Hardik – Krunal : ಬದುಕಲು ಐದು ರೂಪಾಯಿ ನೂಡಲ್ಸ್ ತಿಂದವರು ಇಂದು ಕೋಟ್ಯಾಧಿಪತಿಗಳು – ಪಾಂಡ್ಯ ಬ್ರದರ್ಸ್ ಬಡತನದ ಜೀವನ ಹೇಗಿತ್ತು ಗೊತ್ತಾ?

Hardik – Krunal : ಬದುಕಲು ಐದು ರೂಪಾಯಿ ನೂಡಲ್ಸ್ ತಿಂದವರು ಇಂದು ಕೋಟ್ಯಾಧಿಪತಿಗಳು – ಪಾಂಡ್ಯ ಬ್ರದರ್ಸ್ ಬಡತನದ ಜೀವನ ಹೇಗಿತ್ತು ಗೊತ್ತಾ?

ನ್ಯೂಸ್ ಆ್ಯರೋ‌ : ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಯಾರಿಗೆ ಗೊತ್ತಿಲ್ಲ ಹೇಳಿ? ಟೀಮ್ ಇಂಡಿಯಾದ ಶ್ರೀಮಂತ ಕ್ರಿಕೆಟಿಗರಲ್ಲಿ ಇವರು ಕೂಡ ಒಬ್ಬರು. ಸದ್ಯ ವರ್ಷಕ್ಕೆ ಕೋಟಿಗಟ್ಟಲೆ ದುಡಿಯುವ ಇವರು ಒಂದು ಕಾಲದಲ್ಲಿ 10 ರೂ. ಪಡೆಯಲು ಪರದಾಡಿದ್ದರು ಎಂದರೆ ನಂಬಲೇ ಬೇಕು. ಇವರ ಸಹೋದರ ಕೃನಾಲ್ ಪಾಂಡ್ಯ ಅವರ ಕಥೆಯೂ ಇದಕ್ಕಿಂತ ಭಿನ್ನವಲ್ಲ.

ಬಾಲ್ಯದಲ್ಲಿ ಬಡತನ

ಹಾರ್ದಿಕ್-ಕೃನಾಲ್ ಇಬ್ಬರೂ ಬಡತನ ಕಾರಣದಿಂದ ಪ್ರೌಢಶಾಲೆಗೆ ತಮ್ಮ ಶಿಕ್ಷಣ ಮೊಟಕುಗೊಳಿಸಿದರು. ಮಕ್ಕಳ ಕ್ರಿಕೆಟ್ ಪ್ರೀತಿ ಕಂಡು ಕೋಚಿಂಗ್ ಗಾಗಿ ಅವರ ತಂದೆ ಹಿಮಾಂಶು ಕುಟುಂಬವನ್ನು ವಡೋದರಕ್ಕೆ ಶಿಫ್ಟ್ ಮಾಡಿದರು.

ವಡೋದರಾದಲ್ಲೂ ಈ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಸಹೋದರರ ಊಟ 5 ರೂ.ಯ ನೂಡಲ್ಸ್ ಆಗಿತ್ತಂತೆ. ಎಷ್ಟೋ ಬಾರಿ ಉಪವಾಸವಿದ್ದಿದ್ದೂ ಉಂಟಂತೆ..!

ಆಟೋ ಓಡಿಸುತ್ತಿದ್ದ ಹಾರ್ದಿಕ್

ಆರ್ಥಿಕ ಸಂಕಷ್ಟ ಇದ್ದರೂ ಸಹೋದರರು ಕ್ರಿಕೆಟ್ ತರಬೇತಿ ಪಡೆಯುತ್ತಿದ್ದರು. ಈ ಮಧ್ಯೆ ತಂದೆಗೆ ನೆರವಾಗುವ ಉದ್ದೇಶದಿಂದ ಹಾರ್ದಿಕ್ ಆಟೋ ಓಡಿಸಿದ್ದರಂತೆ. ಜೊತೆಗೆ ಕಾರು ಡೀಲರ್ ಶಿಪ್ ಗಳಲ್ಲಿ ಕೆಲಸ ಮಾಡಿದ್ದರು.

ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ

ದೇಶೀಯ ಕ್ರಿಕೆಟ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಹೋದರರ ಆಟಕ್ಕೆ ಮನಸೋತು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಇವರನ್ನು ಖರೀದಿಸಿತು. ಈ ಅವಕಾಶವನ್ನು ಸದುಪಯೋಗಿಸಿಕೊಂಡ ಪಾಂಡ್ಯ ಸಹೋದರರು ಟೀಮ್ ಇಂಡಿಯಾ ತಂಡಕ್ಕೆ ಪ್ರವೇಶ ಗಿಟ್ಟಿಸಿಕೊಂಡರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೃನಾಲ್ ಅಷ್ಟಾಗಿ ಮೋಡಿ ಮಾಡದಿದ್ದರೂ ಹಾರ್ದಿಕ್ ಛಾಪು ಮೂಡಿಸಿ ತಂಡವನ್ನೂ ಮುನ್ನಡೆಸುತ್ತಿದ್ದು, ಭವಿಷ್ಯದ ಟಿಟ್ವೆಂಟಿ ತಂಡದ ನಾಯಕನಾಗುವ ಎಲ್ಲಾ ಸಾಧ್ಯತೆಗಳಿವೆ.

ಹಾರ್ದಿಕ್ ಆದಾಯ

ಸದ್ಯ ಹಾರ್ದಿಕ್ 91 ಕೊಟಿ ರೂ.ಗಿಂತ ಹೆಚ್ಚು ಆದಾಯ ಹೊಂದಿದ್ದಾರೆ. ಬಿಸಿಸಿಐ ಎ ಗ್ರೇಡ್ ಲಿಸ್ಟ್ ನಲ್ಲಿರುವ ಅವರು ವಾರ್ಷಿಕ 5 ಕೋಟಿ ರೂ. ಪಡೆಯುತ್ತಾರೆ. ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಒಂದು ಆವೃತ್ತಿಗೆ 15 ಕೋಟಿ ರೂ. ನೀಡುತ್ತದೆ. ಹೀಗೆ ಸತತ ಪರಿಶ್ರಮದಿಂದ ಪಾಂಡ್ಯ ಸಹೋದರರು ಇತರರಿಗೆ ಮಾದರಿಯಾಗಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *