಕ್ತ. ಆತ ತನ್ನ ಅಚಲವಾದ ಭಕ್ತಿಯಿಂದ ಆತ ಜನರಿಗೆ ಭಗವಾನ್ ಆಗಿ ಕಾಣುತ್ತಿದ್ದಾನೆ’ ಎಂದಿದ್ದಾರೆ. ಈ ಹೇಳಿಕೆ ವೈರಲ್ ಆದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಹನುಮಾನ್ ಭಕ್ತರು ಕೆಂಡಾಮಂಡಲವಾಗಿದ್ದು, ಮನೋಜ್ ಮುಂತಾಶಿರ್ ಅವರಿಗೆ ಬಾಯಿ ಬಂದಂತೆ ಕಮೆಂಟ್ ಹಾಕಿದ್ದಾರೆ.
ಆಕ್ರೋಶಗೊಂಡ ಹನುಮ ಭಕ್ತರು!
ಬಿಡುಗಡೆಯಾದ ದಿನದಿಂದಲೂ ವಿವಾದದ ಸುಳಿಯಲ್ಲಿದ್ದ ಆದಿಪುರ್ ತಂಡಕ್ಕೆ ಮನೋಜ್ ಮುಂತಾಶಿರ್ ನೀಡಿರುವ ಹೇಳಿಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.ಈ ವಿವಾದಾತ್ಮಕ ಹೇಳಿಕೆಯಿಂದ ಕೋಪಗೊಂಡಿರುವ ಹನುಮ ಭಕ್ತರು ‘ಇಂತವರು ಸಂದರ್ಶನ ನೀಡುವುದನ್ನು ನಿಲ್ಲಿಸಬೇಕು. ಇಂತವರಿಂದ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಪದೇ ಪದೆ ಘಾಸಿ ಉಂಟಾಗುತ್ತಿದೆ’ ಎಂದು ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.