6 ತಿಂಗಳಲ್ಲಿ ನಿಷ್ಕ್ರಿಯಗೊಳ್ಳಲಿದೆ ಇಂತಹ ಮೊಬೈಲ್ – ಖಡಕ್ ವಾರ್ನಿಂಗ್ ರವಾನಿಸಿದ ಮೋದಿ ಸರ್ಕಾರ..!! ನಿಮ್ಮ ಮೊಬೈಲ್ ನಲ್ಲಿ ಈ ಫೀಚರ್ಸ್ ಇದೆಯಾ?

6 ತಿಂಗಳಲ್ಲಿ ನಿಷ್ಕ್ರಿಯಗೊಳ್ಳಲಿದೆ ಇಂತಹ ಮೊಬೈಲ್ – ಖಡಕ್ ವಾರ್ನಿಂಗ್ ರವಾನಿಸಿದ ಮೋದಿ ಸರ್ಕಾರ..!! ನಿಮ್ಮ ಮೊಬೈಲ್ ನಲ್ಲಿ ಈ ಫೀಚರ್ಸ್ ಇದೆಯಾ?

ನ್ಯೂಸ್ ಆ್ಯರೋ : ಇದು ಡಿಜಿಟಲ್ ಜಗತ್ತು. ಎಲ್ಲರೂ ಕೂಡ ಒಂದಲ್ಲ ಒಂದು ವಿಚಾರದಲ್ಲಿ ಮೊಬೈಲ್ ದಾಸರೇ ಆಗಿದ್ದಾರೆ. ಅಂತೆಯೇ ದಿನಕ್ಕೊಂದು ಸ್ಮಾರ್ಟ್ಫೋನ್ ಗಳು ಲಾಂಚ್ ಆಗುತ್ತಿವೆ. ಈ ತರಹೇವಾರಿ ಮೊಬೈಲ್ ಮಾರಾಟ, ಬಳಕೆ ಇವೆಲ್ಲವುಗಳಿಗೂ ಕಡಿವಾಣ ಹಾಕುವ ಉದ್ದೇಶದಿಂದ ಮೋದಿ ಸರ್ಕಾರ ಹೊಸ ನಿಯಮವೊಂದನ್ನು ಜಾರಿಗೊಳಿಸಿದೆ. ಏನಿದು ಹೊಸಾ ರೂಲ್ಸ್? ಬನ್ನಿ‌ ನೋಡೋಣ.

ಮೋದಿ ಸರ್ಕಾರದಿಂದ ಮಹತ್ವದ ಘೋಷಣೆ..!!

ಜಗತ್ತಿನ ಅತ್ಯಂತ ಜನಪ್ರಿಯ ನಾಯಕ ಎನಿಸಿಕೊಂಡಿರುವ ನರೇಂದ್ರ ಮೋದಿ, ದೇಶದ ಒಳಿತಿಗೆ ಬೇಕಾದ ಎಲ್ಲಾ ನಿಯಮಗಳನ್ನು‌ ಕಾಲ ಕಾಲಕ್ಕೆ ಜಾರಿ ಮಾಡುತ್ತಿದ್ದಾರೆ. ಇದೀಗ ಸ್ಮಾರ್ಟ್ಫೋನ್ ಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ. ಈ ನಿಯಮದಡಿ ನಿಮ್ಮಲ್ಲಿರುವ ಸ್ಮಾರ್ಟ್ಫೋನ್ 6 ತಿಂಗಳಲ್ಲಿ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ. ಅದನ್ನು ತಡೆಯಲು ಈ ಹೊಸಾ ಫೀಚರ್ ನಿಮ್ಮ ಮೊಬೈಲ್ ಗೆ ಹಾಕುವುದು ಉತ್ತಮ.

ಹೊಸಾ ಫೀಚರ್ ಯಾವುದು ಗೊತ್ತಾ?

ಕೇಂದ್ರ ಸರ್ಕಾರದ ಈ ಹೊಸ ನಿಯಮ ಎಲ್ಲಾ ಮೊಬೈಲ್ ಕಂಪೆನಿಗಳಿಗೂ ಅನ್ವಯವಾಗಲಿದೆ. ಅದಕ್ಕಾಗಿ‌ ಇನ್ನು ಮುಂದೆ ತಯಾರಿಸುವ ಮೊಬೈಲ್ ಗಳಲ್ಲಿ‌ ಕಂಪೆನಿಗಳು ಕಡ್ಡಾಯವಾಗಿ ಎಮರ್ಜೆನ್ಸಿ ಅಲರ್ಟ್ (ತುರ್ತು ಎಚ್ಚರಿಕೆ) ವೈಶಿಷ್ಟ್ಯವನ್ನು ಅಳವಡಿಸಬೇಕು. ಇದಕ್ಕಾಗಿ ಸರ್ಕಾರ ಕಂಪೆನಿಗಳಿಗೆ 6 ತಿಂಗಳ‌ ಕಾಲಾವಕಾಶವನ್ನು ನೀಡಿದೆ. ಒಂದು ವೇಳೆ ಕಂಪೆನಿಗಳು ನಿಯಮ ಪಾಲಿಸದೇ ಇದ್ದರೆ ಮೊಬೈಲ್ ಗಳು ನಿಷ್ಕ್ರಿಯಗೊಳ್ಳುತ್ತದೆ‌.

ಯಾಕೆ ಈ ನಿಯಮ ಜಾರಿಯಾಗಿದೆ?

ಮುಂದಿನ ದಿನಗಳಲ್ಲಿ ಎಮರ್ಜೆನ್ಸಿ ಅಲರ್ಟ್ ಫೀಚರ್ ಅನ್ನು ಹೊಂದಿರುವ ಸ್ಮಾರ್ಟ್ ಫೋನ್ ಗಳನ್ನೂ ಮಾತ್ರ ಮಾರಾಟ ಮಾಡುವಂತೆ ಎಲ್ಲ ಮೊಬೈಲ್ ತಯಾರಕ ಕಂಪನಿಗಳಿಗೆ ಸರ್ಕಾರ ಆದೇಶ ನೀಡಿದೆ.

ಎಮರ್ಜೆನ್ಸಿ ಅಲರ್ಟ್ ಫೀಚರ್ ಅನ್ನು ಮೊಬೈಲ್ ನಲ್ಲಿ ಅಳವಡಿಸುವುದರಿಂದ ಪಕೃತಿ ವಿಕೋಪಗಳಾದ ಭೂಕಂಪ, ಸುನಾಮಿ, ಚಂಡಮಾರುತ ಸೇರಿದಂತೆ ಇತರ ಪ್ರಕೃತಿ ವಿಕೋಪಗಳ ಬಗ್ಗೆ ಈ ಹೊಸ ಫೀಚರ್ ಎಚ್ಚರಿಕೆ ರವಾನಿಸುತ್ತದೆ. ಆದ್ದರಿಂದ ಸರ್ಕಾರ ಈ ನಿಯಮ ಜಾರಿಗೊಳಿಸುತ್ತಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *