6 ತಿಂಗಳಲ್ಲಿ ನಿಷ್ಕ್ರಿಯಗೊಳ್ಳಲಿದೆ ಇಂತಹ ಮೊಬೈಲ್ – ಖಡಕ್ ವಾರ್ನಿಂಗ್ ರವಾನಿಸಿದ ಮೋದಿ ಸರ್ಕಾರ..!! ನಿಮ್ಮ ಮೊಬೈಲ್ ನಲ್ಲಿ ಈ ಫೀಚರ್ಸ್ ಇದೆಯಾ?

6 ತಿಂಗಳಲ್ಲಿ ನಿಷ್ಕ್ರಿಯಗೊಳ್ಳಲಿದೆ ಇಂತಹ ಮೊಬೈಲ್ – ಖಡಕ್ ವಾರ್ನಿಂಗ್ ರವಾನಿಸಿದ ಮೋದಿ ಸರ್ಕಾರ..!! ನಿಮ್ಮ ಮೊಬೈಲ್ ನಲ್ಲಿ ಈ ಫೀಚರ್ಸ್ ಇದೆಯಾ?

ನ್ಯೂಸ್ ಆ್ಯರೋ : ಇದು ಡಿಜಿಟಲ್ ಜಗತ್ತು. ಎಲ್ಲರೂ ಕೂಡ ಒಂದಲ್ಲ ಒಂದು ವಿಚಾರದಲ್ಲಿ ಮೊಬೈಲ್ ದಾಸರೇ ಆಗಿದ್ದಾರೆ. ಅಂತೆಯೇ ದಿನಕ್ಕೊಂದು ಸ್ಮಾರ್ಟ್ಫೋನ್ ಗಳು ಲಾಂಚ್ ಆಗುತ್ತಿವೆ. ಈ ತರಹೇವಾರಿ ಮೊಬೈಲ್ ಮಾರಾಟ, ಬಳಕೆ ಇವೆಲ್ಲವುಗಳಿಗೂ ಕಡಿವಾಣ ಹಾಕುವ ಉದ್ದೇಶದಿಂದ ಮೋದಿ ಸರ್ಕಾರ ಹೊಸ ನಿಯಮವೊಂದನ್ನು ಜಾರಿಗೊಳಿಸಿದೆ. ಏನಿದು ಹೊಸಾ ರೂಲ್ಸ್? ಬನ್ನಿ‌ ನೋಡೋಣ.

ಮೋದಿ ಸರ್ಕಾರದಿಂದ ಮಹತ್ವದ ಘೋಷಣೆ..!!

ಜಗತ್ತಿನ ಅತ್ಯಂತ ಜನಪ್ರಿಯ ನಾಯಕ ಎನಿಸಿಕೊಂಡಿರುವ ನರೇಂದ್ರ ಮೋದಿ, ದೇಶದ ಒಳಿತಿಗೆ ಬೇಕಾದ ಎಲ್ಲಾ ನಿಯಮಗಳನ್ನು‌ ಕಾಲ ಕಾಲಕ್ಕೆ ಜಾರಿ ಮಾಡುತ್ತಿದ್ದಾರೆ. ಇದೀಗ ಸ್ಮಾರ್ಟ್ಫೋನ್ ಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ. ಈ ನಿಯಮದಡಿ ನಿಮ್ಮಲ್ಲಿರುವ ಸ್ಮಾರ್ಟ್ಫೋನ್ 6 ತಿಂಗಳಲ್ಲಿ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ. ಅದನ್ನು ತಡೆಯಲು ಈ ಹೊಸಾ ಫೀಚರ್ ನಿಮ್ಮ ಮೊಬೈಲ್ ಗೆ ಹಾಕುವುದು ಉತ್ತಮ.

ಹೊಸಾ ಫೀಚರ್ ಯಾವುದು ಗೊತ್ತಾ?

ಕೇಂದ್ರ ಸರ್ಕಾರದ ಈ ಹೊಸ ನಿಯಮ ಎಲ್ಲಾ ಮೊಬೈಲ್ ಕಂಪೆನಿಗಳಿಗೂ ಅನ್ವಯವಾಗಲಿದೆ. ಅದಕ್ಕಾಗಿ‌ ಇನ್ನು ಮುಂದೆ ತಯಾರಿಸುವ ಮೊಬೈಲ್ ಗಳಲ್ಲಿ‌ ಕಂಪೆನಿಗಳು ಕಡ್ಡಾಯವಾಗಿ ಎಮರ್ಜೆನ್ಸಿ ಅಲರ್ಟ್ (ತುರ್ತು ಎಚ್ಚರಿಕೆ) ವೈಶಿಷ್ಟ್ಯವನ್ನು ಅಳವಡಿಸಬೇಕು. ಇದಕ್ಕಾಗಿ ಸರ್ಕಾರ ಕಂಪೆನಿಗಳಿಗೆ 6 ತಿಂಗಳ‌ ಕಾಲಾವಕಾಶವನ್ನು ನೀಡಿದೆ. ಒಂದು ವೇಳೆ ಕಂಪೆನಿಗಳು ನಿಯಮ ಪಾಲಿಸದೇ ಇದ್ದರೆ ಮೊಬೈಲ್ ಗಳು ನಿಷ್ಕ್ರಿಯಗೊಳ್ಳುತ್ತದೆ‌.

ಯಾಕೆ ಈ ನಿಯಮ ಜಾರಿಯಾಗಿದೆ?

ಮುಂದಿನ ದಿನಗಳಲ್ಲಿ ಎಮರ್ಜೆನ್ಸಿ ಅಲರ್ಟ್ ಫೀಚರ್ ಅನ್ನು ಹೊಂದಿರುವ ಸ್ಮಾರ್ಟ್ ಫೋನ್ ಗಳನ್ನೂ ಮಾತ್ರ ಮಾರಾಟ ಮಾಡುವಂತೆ ಎಲ್ಲ ಮೊಬೈಲ್ ತಯಾರಕ ಕಂಪನಿಗಳಿಗೆ ಸರ್ಕಾರ ಆದೇಶ ನೀಡಿದೆ.

ಎಮರ್ಜೆನ್ಸಿ ಅಲರ್ಟ್ ಫೀಚರ್ ಅನ್ನು ಮೊಬೈಲ್ ನಲ್ಲಿ ಅಳವಡಿಸುವುದರಿಂದ ಪಕೃತಿ ವಿಕೋಪಗಳಾದ ಭೂಕಂಪ, ಸುನಾಮಿ, ಚಂಡಮಾರುತ ಸೇರಿದಂತೆ ಇತರ ಪ್ರಕೃತಿ ವಿಕೋಪಗಳ ಬಗ್ಗೆ ಈ ಹೊಸ ಫೀಚರ್ ಎಚ್ಚರಿಕೆ ರವಾನಿಸುತ್ತದೆ. ಆದ್ದರಿಂದ ಸರ್ಕಾರ ಈ ನಿಯಮ ಜಾರಿಗೊಳಿಸುತ್ತಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *