‘ತ್ರಿಷಾ ಪ್ಲೀಸ್ ಕ್ಷಮಿಸಿ ಬಿಡಿ, ನಿಮ್ಮ ಮದ್ವೆಗೆ ಬಂದು ನಾನು ಆಶೀರ್ವಾದ ಮಾಡ್ತೇನೆ’ – ಕೊನೆಗೂ ಸ್ಸಾರಿ ಕೇಳಿದ “ಅತ್ಯಾಚಾರ” ಹೇಳಿಕೆ ನೀಡಿದ್ದ ಮನ್ಸೂರ್ ಅಲಿ

‘ತ್ರಿಷಾ ಪ್ಲೀಸ್ ಕ್ಷಮಿಸಿ ಬಿಡಿ, ನಿಮ್ಮ ಮದ್ವೆಗೆ ಬಂದು ನಾನು ಆಶೀರ್ವಾದ ಮಾಡ್ತೇನೆ’ – ಕೊನೆಗೂ ಸ್ಸಾರಿ ಕೇಳಿದ “ಅತ್ಯಾಚಾರ” ಹೇಳಿಕೆ ನೀಡಿದ್ದ ಮನ್ಸೂರ್ ಅಲಿ

ನ್ಯೂಸ್ ಆ್ಯರೋ : ಫಿಲ್ಮ್ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ. ಅದರಲ್ಲೂ ಕೆಲವು ಮಧ್ಯ ವಯಸ್ಸಿನ ನಿರ್ಮಾಪಕರು, ನಿರ್ದೇಶಕರು, ನಟರು ಹೀರೋಯಿನ್ ಗಳ ಜೊತೆ ಅಸಭ್ಯವಾಗಿ ವರ್ತಿಸಿ ಆಗಾಗ ಸುದ್ದಿಯಾಗುತ್ತಲೇ ಇರ್ತಾರೆ. ಮೊನ್ನೆ ತಾನೇ ಬಹುಭಾಷಾ ನಟ ಮನ್ಸೂರ್ ಅಲಿ ಅವರು ಕೂಡಾ ನಟಿ ತ್ರಿಷಾ ಬಗ್ಗೆ ತುಂಬಾ ಅಸಹ್ಯ ರೀತಿಯಲ್ಲಿ ಹೇಳಿಕೆ ಕೂಡಾ ನೀಡಿದ್ರು. ಇದಕ್ಕೆ ಕ್ಷಮೆ ಕೇಳಲೇಬೇಕೆಂದು ಅಭಿಮಾನಿಗಳು ಪಟ್ಟು ಹಿಡಿದಿದ್ರು. ನಾನು ಕ್ಷಮೆ ಕೇಳೋ ಮಾತೇ ಇಲ್ಲ ಎಂದು ಹಠ ತೋರಿಸುತ್ತಿದ್ದ ನಟ ಕೊನೆಗೂ ಕ್ಷಮೆ ಕೇಳಿದ್ದಾರೆ.

ಮನ್ಸೂರು ಅಲಿ ಖಾನ್ ಮೇಲೆ ಎಷ್ಟು ಕೇಸ್ ದಾಖಲಾಗಿತ್ತು..?

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಮನ್ಸೂರ್ ಅಲಿಖಾನ್ ವಿರುದ್ಧ ಐಪಿಸಿ 509- ಮಹಿಳೆಯ ಸಭ್ಯತೆಗೆ ಧಕ್ಕೆ ತರುವುದು ಮತ್ತು ಐಪಿಸಿ 354(ಎ)- ಮಹಿಳೆಯ ವಿನಮ್ರತೆಗೆ ಧಕ್ಕೆ ತರುವುದು ಸೇರಿದಂತೆ 2 ಸೆಕ್ಷನ್‌ಗಳ ಅಡಿಯಲ್ಲಿ ಎಲ್ಲಾ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಏನಿದು ಪ್ರಕರಣ?

‘ನಾನು ಸಿನಿಮಾಗಳಲ್ಲಿ ಅನೇಕ ಅತ್ಯಾಚಾರ ಮಾಡುವಂತಹ ಸೀನ್ ಗಳಲ್ಲಿ ನಟಿಸಿದ್ದೇನೆ. ಆದರೆ ಲಿಯೋ ಚಿತ್ರದಲ್ಲಿ ನಾಯಕಿ ತ್ರಿಶಾ ಅವರ ಮೇಲೆ ಅತ್ಯಾಚಾರದ ದೃಶ್ಯ ಇಲ್ಲದಿರುವುದು ಬೇಸರ ತಂದಿದೆ ಎಂದು ಹಿರಿಯ ನಟ ಮನ್ಸೂರ್ ಅಲಿಖಾನ್ ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ನಟಿ ತ್ರಿಷಾ ಸೇರಿದಂತೆ ಅವರ ಅಭಿಮಾನಿಗಳು ಮಹಿಳಾ ಗೌರವಕ್ಕೆ ಧಕ್ಕೆ ತಂದ ಕಾರಣಕ್ಕೆ ಗರಂ ಆಗಿದ್ದರು. ಇದೇ ಕಾರಣಕ್ಕೆ ಇವರ ಮೇಲೆ ಕೇಸು ಕೂಡಾ ದಾಖಲಾಗಿತ್ತು.

ಕೊನೆಗೂ ಮನ್ಸೂರ್ ಅಲಿ ಖಾನ್ ಏನೆಂದು ಕ್ಷಮೆ ಕೇಳಿದ್ದಾರೆ..?

ನನ್ನ ಸಹ ನಟಿ ತ್ರಿಶಾ, ದಯವಿಟ್ಟು ನನ್ನನ್ನು ಕ್ಷಮಿಸಿ. ನಿಮ್ಮ ವಿವಾಹಕ್ಕೆ ಬಂದು ಆಶೀರ್ವದಿಸುವ ಸೌಭಾಗ್ಯ ದೇವರು ನನಗೆ ಕೊಡಲಿ ಎಂದು ನಟ ಮನ್ಸೂರ್ ಅಲಿ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಇವರ ಪೋಸ್ಟ್ ಗೆ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ:

ಇದನ್ನು ನೋಡಿದ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಕ್ಷಮೆ ಎಲ್ಲಿದೆ? ಆತ ಕ್ಷಮೆ ಕೇಳಿದನೇ? ಎಂದಿದ್ದಾರೆ ಒಬ್ಬರು. ಮನ್ಸೂರ್ ಅಲಿ ತಮ್ಮ ನೆಗೆಟಿವ್ ರೋಲ್​ಗಳಿಂದಲೇ ಫೇಮಸ್ ಆಗಿರುವ ಸೌತ್ ಕಲಾವಿದ. ಅವರಿಗಿದು ಹೊಸತಲ್ಲ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.

ನಟ ಬಂಧನದ ಭೀತಿಯಿಂದ ಮುಂಗಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಮನ್ಸೂರ್ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *