69ನೇ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಪ್ರಕಟ; ಅಲ್ಲು ಅರ್ಜುನ್, ಆಲಿಯಾ ಭಟ್, ಕೃತಿ ಸಸೂನ್ ಅತ್ಯುತ್ತಮರು; ಮಿಂಚಿದ ತೆಲುಗಿನ ಆರ್‌ಆರ್‌ಆರ್‌; ಕನ್ನಡಕ್ಕೆ ನಾಲ್ಕೇ ಪ್ರಶಸ್ತಿ

69ನೇ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಪ್ರಕಟ; ಅಲ್ಲು ಅರ್ಜುನ್, ಆಲಿಯಾ ಭಟ್, ಕೃತಿ ಸಸೂನ್ ಅತ್ಯುತ್ತಮರು; ಮಿಂಚಿದ ತೆಲುಗಿನ ಆರ್‌ಆರ್‌ಆರ್‌; ಕನ್ನಡಕ್ಕೆ ನಾಲ್ಕೇ ಪ್ರಶಸ್ತಿ

ನ್ಯೂಸ್ ಆ್ಯರೋ‌ : 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇಂದು ಘೋಷಣೆಯಾಗಿದೆ. ಈ ಪೈಕಿ ಕನ್ನಡ ಚಿತ್ರಗಳಿಗೆ ಯಾವುದೇ ಪ್ರಮುಖ ಪ್ರಶಸ್ತಿಗಳು ದೊರೆಯದೆ ನಿರಾಸೆ ಉಂಟಾಗಿದೆ. ಈ ಬಾರಿ ಕನ್ನಡ ಸಿನಿಮಾಗಳು ಸೇರಿ ಒಟ್ಟು 280 ಚಿತ್ರಗಳು ಸ್ಪರ್ಧಾ ಕಣದಲ್ಲಿದ್ದವು.

ಅತ್ಯಧಿಕ ಪ್ರಶಸ್ತಿ ಪಡೆದ ಚಿತ್ರಗಳು

ತೆಲುಗಿನ ಆರ್‌ಆರ್‌ಆರ್‌, ಹಿಂದಿಯ ಗಂಗೂಬಾಯಿ ಕಾಥಿಯಾವಾಡಿ, ಸರ್ದಾರ್ ಉದ್ದಮ್ ಹೆಚ್ಚಿನ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಈ ಬಾರಿ ಹಿಂದಿ ಮತ್ತು ತೆಲುಗು ಚಿತ್ರಗಳು ಪಾರಮ್ಯ ಮೆರೆದಿವೆ.

ಕನ್ನಡಕ್ಕೆ ಕೇವಲ 4 ಪ್ರಶಸ್ತಿಗಳು

ಕ್ರಿಟಿಕ್ (ಸ್ಪೆಷಲ್ ಮೆನ್ಷನ್)-ಸುಬ್ರಹ್ಮಣ್ಯ ಬಡೂರು, ನಾನ್ ಫೀಚರ್‌ (ಸ್ಪೆಷಲ್ ಮೆನ್ಷನ್)-ಚಿತ್ರ – ಬಾಳೇ ಬಂಗಾರ, ನಾನ್ ಫೀಚರ್ ಫಿಲ್ಮ್ಸ್ (ಬೆಸ್ಟ್ ಎಕ್ಸ್‌ಪ್ಲೋರೇಷನ್/ಅಡ್ವೆಂಚರ್‌ ಫಿಲ್ಮ್)ಚಿತ್ರ – ಆಯುಷ್ಮಾನ್ (ಇಂಗ್ಲೀಷ್, ಕನ್ನಡ), ಫೀಚರ್ ಫಿಲ್ಮ್ಸ್ಅ ತ್ಯುತ್ತಮ ಕನ್ನಡ ಸಿನಿಮಾ – 777 ಚಾರ್ಲಿ.

