ಪೋರ್ಬ್ಸ್ ಬಿಲಿಯನೇರ್ ಗಳ ಪತ್ನಿಯರ ಪಟ್ಟಿಯಲ್ಲಿ ಭಾರತದ ನಾರಿ – ಯಾರು ಗೊತ್ತಾ ಈ ಕುಬೇರನ ಪತ್ನಿ?

ಪೋರ್ಬ್ಸ್ ಬಿಲಿಯನೇರ್ ಗಳ ಪತ್ನಿಯರ ಪಟ್ಟಿಯಲ್ಲಿ ಭಾರತದ ನಾರಿ – ಯಾರು ಗೊತ್ತಾ ಈ ಕುಬೇರನ ಪತ್ನಿ?

ನ್ಯೂಸ್ ಆ್ಯರೋ : ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ‌ ಮಹಿಳೆ ಇದ್ದೇ ಇರುತ್ತಾಳೆ’ ಎಂಬ‌ ಮಾತಿದೆ. ಈ ಮಾತು ಭಾರತೀಯ‌ ಮೂಲದ ಅಂಬಾನಿ, ನಾರಾಯಣಮೂರ್ತಿಯವರ ಬದುಕಿನಲ್ಲಿ ನಿಜವೂ ಕೂಡ. ಇದೇ ರೀತಿ ತನ್ನ ಗಂಡನ‌ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತು ಸದ್ಯ ಜಗತ್ತಿನ‌ ಎರಡನೇ ಅತೀ ದೊಡ್ಡ‌ ಉಕ್ಕು ಉತ್ಪಾದನಾ ಕಂಪೆನಿಯಾಗಿ ಬೆಳೆದಿರುವ ಸಂಸ್ಥೆಯ ಮುಖ್ಯಸ್ಥನ‌‌ ಹಿಂದೆ ಆತನ ಪತ್ನಿಯ‌ ಕೊಡುಗೆಯೂ ಇದೆ. ಇದೀಗ ಈ ಮಹಿಳೆ ಪೋರ್ಬ್ಸ್ ಬಿಲಿಯನೇರ್ ಗಳ ಪತ್ನಿಯರ ಪಟ್ಟಿಯಲ್ಲಿ‌ ಸ್ಥಾನ‌‌ ಪಡೆದ ಭಾರತದ ಎರಡನೇ ಶ್ರೀಮಂತನ‌ ಪತ್ನಿ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ‌.

ಯಾರು ಈ ಕುಬೇರ ಪತ್ನಿ!

ಜಗತ್ತಿನ ಎರಡನೇ ಅತಿ ದೊಡ್ಡ ಉಕ್ಕು ಉತ್ಪಾದಕ‌ ಆರ್ಸೆಲರ್ ಮಿತ್ತಲ್‌ನ ಸಿಇಒ ಲಕ್ಷ್ಮಿ ನಿವಾಸ್ ಮಿತ್ತಲ್ ಅವರು ಉಷಾ ಮಿತ್ತಲ್ ಅವರನ್ನು ವಿವಾಹವಾಗಿದ್ದಾರೆ. ಉಷಾ ಅವರು ತಮ್ಮ ಕುಟುಂಬದೊಂದಿಗೆ ಯುನೈಟೆಡ್ ಕಿಂಗ್‌ಡಂನಲ್ಲಿ ವಾಸಿಸುತ್ತಿದ್ದಾರೆ. ವನಿಶಾ ಮಿತ್ತಲ್ ಮತ್ತು ಆದಿತ್ಯ ಮಿತ್ತಲ್ ಉಷಾ ಮತ್ತು ಲಕ್ಷ್ಮಿ ನಿವಾಸ್ ಅವರ ಇಬ್ಬರು ಮಕ್ಕಳು. ಉಷಾ ಅವರ ಹೆಸರನ್ನು ಇದೀಗ ಅಧಿಕೃತವಾಗಿ ಫೋರ್ಬ್ಸ್‌ನ “ಬಿಲಿಯನೇರ್‌ಗಳ ಪತ್ನಿಯರು ಪಟ್ಟಿಯಲ್ಲಿ ಸೇರಿಸಲಾಗಿದ್ದು, ಇದು ಭಾರತಕ್ಕೆ ಸಂದಿರುವ ಗೌರವ ಎನ್ನಲಾಗುತ್ತಿದೆ.

ಉಷಾ ಮಿತ್ತಲ್ ಆಯ್ಕೆಯಾಗಿದ್ದು ಯಾಕೆ?

ಆರ್ಸೆಲರ್ ಮಿತ್ತಲ್ ಕಂಪೆನಿಯ ನಿರ್ವಹಣಾ ಮಂಡಳಿಯ ಅನುಪಸ್ಥಿತಿಯಲ್ಲಿ ಆಡಳಿತ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು 2017 ರಲ್ಲಿ ಅವರಿಗೆ ಉಷಾ ನೀಡಲಾಗಿದೆ. ವರದಿಗಳ ಪ್ರಕಾರ, ಉಷಾ ತಮ್ಮ 15 ವರ್ಷಗಳ ಅಮೂಲ್ಯ ವರ್ಷಗಳನ್ನು ತಮ್ಮ ಪತಿಯ ವ್ಯವಹಾರಕ್ಕೆ ವ್ಯಯಿಸಿದ್ದಾರೆ. ಈ ಕಾರಣದಿಂದ ಅವರನ್ನು ಪ್ರಮುಖ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಅವರು ಭಾರತದಲ್ಲಿ ಮಹಿಳಾ ಶಿಕ್ಷಣವನ್ನು ಬೆಂಬಲಿಸಿದ್ದಾರೆ ಮತ್ತು ಉಷಾ ಮಿತ್ತಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸ್ಥಾಪಿಸುವ ಮೂಲಕ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ‌ ತೊಡಗಿಸಿಕೊಂಡಿದ್ದಾರೆ.

ಅರೆಂಜ್ ಮ್ಯಾರೇಜ್ ಆಗಿದ್ದ ಸಕ್ಸಸ್ ಜೋಡಿ!

ಇವರಿಬ್ಬರು ಸದ್ಯ, ಭಾರತದ ಪ್ರಮುಖ ವ್ಯಕ್ತಿಗಳು, ದೊಡ್ಡ ಉಕ್ಕಿನ ಉದ್ಯಮಗಳಾಗಿದ್ದರೂ‌ ಕೂಡ ಮದುವೆಯಾಗಿದ್ದು ಮಾತ್ರ ಸಿಂಪಲ್ಲಾಗಿ ಅರೆಂಜ್ ಮ್ಯಾರೇಜ್.
ನಿಶ್ಚಿತಾರ್ಥಕ್ಕೆ ಮೊದಲು ದಂಪತಿಗಳು ಕೇವಲ ಎರಡು ಬಾರಿಯಷ್ಟೇ ಭೇಟಿಯಾಗಿದ್ದರಂತೆ.
ಇವರಿಬ್ಬರ ಆರಂಭಿಕ ಫೋನ್ ಕರೆಯಲ್ಲಿ, ಉಷಾ ತನ್ನ ಪ್ರೀತಿಯನ್ನು ಬಹಿರಂಗಪಡಿಸಿದರು. ಅಂದು ಅವರಿಬ್ಬರು ಸುದೀರ್ಘ ಮಾತುಕತೆ ನಡೆಸಿದರು. ಅನಂತರ ವಿವಾಹವಾಗಿ ಯಶಸ್ವಿ ದಂಪತಿಗಳು ಎಂದೆನಿಸಿಕೊಂಡಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *