ಜೀವನದಲ್ಲಿ ಪ್ರಗತಿ, ಸಂತೋಷ, ಸಮೃದ್ಧಿಯನ್ನು ಪಡೆದುಕೊಳ್ಳಬೇಕೇ..? – ಹಾಗಿದ್ದರೆ ಬುಧವಾರ ಈ ಕೆಲಸವನ್ನು ಮಾಡಿ..

ಜೀವನದಲ್ಲಿ ಪ್ರಗತಿ, ಸಂತೋಷ, ಸಮೃದ್ಧಿಯನ್ನು ಪಡೆದುಕೊಳ್ಳಬೇಕೇ..? – ಹಾಗಿದ್ದರೆ ಬುಧವಾರ ಈ ಕೆಲಸವನ್ನು ಮಾಡಿ..

ನ್ಯೂಸ್ ಆ್ಯರೋ : ಬುಧವಾರದ ದಿನವು ಗಣೇಶನ ಆರಾಧನೆಗೆ ಹೆಚ್ಚಿನ ಮಹತ್ವವನ್ನು ಹೊಂದಿದೆ. ಈ ದಿನ ಗಣಪತಿಯನ್ನು ವಿಧಿ – ವಿಧಾನಗಳ ಪ್ರಕಾರ ಪೂಜೆಯನ್ನು ಮಾಡುವುದರಿಂದ ಗಣಪತಿಯ ಅನುಗ್ರಹ ಸದಾಕಾಲ ನಿಮ್ಮ ಮೇಲಿರುತ್ತದೆ. ನೀವು ಯಾವುದೇ ಒಂದು ದುಃಖ ಅಥವಾ ತೊಂದರೆಗೆ ಒಳಗಾಗಿದ್ದರೆ, ನೀವು ಸಮಸ್ಯೆಗಳಿಂದ ಪರಿಹಾರಗಳನ್ನು ಕಂಡುಕೊಳ್ಳಲು ಬಯಸಿದರೆ ಬುಧವಾರದ ದಿನದಂದು ಮೊದಲು ಪೂಜ್ಯ ಗಣಪತಿಯನ್ನು ಪೂಜಿಸಿ ನಂತರ ಈ ಕೆಲಸಗಳನ್ನು ಮಾಡಿ. ಇದು ನಿಮ್ಮೆಲ್ಲಾ ಸಮಸ್ಯೆಗಳನ್ನು ದೂರಾಗಿಸುತ್ತದೆ ಎನ್ನುವ ನಂಬಿಕೆಯಿದೆ. ಅಷ್ಟು ಮಾತ್ರವಲ್ಲ, ಇದು ನಿಮ್ಮ ಕುಂಡಲಿಯಲ್ಲಿನ ಬುಧ ದೋಷವನ್ನು ಕೂಡ ದೂರಾಗಿಸುತ್ತದೆ. ಬುಧವಾರದ ದಿನದಂದು ನಾವು ಯಾವ ಕೆಲಸಗಳನ್ನು ಮಾಡಬೇಕು..? ಬುಧವಾರ ಇದನ್ನು ಮಾಡಿದರೆ ಶುಭ..!

1.ಬುಧವಾರದ ದಿನದಂದು ಪಠಿಸಬೇಕಾದ ಮಂತ್ರ

ಬುಧವಾರ ಬುಧ ಗ್ರಹದ ಮಂತ್ರಗಳನ್ನು ಪಠಿಸುವುದರಿಂದ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಮನಸ್ಸು ವಿಚಲಿತವಾಗುವುದನ್ನು ತಡೆಯುತ್ತದೆ ಮತ್ತು ನೀವು ಕೌಟುಂಬಿಕ ಶಾಂತಿ, ಉದ್ಯೋಗದಲ್ಲಿ ಪ್ರಗತಿ ಹಾಗೂ ವ್ಯಾಪಾರ, ವ್ಯವಹಾರದಲ್ಲಿ ಲಾಭವನ್ನು ಗಳಿಸಲು ಸಹಕಾರಿಯಾಗಿರುತ್ತದೆ.

ಬುಧವಾರ ಪಠಿಸಬೇಕಾದ ಬುಧ ಬೀಜ ಮಂತ್ರ

  • ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ
  • ಓಂ ಬುಂ ಬುಧಾಯ ನಮಃ ಅಥವಾ
  • ಓಂ ಏಂ ಶ್ರೀಂ ಶ್ರೀಂ ಬುಧಾಯ ನಮಃ
  • ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ
  • ಪ್ರಿಯಂಗುಕಲಿಕಾಶ್ಯಾಮಂ ರೂಪೇಣಾಪ್ರತಿಮಂ ಬುಧಂ|
    ಸೌಮ್ಯಂ ಸೌಮ್ಯ ಗುಣೋಪೇತಂ ತಂ ಬುಧಂ ಪ್ರಣಾಮ್ಯಹಂ||”

2.ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿ

ಬುಧವಾರದಂದು ಮೊದಲ ಪೂಜ್ಯ ಗಣೇಶನನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನ ಗಣಪತಿಗೆ ದುರ್ವಾ ಹುಲ್ಲನ್ನು ಅರ್ಪಿಸುವುದು ತುಂಬಾ ಶ್ರೇಯಸ್ಕರ. ಗಣಪತಿಯು ದೂರ್ವಾದಿಂದ ಬಹಳ ಸಂತೋಷಪಡುತ್ತಾನೆ ಮತ್ತು ನಿಮ್ಮ ಜೀವನದ ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಿಸುತ್ತಾನೆ. ಇದರೊಂದಿಗೆ ನಿಮ್ಮ ಎಲ್ಲಾ ದುಃಖಗಳನ್ನು ದೂರ ಮಾಡುತ್ತಾನೆ.

3.ಹಸುವಿಗೆ ಈ ವಿಶೇಷವಾದ ಆಹಾರವನ್ನು ನೀಡಿ

ಬುಧವಾರ ಹಸುವಿಗೆ ಹಸಿರು ಬಣ್ಣದ ತರಕಾರಿಗಳನ್ನು ಘ್ಡಬೇಕು. ಹಸಿರು ತರಕಾರಿಗಳು (ಪಾಲಕ್ ಖ್ಮಢ್ಯ ಹಸಿರು ಹುಲ್ಲನ್ನು ಗೋವುಗಳಿಗೆ ತಿನ್ನಲು ನೀಡುವುದರಿಂದ ನಿಮ್ಮ ಜಾತಕದಲ್ಲಿನ ಬುಧ ದೋಷವನ್ನು ತೊಡೆದು ಹಾಕುತ್ತದೆ ಮತ್ತು ನಿಮ್ಮ ಜಾತಕದಲ್ಲಿ ಬುಧನನ್ನು ಬಲಿಷ್ಟಗೊಳಿಸುತ್ತದೆ. ಬುಧ ಗ್ರಹವು ಬಲಗೊಂಡ ನಂತರ, ನಿಮ್ಮ ಎಲ್ಲಾ ಅಪೂರ್ಣ ಕೆಲಸಗಳು ಪೂರ್ಣಗೊಳ್ಳಲು ಪ್ರಾರಂಭವಾಗುತ್ತದೆ ಮತ್ತು ನೀವು ಜೀವನದಲ್ಲಿ ಪ್ರಗತಿಯನ್ನು ಸಾಧಿಸುತ್ತೀರಿ.

4.ಈ‌ ವಸ್ತುಗಳನ್ನು ದಾನ ಮಾಡಿ

ಬುಧವಾರದಂದು ಈ ವಸ್ತುಗಳನ್ನು ದಾನ ಮಾಡುವುದು ಹೆಚ್ಚು ಪ್ರಯೋಜನಗಳನ್ನು ಪಡೆದುಕೊಳ್ಳುವಿರಿ ಎಂದು ಹೇಳಲಾಗುತ್ತದೆ. ಬುಧವಾರ ಹಸಿರು ಬಣ್ಣದ ಹೆಸರು ಕಾಳುಗಳನ್ನು ದಾನ ಮಾಡುವುದು ತುಂಬಾ ಫಲಪ್ರದವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಬುಧನ ಸ್ಥಾನವು ಬಲಗೊಳ್ಳುತ್ತದೆ ಮತ್ತು ಗಣೇಶನ ಜೊತೆಗೆ ಭಗವಾನ್‌ ಶಿವನ ಆಶೀರ್ವಾದವೂ ನಿಮ್ಮ ಮೇಲಿರುತ್ತದೆ.

ಬುಧವಾರದ ದಿನದಂದು ನಾವು ಈ ಮೇಲಿನ ಕೆಲಸಗಳನ್ನು ಮಾಡುವುದರಿಂದ ಜೀವನದ ಪ್ರತಿಯೊಂದು ಸಮಸ್ಯೆಗಳಿಂದ, ಅಡೆತಡೆಗಳಿಂದ ಮುಕ್ತಿ ದೊರೆಯುತ್ತದೆ. ಇವುಗಳು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿಯನ್ನು ತುಂಬುವುದರಲ್ಲಿ ಯಾವುದೇ ಸಂಶಯವಿಲ್ಲ.

Related post

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್. ಡಿ. ರೇವಣ್ಣ; ಮೇ 14 ರವರೆಗೆ ನ್ಯಾಯಾಂಗ ಬಂಧನ

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್.…

ನ್ಯೂಸ್ ಆ್ಯರೋ : ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು…
TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

ನ್ಯೂಸ್ ಆ್ಯರೋ : ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಸ್ಪ್ಯಾಮ್ ಕರೆಗಳನ್ನು (Spam call) ತಡೆಯುವುದು ಇಂದು ದೊಡ್ಡ ಸಾಹಸ…
ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ ಮಾಡಿ

ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ…

ನ್ಯೂಸ್ ಆ್ಯರೋ : ಅಡುಗೆ, ಸಲಾಡ್, ಜ್ಯೂಸ್​ನಲ್ಲೂ ಬಳಸುವ ಸೌತೆಕಾಯಿಗಳು ಸೌಂದರ್ಯದ ದೃಷ್ಟಿಯಿಂದಲೂ ಬಹಳ ಕೊಡುಗೆ ನೀಡುತ್ತವೆ. ಈ ಪೌಷ್ಟಿಕ ತರಕಾರಿ ನಿಮ್ಮ ಚರ್ಮಕ್ಕೆ ಚಿಕಿತ್ಸೆ ನೀಡಲು ಉತ್ತಮ…

Leave a Reply

Your email address will not be published. Required fields are marked *