ಪ್ರಶಸ್ತಿಗಳ ಪಟ್ಟಿ

  • ಅತ್ಯುತ್ತಮ ಚಲನಚಿತ್ರ: ರಾಕೆಟ್ರಿ; ದಿ ನಂಬಿ ಎಫೆಕ್ಟ್‌
  • ಅತ್ಯುತ್ತಮ ನಟ: ಅಲ್ಲು ಅರ್ಜುನ್, ಪುಷ್ಪ
  • ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಾಥಿಯಾವಾಡಿ) ಕೃತಿ ಸನೂನ್ (ಮಿಮಿ)
  • ಅತ್ಯುತ್ತಮ ನಿರ್ದೇಶಕ: ನಿಖಿಲ್ ಮಹಾಜನ್, ಗೋದಾವರಿ (ಮರಾಠಿ)
  • ಅತ್ಯುತ್ತಮ ಜನಪ್ರಿಯ ಚಲನಚಿತ್ರ: ಆರ್‌ಆರ್‌ಆರ್‌
  • ನರ್ಗಿಸ್ ದತ್ ಪ್ರಶಸ್ತಿ: ದ ಕಾಶ್ಮೀರ್ ಫೈಲ್ಸ್ (ಅತ್ಯುತ್ತಮ ಚಲನಚಿತ್ರಕ್ಕಾಗಿ)
  • ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ (ಮಿಮಿ)
  • ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ಕಾಶ್ಮೀರ್‌ ಫೈಲ್ಸ್‌)
  • ಅತ್ಯುತ್ತಮ ಚಿತ್ರಕಥೆ: ನಾಯಟ್ಟು (ಮಲಯಾಳಂ)
  • ಅತ್ಯುತ್ತಮ ಚಿತ್ರಕಥೆ: ಗಂಗೂಬಾಯಿ ಕಾಥಿಯಾವಾಡಿ (ಹಿಂದಿ)
  • ಅತ್ಯುತ್ತಮ ಸಂಗೀತ ನಿರ್ದೇಶನ: ಪುಷ್ಪ (ತೆಲುಗು)
  • ಅತ್ಯುತ್ತಮ ಹಿನ್ನೆಲೆ ಸಂಗೀತ ನಿರ್ದೇಶನ: ಎಂ.ಎಂ.ಕೀರವಾಣಿ (ಆರ್‌ಆರ್‌ಆರ್‌)
  • ಅತ್ಯುತ್ತಮ ಗಾಯಕ:‌ ಆರ್‌ಆರ್‌ಆರ್‌ (ಕಾಲ ಭೈರವ)
  • ಅತ್ಯುತ್ತಮ ಗಾಯಕಿ: ಇರೈವನ್‌ ನಿಝಾಲ್‌ (ಶ್ರೇಯಾ ಘೋಷಾಲ್)
  • ಅತ್ಯುತ್ತಮ ಸಾಹಿತ್ಯ: ಚಂದ್ರಭೋಸ್‌ (ಕೊಂಡ ಪೊಲಂ)
  • ಅತ್ಯುತ್ತಮ ನೃತ್ಯ ಸಂಯೋಜನೆ: ಪ್ರೇಮ್‌ ರಕ್ಷಿತ್‌ (ಆರ್‌ಆರ್‌ಆರ್‌)
  • ಅತ್ಯುತ್ತಮ ಛಾಯಾಗ್ರಹಣ: ಸರ್ದಾರ್ ಉದ್ಧಮ್ (ಮುಖ್ಯೋಫಾಧ್ಯಾಯ)
  • ಅತ್ಯುತ್ತಮ ವಸ್ತ್ರ ವಿನ್ಯಾಸ: ವೀರ ಕಪೂರ್‌ (ಸರ್ದಾರ್ ಉಧಮ್)‌
  • ಅತ್ಯುತ್ತಮ ನಿರ್ಮಾಣ ವಿನ್ಯಾಸ: ಸರ್ದಾರ್ ಉಧಮ್
  • ಅತ್ಯುತ್ತಮ ಸಂಕಲನ: ಗಂಗೂಬಾಯಿ ಕಾಥಿಯಾವಾಡಿ
  • ಅತ್ಯುತ್ತಮ ಮೇಕಪ್: ಗಂಗೂಬಾಯಿ ಕಾಥಿಯಾವಾಡಿ
  • ಅತ್ಯುತ್ತಮ ಸಾಹಸ ನೃತ್ಯ ಸಂಯೋಜನೆ: ಆರ್‌ಆರ್‌ಆರ್‌
  • ಅತ್ಯುತ್ತಮ ಹಿಂದಿ ಚಿತ್ರ: ಸರ್ದಾರ್ ಉಧಮ್

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *