ಅಗ್ನಿಸಾಕ್ಷಿ ಧಾರಾವಾಹಿಯ ಖ್ಯಾತ ಯುವ ನಟ ಸಂಪತ್ ಜಯರಾಮ್ ಆತ್ಮಹತ್ಯೆ – ಸಿಗದ ಅವಕಾಶಕ್ಕೆ ಮನನೊಂದು ದುಡುಕಿದ್ರಾ ಸಂಪತ್…!?
- ಮನರಂಜನೆ
- April 23, 2023
- No Comment
- 177
ನ್ಯೂಸ್ ಆ್ಯರೋ : ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಕಿರುತೆರೆಯ ಯುವನಟ ಸಂಪತ್ ಜಯರಾಮ್ (35) ನೆಲಮಂಗಲದ ಅರಿಶಿನಕುಂಟೆಯಲ್ಲಿರುವ ನಿವಾಸದಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಸಿಗದಾಳು ಗ್ರಾಮದವರಾದ ಸಂಪತ್ ಕನ್ನಡದ ಹಲವು ಸಿನಿಮಾ ಮತ್ತು ಸೀರಿಯಲ್ಗಳಲ್ಲಿ ನಟಿಸಿದ್ದಾರೆ.
ಸಂಪತ್ ಅವರು ಅಗ್ನಿ ಸಾಕ್ಷಿ ದಾರಾವಾಹಿ ಸೇರಿದಂತೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಕಂಬ್ಳಿಹುಳ, ಬಾಲಾಜಿ ಫೋಟೋ ಸ್ಟೂಡಿಯೋ ಚಲನಚಿತ್ರಗಳಲ್ಲಿ ಸಹಜ ಅಭಿನಯದಿಂದ ಪಾತ್ರಗಳಿಗೆ ಜೀವ ತುಂಬಿದ್ದರು.
ಒಂದು ವರ್ಷದ ಹಿಂದೆಯಷ್ಟೇ ಸಂಪತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇತ್ತೀಚೆಗೆ ಅವರಿಗೆ ಯಾವುದೇ ನಟನೆಯ ಅವಕಾಶಗಳು ಬಂದಿರಲಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನು ಈ ಘಟನೆಯು ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.