Shakeela : ಮತ್ತೆ ಬಿಗ್ ಬಾಸ್ ಮನೆಯಲ್ಲಿ ಶಕೀಲಾ ಆಟ ಪಕ್ಕಾ – ವೀಕ್ಷಕರಲ್ಲಿ ಹೆಚ್ಚಾಯ್ತು ಕಾತುರ, ಆತುರ…!!

Shakeela : ಮತ್ತೆ ಬಿಗ್ ಬಾಸ್ ಮನೆಯಲ್ಲಿ ಶಕೀಲಾ ಆಟ ಪಕ್ಕಾ – ವೀಕ್ಷಕರಲ್ಲಿ ಹೆಚ್ಚಾಯ್ತು ಕಾತುರ, ಆತುರ…!!

ನ್ಯೂಸ್ ಆ್ಯರೋ‌ : ಶಕೀಲಾ – ಈ ಹೆಸರು ಕೇಳಿದರೆ ಸಾಕು ಪಡ್ಡೆಗಳೆಲ್ಲ ಒಂದು ಕ್ಷಣ ರೋಮಾಂಚಿತರಾಗುತ್ತಾರೆ. ಮಲೆಯಾಳಂ ಮೂಲದ ಈ ನಟಿ ಹಲವು ಸಾಫ್ಟ್ ಪೋರ್ನ್ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಇವರ ಚಿತ್ರಗಳು ಬೇರೆ ಬೇರೆ ಭಾಷೆಗಳಿಗೂ ಡಬ್ ಆಗಿರುವ ಸೂಪರ್ ಸ್ಟಾರ್. ಇಂತಿಪ್ಪ ನಟಿ ಇದೀಗ ಬಿಗ್ ಬಾಸ್ ರಿಯಾಲಿಟಿ ಶೋಗೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು, ಅಭಿಮಾನಿಗಳು ಕಾತುರದಿಂದ ಕಾಯುವಂತೆ ಮಾಡಿದೆ.

ತೆಲುಗು ಬಿಗ್ ಬಾಸ್
ಶಕೀಲಾ ಕಾಲಿಡುತ್ತಿರುವುದು ತೆಲುಗು ಬಿಗ್ ಬಾಸ್ ಗೆ. ಸೆಪ್ಟಂಬರ್ ನಲ್ಲಿ ತೆಲುಗು ಬಿಗ್ ಬಾಸ್ ನ ಸೀಸನ್-7 ಆರಂಭವಾಗಲಿದ್ದು, ಇದರಲ್ಲಿ ಶಕೀಲಾ ಸ್ಪರ್ಧಿಸುವ ಸಾಧ್ಯತೆ ಇದೆ. ಇವರಿಗೆ ಭರ್ಜರಿ ಸಂಭಾವನೆ ನೀಡಿ ಈ ರಿಯಾಲಿಟಿ ಶೋಗೆ ಕರೆ ತರಲಾಗುತ್ತಿದೆಯಂತೆ.

ಅಕ್ಕಿನೇನಿ ನಾರ್ಗಾಜುನ ನಿರೂಪಣೆಯ ತೆಲುಗು ಬಿಗ್ ಬಾಸ್ ಸೆಪ್ಟಂಬರ್ 3ರಂದು ಆರಂಭವಾಗಲಿದೆ. ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್-2ರಲ್ಲಿ ಸ್ಪರ್ಧಿಸಿದ್ದ ಶಕೀಲಾ ಈ ಬಾರಿ ತೆಲುಗಿಗೆ ಕಾಲಿಡುವುದು ಪಕ್ಕಾ ಎನ್ನುವ ಲೆಕ್ಕಾಚಾರವಿದೆ.

ಇತರ ಸ್ಪರ್ಧಿಗಳು
ನಟ ಶಿವಾಜಿ, ಕ್ರಾಂತಿ, ಅಮರ್ ದೀಪ್ ಚೌಧರಿ, ಯೂಟ್ಯೂಬರ್ ಅನಿಲ್ ಗೀಲಾ, ಡ್ಯಾನ್ಸರ್ ಸಂದೀಪ್, ನಟಿ ಪೂಜಾ ಮೂರ್ತಿ, ಕಾಮಿಡಿಯನ್ ರಿಯಾಜ್, ಮಾಡೆಲ್ ಪ್ರಿನ್ಸ್ ಯಾವರ್, ಸಿಂಗರ್ ದಾಮಿನಿ ಬಾತ್ಲಾ ಮತ್ತಿತರರು ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ.

1994ರಲ್ಲಿ ತಮಿಳಿನ ‘ಪ್ಲೇಗರ್ಲ್ಸ್​’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶಕೀಲಾ ಬಳಿಕ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಸಿನಿಮಾರಂಗದಲ್ಲಿ ನಟಿಸಿದರು. 2020ರಲ್ಲಿ ಇವರ ಜೀವನಾಧರಿಸಿದ ‘ಶಕೀಲಾ’ ಹೆಸರಿನ ಬಾಲಿವುಡ್ ಚಿತ್ರ ತೆರೆಕಂಡಿತ್ತು. ಕನ್ನಡ ಮೂಲದ ಇಂದ್ರಜಿತ್ ಲಂಕೇಶ್ ಈ ಚಿತ್ರ ನಿರ್ದೇಶಿಸಿದ್ದರು. ಸದ್ಯ ರಿಯಾಲಿಟಿ ಶೋ ಮೂಲಕ ಶಕೀಲಾ ಮತ್ತೆ ಸದ್ದು ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *