ಅಮಿತಾಭ್ ಬಚ್ಚನ್, ವಿರಾಟ್ ಕೊಹ್ಲಿ, ಶಾರುಖ್ ಖಾನ್ ಟ್ವಿಟರ್ ಬ್ಲೂಟಿಕ್ ಏಕಾಏಕಿ‌ ಮಾಯ – ಇದೇನು ಎಲಾನ್ ಮಸ್ಕ್ ಹೊಸಾ ರೂಲ್ಸ್?

ಅಮಿತಾಭ್ ಬಚ್ಚನ್, ವಿರಾಟ್ ಕೊಹ್ಲಿ, ಶಾರುಖ್ ಖಾನ್ ಟ್ವಿಟರ್ ಬ್ಲೂಟಿಕ್ ಏಕಾಏಕಿ‌ ಮಾಯ – ಇದೇನು ಎಲಾನ್ ಮಸ್ಕ್ ಹೊಸಾ ರೂಲ್ಸ್?

ನ್ಯೂಸ್ ಆ್ಯರೋ : ಇತ್ತೀಚೆಗಷ್ಟೇ ಟ್ವಿಟರನ್ನು ತನ್ನ‌ ತೆಕ್ಕೆಗೆ ಹಾಕಿಕೊಂಡಿರುವ ಎಲಾನ್ ಮಸ್ಕ್ ಟ್ವಿಟರ್ ನಲ್ಲಿ ತರಹೇವಾರಿ ರೂಲ್ಸ್ ಗಳನ್ನು ತರುವ ಮೂಲಕ ಸುದ್ದಿಯಾಗಿದ್ದಾರೆ. ಇದೀಗ ಕ್ರೀಡೆ, ಸಿನಿಮಾ‌ ಕ್ಷೇತ್ರದ ದಿಗ್ಗಜರ ಟ್ವಿಟ್ಟರ್ ಬ್ಲೂಟಿಕ್ ಏಕಾಏಕಿ ಮಾಯವಾಗಿದ್ದು ‘ಹಣ ಕೊಟ್ಟು ಬ್ಲೂ ಟಿಕ್ ಪಡೆದುಕೊಳ್ಳಿ’ ಎಂದು ಎಲಾನ್ ಮಾಸ್ಕ್ ತಿಳಿಸಿದ್ದಾರೆ.

ಹೌದು, ಟ್ವಿಟ್ಟರ್ ಸಿಇಒ ಎಲಾನ್‌ ಮಸ್ಕ್ ತಮ್ಮ ಮೈಕ್ರೋ-ಬ್ಲಾಗಿಂಗ್ ಸೈಟ್ ನ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಎಲ್ಲಾ ನಿಯಮಗಳನ್ನು ಜಾರಿ ಮಾಡುತ್ತಿದ್ದಾರೆ. ಅದರಂತೆ ಟ್ವಿಟ್ಟರ್‌ ಬ್ಲೂಟಿಕ್‌ ಚಂದಾದಾರಿಕೆಗೆ ಬೆಲೆ ನಿಗದಿ ಮಾಡಲಾಗಿದ್ದು, ಯಾರೆಲ್ಲಾ ಹಣ ಪಾವತಿ ಮಾಡಿಲ್ಲವೋ ಅವರ ಖಾತೆ ಈಗ ಸಾಮಾನ್ಯ ಖಾತೆಯಂತೆ ಆಗಿದ್ದು, ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ.

ಏನಿದು ಹೊಸಾ ರೂಲ್ಸ್?

ಟ್ವಿಟರ್‌ ಖಾತೆಯು ಅಧಿಕೃತ ಎಂದು ತಿಳಿಸುವ ಸಲುವಾಗಿ ಈ ಬ್ಲೂಟಿಕ್‌ ನೀಡಲಾಗುತ್ತಿದ್ದು, ಈವರೆಗೂ ಇದು ಗಣ್ಯಾತಿಗಣ್ಯರಿಗೆ ಉಚಿತವಾಗಿ ಬ್ಲೂಟಿಕ್ ದೊರೆಯುತ್ತಿತ್ತು. ಆದರೆ, ಈಗ ಅದಕ್ಕೆ ಹಣ ಪಾವತಿ ಮಾಡಬೇಕಾಗಿದೆ. ಅಂದರೆ ವೆಬ್‌ ಬಳಕೆದಾರರು ಪ್ರತಿ ತಿಂಗಳು 657ರೂ. ಹಾಗೂ ಐಒಎಸ್ ಮತ್ತು ಆಂಡ್ರಾಯ್ಡ್‌ ಬಳಕೆದಾರರು 904ರೂ. ಗಳನ್ನು ಪಾವತಿ ಮಾಡಬೇಕು. ಏ.20ರಿಂದ ಗಣ್ಯರಿಗೆ ಸಿಕ್ಕ ಉಚಿತ ಬ್ಲೂ ಟಿಕ್ ಗಳು ಮಾಯವಾಗಿದ್ದು, ಹಣ ಪಾವತಿ ಮಾಡುವಂತೆ ಎಲಾನ್ ಮಾಸ್ಕ್ ತಿಳಿಸಿದ್ದಾರೆ.

ಬ್ಲೂಟಿಕ್ ಕಳೆದುಕೊಂಡ ಸೆಲೆಬ್ರಿಟಿಗಳು ಯಾರೆಲ್ಲಾ?

ಕ್ರೀಡೆ, ಸಿನಿಮಾ, ರಾಜಕೀಯ ಕ್ಷೇತ್ರದ ದಿಗ್ಗಜರುಗಳಾದ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಆಲಿಯಾ ಭಟ್, ಯುಪಿ ಸಿಎಂ ಯೋಗಿ ಆದಿತ್ಯನಾಥ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಸ್ವಾಮೀಜಿಗಳು ಸಮಾಜದಲ್ಲಿ ಉತ್ತಮ ಸೇವೆಯಲ್ಲಿ ಇರುವವರು, ದೊಡ್ಡ ದೊಡ್ಡ ಸರ್ಕಾರಿ ಅಧಿಕಾರಿಗಳು, ಸರ್ಕಾರಿ ಇಲಾಖೆಗಳು ಹಾಗೂ ಸಾಮಾಜಿಕ ಜೀವನದಲ್ಲಿ ಇರುವ ಹಲವರು ಈ ಬ್ಲೂಟಿಕ್ ಸೇವೆಯನ್ನು‌ ಕಳೆದುಕೊಂಡಿದ್ದಾರೆ.

ಎಲಾನ್ ಮಸ್ಕ್ ಅವರ ಈ ನಿರ್ಧಾರದಿಂದಾಗಿ ಕೆಲವರು ಸಂತಸ ಪಟ್ಟರೆ ಮತ್ತೆ ಕೆಲವರು ಸೋಶಿಯಲ್ ಮೀಡಿಯಾ ಮೂಲಕ ಮಸ್ಕ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆದರೆ ಎಲಾನ್ ಮಸ್ಕ್ ಮಾತ್ರ ಯಾರ ಮಾತಿಗೂ ಡೋಂಟ್ ಕೇರ್ ಅನ್ನುತ್ತಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *