‘ಕಾಣದ ಕೈಗಳಿಂದ ಕುತಂತ್ರ’.. ಪವಿತ್ರಾ ಗೌಡ ಪೋಸ್ಟ್​​; ಭಗವದ್ಗೀತೆ ಸಂದೇಶ ಹಾಕಿ ವಾರ್ನಿಂಗ್​?

pavitra-gowda
Spread the love

ನ್ಯೂಸ್ ಆ್ಯರೋ: ಪವಿತ್ರಾ ಗೌಡ, ರೇಣುಕಾಸ್ವಾಮಿ ಪ್ರಕರಣದ ಮೇನ್​ ಕ್ಯಾರೆಕ್ಟರ್​, 6 ತಿಂಗಳು ಜೈಲು ವನವಾಸ ಅನುಭವಿಸಿ ಜಾಮೀನಿನ ಮೇಲೆ ರಿಲೀಸ್​​ ಆಗಿದ್ದಾರೆ. ಜೊತೆಗೆ ಕೋರ್ಟ್​ನಿಂದ ಅನುಮತಿ ಪಡೆದು ಹೊರ ರಾಜ್ಯಗಳಿಗೂ ಪ್ರಯಾಣಿಸ್ತಿದ್ದು, ಟೆಂಪಲ್​ ರನ್​​​ ಶುರು ಮಾಡಿದ್ದಾರೆ. ಜೈಲಿನಿಂದ ಬಂದ ಬಳಿಕ ಸೈಲೆಂಟ್​ ಆಗಿದ್ದ ಪವಿತ್ರಾಗೌಡ.. ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡತೊಡಗಿದ್ದಾರೆ. ಅದರಲ್ಲೂ ಅರ್ಜುನನಿಗೆ ಕೃಷ್ಣ ಹೇಳುವ ಭಗವದ್ಗೀತೆಯ ಸಂದೇಶವನ್ನು ಉಲ್ಲೇಖಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಜೈಲಿನಿಂದ ರಿಲೀಸ್​​ ಆಗಿರುವ ಪವಿತ್ರಾ ಮೊದಲಿನ ಹಾಗೇ ಸೋಶಿಯಲ್​ ಮೀಡಿಯಾದಲ್ಲಿ ಅಷ್ಟಾಗಿ ಆ್ಯಕ್ಟೀವ್​​ ಇಲ್ಲ.. ಹೀಗಿದ್ದರೂ ಕೂಡಾ ಪವಿತ್ರಾ ಗೌಡ ಆಗಾಗ ಫೋಟೋ ಅಥವಾ ಸ್ಟೋರಿ ವಿಡಿಯೋಗಳನ್ನು ಶೇರ್​ ಮಾಡ್ತಿರ್ತಾರೆ. ಇದೀಗ ಪವಿತ್ರಾ ಗೌಡ ತಮ್ಮ ಇನ್​ಸ್ಟಾ ಖಾತೆಯಲ್ಲಿ, ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ ಮೇಲೊಬ್ಬ ಎಲ್ಲವನ್ನು ವೀಕ್ಷಿಸುತ್ತಿರುವನು ನಿಮ್ಮ ಕಣ್ಣೀರಿನ ಎಲ್ಲಾ ಹನಿಗಳಿಗೆ ನ್ಯಾಯ ನೀಡುವನು” ಎಂದು ಬರೆದಿರುವ ಫೋಟೋವನ್ನು ಪೋಸ್ಟ್​​ ಮಾಡಿದ್ದಾರೆ.

ಸದ್ಯ, ಪವಿತ್ರಾ ಗೌಡ ಪೋಸ್ಟ್​​​​ ವೈರಲ್​ ಆಗ್ತಿದೆ.. ಹಾಗೇ ಸಾಕಷ್ಟು ಕೂತುಹಲ ಮೂಡಿಸ್ತಿದ್ದು, ಭಗವದ್ಗೀತೆ ಸಂದೇಶ ಹಾಕಿ ಪವಿತ್ರಾ ಗೌಡ ವಾರ್ನಿಂಗ್​ ಕೊಟ್ರಾ ಅಥವಾ ತಮ್ಮ ತಪ್ಪಿನ ಅರಿವಾಗಿ ಈ ರೀತಿ ಪೋಸ್ಟ್​ ಹಾಕಿದ್ದಾರೆ ಎಂಬ ಚರ್ಚೆ ಕೂಡ ಶುರುವಾಗಿದೆ.

ಕೊಲೆ ಆರೋಪಿ ನಟ ದರ್ಶನ್​​​​ ತಮ್ಮ ಗನ್​ಗಾಗಿ ಕಾನೂನು ಹೋರಾಟ ಮುಂದುವರಿಸಿದ್ದಾರೆ.. ಇತ್ತೀಚಿಗಷ್ಟೇ ಆರ್​ ಆರ್​ ನಗರ ಪೊಲೀಸ್ರು, ದರ್ಶನ್​​ ಗನ್​​ನ ವಶಪಡಿಸಿಕೊಂಡು, ಗನ್​ ಲೈಸೆನ್ಸ್​​ ರದ್ದು ಪಡಿಸಿದ್ರು. ಇದೀಗ ನಟ ದರ್ಶನ್​​​ ಲೈಸೆನ್ಸ್​​​ ರದ್ದು ಪ್ರಶ್ನಿಸಿ ​ಹೈಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *