ಗೌತಮಿ ಜಾಧವ್ ಕುಟುಂಬದಲ್ಲಿ ಬಿರುಗಾಳಿ; ಅನುಮಾನ ಬರೋಕೆ ಮೂಲ ಕಾರಣ ಮಾವನ ಇದೊಂದು ಪೋಸ್ಟ್

ನ್ಯೂಸ್ ಆ್ಯರೋ: ಬಿಗ್ಬಾಸ್ ಸೀಸನ್ 11 ಯಶಸ್ವಿಯಾಗಿ ಮುಗೀತು. ಆದ್ರೆ ಗೌತಮಿ ಜಾಧವ್ ಕುಟುಂಬದಲ್ಲಿ ಬಿರುಗಾಳಿ ಎದ್ದಂತೆ ಭಾಸವಾಗುತ್ತಿದೆ. ಈ ರೀತಿಯ ಅನುಮಾನ ಬರೋಕೆ ಕಾರಣ ಮಾವನ ಈ ಪೋಸ್ಟ್.
ಗೌತಮಿ ಜಾಧವ್ ಮಾವ ಖ್ಯಾತ ಪತ್ರಕರ್ತರಾದ ಗಣೇಶ್ ಕಾಸರಗೂಡು. ಸಿನಿಮಾ ಬರವಣಿಗೆಯಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಇವ್ರಿಗೆ ಇಬ್ಬರೂ ಗಂಡ್ಮಕ್ಕಳು ದೊಡ್ಡವ್ರು ಅಭಿಷೇಕ್. ಚಿಕ್ಕವನು ಅಲೋಕ್. ಅಭಿ ಅವರ ಪತ್ನಿ ಗೌತಮಿ. ಮೊದಲೆಲ್ಲಾ ಮಗ ಸೊಸೆ ಬಗ್ಗೆ ಗಣೇಶ್ ಕಾಸರಗೋಡು ಮಾತನಾಡ್ತಿದ್ದವ್ರು ಈಗ ಸೊಸೆ ಬಗ್ಗೆ ಅದ್ಯಾಕೋ ಮುನಿಸಿಕೊಂಡಂತಿದೆ. ಗೌತಮಿ ಬಿಗ್ ಬಾಸ್ನಿಂದ ಹೊರ ಬಂದಾಗ ಫೇಸ್ಬುಕ್ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ರು. ತಾಯಿ ವನದುರ್ಗಮ್ಮ ಅನ್ಯಾಯದ ಬೇಡಿಕೆಯನ್ನ ತಿರಸ್ಕರಿಸ್ತಾಳೆ ಅಂತ ಬರೆದಿದ್ರು. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಯ್ತು. ಮಾವ ಸೊಸೆಗೆ ಏನಾದ್ರು ಟಾಂಟ್ ಕೊಡ್ತಿದ್ದಾರಾ ಎಂಬೆಲ್ಲಾ ಮಾತುಗಳು ಹರಿದಾಡಿದ್ದವು.

ಇದಾದ ನಂತರ ಮತ್ತೊಂದು ಪೋಸ್ಟ್ ಶೇರ್ ಮಾಡಿದ ಗೌತಮಿ ಮಾವ, ಪತ್ನಿ, ಚಿಕ್ಕ ಮಗ ಹಾಗೂ ಚಿಕ್ಕ ಸೊಸೆ ಜೊತೆಗೆ ಫೋಟೋ ಶೇರ್ ಮಾಡಿದ ಅವರು, ನಮ್ಮ ಕುಟುಂಬ ಇಷ್ಟೇ ಎಂಬ ರೀತಿಯಲ್ಲಿ ಬರೆದುಕೊಂಡಿದ್ರು. ಇದಕ್ಕೆ ಸಾಕಷ್ಟು ಜನರು ನಿಮ್ಮ ದೊಡ್ಮಗ ಅಭಿಷೇಕ್ ಹಾಗೂ ಸೊಸೆ ಗೌತಮಿ ಎಲ್ಲಿ? ಗೌತಮಿ ನಿಮ್ಮ ಕುಟುಂಬ ಅಲ್ವಾ? ಅಂತ ಹಲವು ಪ್ರಶ್ನೆಗಳನ್ನ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರೋ ಅವರು ಈ ಪ್ರಶ್ನೆ ಅನ್ನು ಹೋಗಿ ಅವರನ್ನೇ ಕೇಳಿ ಎಂದಿದ್ದಾರೆ.

ಈ ಎಲ್ಲಾ ಬೆಳವಣಿಗೆ ನೋಡ್ತಿದ್ರೆ ಗೌತಮಿ ಹಾಗೂ ಪತಿಯ ಕುಟುಂಬದ ನಡುವೆ ಯಾವುದು ಸರಿಯಿಲ್ಲ ಅನ್ನೋದು ಕಂಡು ಬರ್ತಿದೆ. ಈ ಬಗ್ಗೆ ಖಾಸಗಿ ವಾಹಿನಿಯೊಂದು ಪ್ರಶ್ನೆ ಕೇಳಿದ್ದಾಗ, ನಮ್ಮ ಕುಟುಂಬದ ವಿಚಾರ ನಾಲ್ಕು ಗೋಡೆ ಮಧ್ಯೆ ಇದ್ರೆ ಚಂದ ಎಂದು ನಯವಾಗಿಯೇ ಈ ವಿಚಾರವನ್ನ ತಣ್ಣಗಾಗಿಸಿದ್ದಾರೆ ಗೌತಮಿ.
Leave a Comment